ರಸ್ತೆ ಅಪಘಾತಕ್ಕೆ ಬೈಕ್ ಸವಾರ ಬಲಿ, ಪತ್ನಿ ಮಕ್ಕಳಿಗೆ ಗಾಯ
![ರಸ್ತೆ ಅಪಘಾತಕ್ಕೆ ಬೈಕ್ ಸವಾರ ಬಲಿ, ಪತ್ನಿ ಮಕ್ಕಳಿಗೆ ಗಾಯ ರಸ್ತೆ ಅಪಘಾತಕ್ಕೆ ಬೈಕ್ ಸವಾರ ಬಲಿ, ಪತ್ನಿ ಮಕ್ಕಳಿಗೆ ಗಾಯ](https://www.varthabharati.in/sites/default/files/images/articles/2016/08/23/ksdf-(5).gif)
ಕಾಸರಗೋಡು, ಆ.23: ಬೈಕ್ ಕಾರು ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟು, ಪತ್ನಿ, ಇಬ್ಬರು ಮಕ್ಕಳು ಗಾಯಗೊಂಡ ಘಟನೆ ಸೋಮವಾರ ರಾತ್ರಿ ಉದುಮ ಪಳ್ಳಂನಲ್ಲಿ ನಡೆದಿದೆ.
ಮೃತಪಟ್ಟವರನ್ನು ತೆಕ್ಕಿಲ್ ಫೆರಿಯ ಟಿ.ಅಬ್ದುಲ್ ರವೂಫ್(38) ಎಂದು ಗುರುತಿಸಲಾಗಿದೆ. ಪತ್ನಿ ರುಕ್ಸಾನಾ ಮತ್ತು ಇಬ್ಬರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೇಕಲ ಮವ್ವಾಲ್ನಲ್ಲಿರುವ ಪತ್ನಿ ಮನೆಯಿಂದ ತೆಕ್ಕಿಲ್ಗೆ ಮರಳುತ್ತಿದ್ದಾಗ ಪಳ್ಳಂ ಬಿಎಸ್ಸೆನ್ನೆಲ್ ಕಚೇರಿ ಮುಂಭಾಗದಲ್ಲಿ ಅಳವಡಿಸಿರುವ ಸ್ಪೀಡ್ ಬ್ರೇಕರ್ ಬಳಿ ಬೈಕ್ ನಿಧಾನವಾಗಿ ಚಲಿಸುತ್ತಿದ್ದಾಗ ಮುಂದಿನಿಂದ ಬಂದ ಕಾರು ಬೈಕ್ಗೆ ಢಿಕ್ಕಿ ಹೊಡೆದಿದೆ.
ಗಂಭೀರ ಗಾಯಗೊಂಡ ರವೂಫ್ರನ್ನು ಕಾಸರಗೋಡು ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲಾಗಲಿಲ್ಲ. ರುಕ್ಸಾನ ಮತ್ತು ಓರ್ವ ಪುತ್ರನನ್ನು ಕಾಸರಗೋಡು ಮತ್ತು ಇನ್ನೊಂದು ಮಗುವನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೇಕಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story