Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಶೂಟರ್ ಮಗಳಿಗಾಗಿ 5 ಲಕ್ಷ ರೂ. ಬೆಲೆಯ...

ಶೂಟರ್ ಮಗಳಿಗಾಗಿ 5 ಲಕ್ಷ ರೂ. ಬೆಲೆಯ ಜರ್ಮನ್ ರೈಫಲ್ ಖರೀದಿಸಿದ ಬಡ ರಿಕ್ಷಾ ಚಾಲಕ!

ವಾರ್ತಾಭಾರತಿವಾರ್ತಾಭಾರತಿ26 Aug 2016 7:41 PM IST
share
ಶೂಟರ್ ಮಗಳಿಗಾಗಿ 5 ಲಕ್ಷ ರೂ. ಬೆಲೆಯ ಜರ್ಮನ್ ರೈಫಲ್ ಖರೀದಿಸಿದ ಬಡ ರಿಕ್ಷಾ ಚಾಲಕ!

ಇದನ್ನು ನೀವು ತ್ಯಾಗವೆಂದು ಕರೆಯಿರಿ ಇಲ್ಲ ವಾತ್ಸಲ್ಯ ಎಂದಾದರೂ ಕರೆಯಿರಿ.... ರಾಷ್ಟ್ರೀಯ ಮಟ್ಟದ ಶೂಟರ್ ಆಗಿರುವ ತನ್ನ ಏಕೈಕ ಪುತ್ರಿಗಾಗಿ ಅಹ್ಮದಾಬಾದ್‌ನ ರಿಕ್ಷಾ ಚಾಲಕ ಮಣಿಲಾಲ್ ಗೋಹಲ್, ಬರೋಬ್ಬರಿ 5 ಲಕ್ಷ ರೂ. ವೌಲ್ಯದ ಜರ್ಮನಿ ನಿರ್ಮಿತ ರೈಫಲ್‌ನ್ನು ಖರೀದಿಸಿದ್ದಾನೆ. ಮಗಳ ಮದುವೆಗಾಗಿ ಕಷ್ಟಪಟ್ಟು ಕೂಡಿಟ್ಟ ಹಣದಿಂದಲೇ ಆತ ಈ ರೈಫಲ್ ಖರೀದಿಸಿದ್ದಾನೆ. ತನ್ನ ಮಗಳು ಅತ್ಯುತ್ತಮ ಶೂಟರ್ ಆಗಿ ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಬೇಕೆಂಬ ಕನಸನ್ನು ಹೊತ್ತಿರುವ ಮಣಿಲಾಲ್, ಈ ದುಬಾರಿ ವೆಟ್ಚದ ರೈಫಲನ್ನು ಆಕೆಗೆ ನೀಡಿದ್ದಾನೆ.
  ಮಣಿಲಾಲ್ ತನ್ನ ಮಗಳು ಮಿತ್ತಲ್ ಜೊತೆ, ಈ ಹೊಸ ಗನ್‌ಗೆ ಪರವಾನಗಿ ಪಡೆಯಲು ಸ್ಥಳೀಯ ಪೊಲೀಸ್ ಆಯುಕ್ತರ ಬಳಿಗೆ ತೆರಳಿದಾಗ, ಅಲ್ಲಿದ್ದ ಪೊಲೀಸ್ ಅಧಿಕಾರಿಗಳಿಗೆ ರಿಕ್ಷಾ ಚಾಲಕನೊಬ್ಬ ಇಷ್ಟು ದೊಡ್ಡ ದುಬಾರಿಯಾದ ರೈಫಲ್‌ನ್ನು ಖರೀದಿಸಿದ್ದನ್ನು ಕಂಡು ಅಚ್ಚರಿಗೊಂಡರು. ಅದೃಷ್ಟವಶಾತ್ ಪೊಲೀಸರು, ಯಾವುದೇ ತಕರಾರಿಲ್ಲದೆ ತಂದೆ,ಮಗಳಿಗೆ ಗನ್‌ಲೈಸೆನ್ಸ್ ಪಡೆದುಕೊಳ್ಳಲು ನೆರವಾದರು ಹಾಗೂ ಮಗಳಿಗಾಗಿ ಮಣಿಲಾಲ್‌ನ ತ್ಯಾಗವನ್ನು ತುಂಬುಹೃದಯದಿಂದ ಪ್ರಶಂಸಿಸಿದರು.
   ‘‘ನನ್ನ ಈ ದುಬಾರಿಯಾದ ಹವ್ಯಾಸವನ್ನು ಪ್ರೋತ್ಸಾಹಿಸಲು ನನ್ನ ತಂದೆ ಹಾಗೂ ಕುಟುಂಬ ಸಾಕಷ್ಟು ತ್ಯಾಗ ಮಾಡಿದ್ದಾರೆ. ಈ ರೈಫಲ್ ಪಡೆದ ಆನಂತರ ನಾನು ದೇಶದ ಅಂತಾರಾಷ್ಟ್ರೀಯ ಮಟ್ಟದ ಶೂಟಿಂಗ್ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಕಠಿಣವಾಗಿ ಶ್ರಮಿಸುವುದಾಗಿ ಮಿತ್ತಲ್ ತಿಳಿಸಿದ್ದಾಳೆ.
  ಮಣಿಲಾಲ್‌ನ ಅಟೋರಿಕ್ಷಾ ವೃತ್ತಿಯನ್ನೇ ಅವಲಂಭಿಸಿರುವ ಕುಟುಂಬಕ್ಕೆ, ಆಕೆಯ ದುಬಾರಿಯದ ಶೂಟಿಂಗ್ ಹವ್ಯಾಸಕ್ಕೆ ಬೇಕಾದ ಖರ್ಚುವೆಚ್ಚಗಳನ್ನು ಸರಿದೂಗಿಸುವುದು ಅಸಾಧ್ಯವಾಗಿತ್ತು.ಆದರೂ ಮಣಿಲಾಲ್ ತನ್ನ ಪ್ರೀತಿಯ ಮಗಳಿಗೆ ಶೂಟಿಂಗ್‌ನಲ್ಲಿ ತರಬೇತಿ ಪಡೆಯುವುದಕ್ಕಾಗಿ ಆಕೆಯನ್ನು ರೈಫಲ್ ಕ್ಲಬ್‌ಗೆ ಸೇರ್ಪಡೆಗೊಳಿಸಿದ್ದ ಹಾಗೂ ಆಕೆಗೆ ಬಾಡಿಗೆಯ ರೈಫಲೊಂದನ್ನು ಕೂಡಾ ಒದಗಿಸಿದ್ದ.
 ಅಹ್ಮದಾಬಾದ್‌ನ ಗೋಮತಿ ಪ್ರದೇಶದ ಬಡಾವಣೆಯೊಂದರಲ್ಲಿ ತನ್ನ ಪಾಲಕರು ಹಾಗೂ ಇಬ್ಬರು ಸಹೋದರರೊಂದಿಗೆ ವಾಸಿಸುತ್ತಿರುವ ಮಿತ್ತಲ್ ಕಳೆದ ನಾಲ್ಕು ವರ್ಷಗಳಿಂದ ಶೂಟಿಂಗ್ ಅಭ್ಯಾಸ ಮಾಡುತ್ತಿದ್ದಾರೆ. 2013ರಲ್ಲಿ ಅತ್ಯಂತ ಕನಿಷ್ಠ ಮಟ್ಟದ ತರಬೇತಿಯ ಹೊರತಾಗಿಯೂ ಮಿತ್ತಲ್ 57ನೇ ಅಖಿಲ ಭಾರತ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಂಡಿದ್ದ ಆಕೆ ಕಂಚಿನ ಪದಕ ಗೆದ್ದಿದ್ದಳು.
  ರಾಷ್ಟ್ರೀಯ ಮಟ್ಟದ ಸ್ಪರ್ಧಾಕೂಟದಲ್ಲಿ ಭಾಗವಹಿಸಿದ ಬಳಿಕ ಮಿತ್ತಲ್‌ಳ ಆತ್ಮವಿಶ್ವಾಸ ಹೆಚ್ಚಿತು. ಆದರೆ ತನ್ನ ಹೆಸರಿನಲ್ಲಿ ರೈಫಲ್ ಇಲ್ಲದೆ ತರಬೇತಿ ಪಡೆಯುವುದು ಅಥವಾ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಬೇರೆಡೆಗೆ ಪ್ರಯಾಣಿಸುವುದು ತೀರಾ ಕಷ್ಟಕರವೆಂದು ಆಕೆಗೆ ಅರಿವಾಯಿತು. ಹೀಗಾಗಿ, ತಂದೆ ಮಣಿಲಾಲ್ ಹಾಗೂ ಹಿರಿಯ ಸಹೋದರ ಜೈನೀಶ್ ಆಕೆಯ ಮದುವೆಗಾಗಿ ಕೂಡಿಟ್ಟ ಹಣದಿಂದಲೇ ದುಬಾರಿಯಾದ 50 ಮೀಟರ್ ವ್ಯಾಪ್ತಿಯ ಜರ್ಮನ್ ರೈಫಲ್ ತೆಗೆಸಿಕೊಟ್ಟರು.
    ಮಿತ್ತಲ್‌ಗೆ ಶೂಟಿಂಗ್ ಹವ್ಯಾಸವಾದರೂ, ಭಾರತೀಯ ಸೇನೆಯನ್ನು ಸೇರಬೇಕೆಂಬ ಭಾರೀ ದೊಡ್ಡ ಹಂಬಲವನ್ನು ಹೊಂದಿದ್ದಾಳೆ. ಆದರೆ ಕುಳ್ಳಗಿರುವ ಕಾರಣ ಸೇನೆಗೆ ಸೇರಲು ಆಕೆಗೆ ಸಾಧ್ಯವಾಗಿಲ್ಲ. ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಪರೀಕ್ಷೆಯಲ್ಲಿಯೂ ಆಕೆ ತೇರ್ಗಡೆಯಾಗಿದ್ದಾಳೆ, ಆದರೆ ಎತ್ತರದ ಕೊರತೆಯ ಕಾರಣ ಆ ಹುದ್ದೆಗೂ ಆಕೆ ನೇಮಕವಾಗಿಲ್ಲ. ಮಿತ್ತಲ್‌ಳ ಕಿರಿಯ ಸಹೋದರ ಮಿತೇಶ್ ಕೂಡಾ ಪಿಸ್ತೂಲ್ ಶೂಟರ್ ಆಗಲು ಪ್ರಯತ್ನಿಸುತ್ತಿದ್ದಾನೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X