ಬಡಗಬೆಟ್ಟು: ಯುವಕ ನಾಪತ್ತೆ
![ಬಡಗಬೆಟ್ಟು: ಯುವಕ ನಾಪತ್ತೆ ಬಡಗಬೆಟ್ಟು: ಯುವಕ ನಾಪತ್ತೆ](https://www.varthabharati.in/sites/default/files/images/articles/2016/08/25/UD-A25 Nagaraj.jpg)
ಉಡುಪಿ, ಆ.25: ಇಲ್ಲಿನ ಬಡಗಬೆಟ್ಟು ಗ್ರಾಮದಲ್ಲಿ ಯುವಕನೋರ್ವ ನಾಪತ್ತೆಯಾದ ಬಗ್ಗೆ ಪ್ರಕರಣ ದಾಖಲಾಗಿದೆ. ನಾಪತ್ತೆಯಾದವರು ವಾಸುದೇವ ಆಚಾರ್ಯ ಎಂಬವರ ಪುತ್ರ ನಾಗರಾಜ (34). ಇವರು ಆ.22ರಂದು ಬೆಳಗ್ಗೆ ಮನೆಯಿಂದ ಹೋದವರು ವಾಪಸ್ ಬಾರದೆ ನಾಪತ್ತೆಯಾಗಿದ್ದಾರೆ.
5 ಅಡಿ 6 ಇಂಚು ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆ ಕಪ್ಪು ಮೈಬಣ್ಣ, ದುಂಡು ಮುಖ ಹೊಂದಿದ್ದಾರೆ. ನೀಲಿ ಬಣ್ಣದ ತುಂಬು ತೋಳಿನ ಅಂಗಿ ಹಾಗೂ ಕಪ್ಪುಬಣ್ಣದ ಪ್ಯಾಂಟ್ ಧರಿಸಿದ್ದು, ಕನ್ನಡ ಹಾಗೂ ತುಳು ಭಾಷೆ ಬಲ್ಲವರಾಗಿದ್ದಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story