ಶಿರೂರು: ಮೊಬೈಲ್ ಕಳವಿಗೆ ಯತ್ನ
ಬೈಂದೂರು, ಆ.23: ರಸ್ತೆ ಬದಿ ನಿಂತು ಮಾತನಾಡುತ್ತಿದ್ದ ವ್ಯಕ್ತಿಯೊಬ್ಬರ ಮೊಬೈಲ್ ಕಳವಿಗೆ ಯತ್ನಿಸಿದ ಘಟನೆ ಶಿರೂರು ರೈಲ್ವೆ ಸೇತುವೆ ಸಮೀಪ ಮಂಗಳವಾರ ಬೆಳಗ್ಗೆ ನಡೆದಿದೆ.
ಬಂಧಿತನನ್ನು ಸಂತೋಷ ಪೂಜಾರಿ ಎಂದು ಗುರುತಿಸಲಾಗಿದೆ. ಶಿರೂರು ಕೆಳಪೇಟೆಯ ರವೀಂದ್ರ ಶೆಟ್ಟಿ(46) ಎಂಬವರು ರೈಲ್ವೆ ಸೇತುವೆ ಬಳಿಯ ನಿಂತು ಮೊಬೈಲ್ನಲ್ಲಿ ಮಾತನಾಡುತ್ತಿರುವಾಗ ಹಿಂದಿನಿಂದ ಬಂದ ಸಂತೋಷ್ ಪೂಜಾರಿ, ರವೀಂದ್ರ ಶೆಟ್ಟಿ ಅವರ ಕೈಯಲ್ಲಿದ್ದ ಮೊಬೈಲ್ನ್ನು ಕಿತ್ತುಕೊಳ್ಳಲು ಯತ್ನಿಸಿದ್ದನು. ಆಗ ರವೀಂದ್ರ ಶೆಟ್ಟಿ ಬೊಬ್ಬೆ ಹಾಕಿದಾಗ ಆತ ಅಲ್ಲಿಂದ ಪರಾರಿಯಾದನು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story