ಕಾಸರಗೋಡು: ಖಾಸಗಿ ಬಸ್ಸು ಮುಷ್ಕರ ಮುಂದೂಡಿಕೆ
ಕಾಸರಗೋಡು,ಆ.25 : ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಆಗಸ್ಟ್ 30 ರಂದು ಕೇರಳ ರಾಜ್ಯವ್ಯಾಪಿ ನಡೆಸಲುದ್ದೇಶಿಸಿದ್ದ ಖಾಸಗಿ ಬಸ್ಸು ಮುಷ್ಕರವನ್ನು ಮುಂದೂಡಲಾಗಿದೆ. ಗುರುವಾರ ಸಂಜೆ ರಾಜ್ಯ ಸಾರಿಗೆ ಸಚಿವ ಎ . ಕೆ ಶಶೀ೦ದ್ರನ್ ರವರು
ಬಸ್ಸು ಮಾಲಕರ ಸಂಘದ ಪ್ರತಿನಿಧಿಗಳ ಜೊತೆ ನಡೆಸಿದ ಮಾತುಕತೆ ಹಿನ್ನಲೆಯಲ್ಲಿ ಮುಷ್ಕರ ಹಿಂತೆಗೆದುಕೊಳ್ಳಲು ತೀರ್ಮಾನಿಸಲಾಯಿತು . ರಸ್ತೆ ತೆರಿಗೆ ಏರಿಕೆ ಮತ್ತು ಬಸ್ಸು ಮಾಲಕರ ಎರಡು ಪ್ರಮುಖ ಬೇಡಿಕೆಗಳ ಬಗ್ಗೆ ಸೆಪ್ಟ೦ಬರ್ ಮೂರರ ಸಮಿತಿ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಸಚಿವರ ಭರವಸೆಯಂತೆ ಮುಷ್ಕರ ಮುಂದೂಡಲು ಮಾಲಕರ ಸಂಘವು ತೀರ್ಮಾನ ತೆಗೆದುಕೊಂಡಿದೆ
Next Story