Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ‘ಅ’ ಇಲ್ಲದ ಈಶ್ವರಪ್ಪನವರ ‘ಹಿಂದ’ ಚಳವಳಿ!

‘ಅ’ ಇಲ್ಲದ ಈಶ್ವರಪ್ಪನವರ ‘ಹಿಂದ’ ಚಳವಳಿ!

ಕು.ಸ.ಮಧುಸೂದನ ನಾಯರ್ಕು.ಸ.ಮಧುಸೂದನ ನಾಯರ್27 Aug 2016 11:03 PM IST
share
‘ಅ’ ಇಲ್ಲದ ಈಶ್ವರಪ್ಪನವರ ‘ಹಿಂದ’ ಚಳವಳಿ!

ಯಡಿಯೂರಪ್ಪನವರ ನಾಗಾಲೋಟಕ್ಕೆ ಸಂಘಪರಿವಾರದ ಕಡಿವಾಣ?

ಸರಿಸುಮಾರು ಹನ್ನೆರಡು ವರ್ಷಗಳ ನಂತರ ಮತ್ತೆ ‘‘ಅಹಿಂದ’’ ಸುದ್ದಿ ಮತ್ತು ಸದ್ದು ಎರಡನ್ನೂ ಮಾಡುತ್ತಿದೆ. ವ್ಯತ್ಯಾಸವೆಂದರೆ 2005ರ ಸುಮಾರಿನ ‘ಅಹಿಂದ’ ಇವತ್ತು ಇಲ್ಲವಾಗಿ ಕೇವಲ ‘ಹಿಂದ’ ಮಾತ್ರ ರಾರಾಜಿಸುತ್ತಿದೆ. ಹಳೆಯ ‘ಅಹಿಂದ’ದಲ್ಲಿ ಅಲ್ಪಸಂಖ್ಯಾತರನ್ನು ಪ್ರತಿನಿಸುವ ‘ಅ’ವನ್ನು ಉದ್ದೇಶಪೂರ್ವಕವಾಗಿಯೇ ಕೈಬಿಡಲಾಗಿದೆ. ಯಾಕೆಂದರೆ ಈ ಬಾರಿ ‘ಹಿಂದ’ ಚಳವಳಿಯನ್ನು ಮರು ಪ್ರಾರಂಭಿ ಸಲು ಹೊರಟಿರುವುದು ಸಂಘಪರಿವಾರದ ಕಟ್ಟಾಳುವೂ, ಭಾಜಪದ ಪ್ರಮುಖನಾಯಕರೂ ಆದ ಈಶ್ವರಪ್ಪನವರು. ಹಾಗಾಗಿ ಯಾವ ಅಲ್ಪಸಂಖ್ಯಾತ ವಿರೋ ನೀತಿಯ ಸಂಘಟನೆಗಳ ನೆರಳಲ್ಲಿಯೇ ತಮ್ಮ ತಮ್ಮ ರಾಜಕಾರಣ ಮಾಡುತ್ತಾ ಬಂದರೋ, ಆ ಈಶ್ವರಪ್ಪನವ ರಿಂದ ‘ಹಿಂದ’ ಚಳವಳಿಯಲ್ಲಿ ಅಲ್ಪಸಂಖ್ಯಾತ ವರ್ಗವೂ ಸೇರಿರುತ್ತದೆ ಯೆಂದು ನಂಬುವುದು ಮೂರ್ಖತನವಾಗುತ್ತದೆ. ಹಾಗಿದ್ದರೆ ಇವತ್ತೇನು ಈಶ್ವರಪ್ಪನವರು ಸಂಗೊಳ್ಳಿರಾಯಣ್ಣ ಬ್ರಿಗೇಡ್ ಮೂಲಕ ಹಿಂದ ಚಳವಳಿಯ ಬಗ್ಗೆ ಹೇಳುತ್ತಿ ದ್ದಾರೆಯೋ ಅದಕ್ಕೂ ಈ ಹಿಂದೆ ಜಾತ್ಯತೀತ ಜನತಾದಳದಲ್ಲಿದ್ದಾಗ ಸಿದ್ದರಾಮಯ್ಯನವರು ‘ಅಹಿಂದ’ ಚಳವಳಿಯನ್ನು ಪುನಶ್ಚೇತನಗೊಳಿಸಿದ್ದಕ್ಕೂ ಇರುವ ಮುಖ್ಯ ವ್ಯತ್ಯಾಸವನ್ನು ನಾವಿಲ್ಲಿ ಗಮನಿಸಬೇಕಾಗಿದೆ.

ಈ ಹಿಂದೆ ಸಿದ್ದರಾಮಯ್ಯನವರು ‘ಅಹಿಂದ’ವನ್ನು ಪುನಶ್ಚೇತನಗೊಳಿ ಸಲು ಅವರಿಗೊಂದು ರಾಜಕೀಯ ಅನಿವಾರ್ಯತೆಯಿತ್ತು. ಜಾತ್ಯತೀತ ಜನತಾದಳದಲ್ಲಿ ತಮ್ಮನ್ನು ಮುಖ್ಯಮಂತ್ರಿ ಮಾಡದೆ ಉಪಮುಖ್ಯಮಂತ್ರಿ ಪಟ್ಟಕ್ಕೆ ಸೀಮಿತಗೊಳಿಸಿದ ಮಾಜಿ ಪ್ರಧಾನಿಯೂ, ಜಾತ್ಯತೀತ ಜನತಾದಳದ ಅಧ್ಯಕ್ಷರೂ ಆದ ದೇವೇಗೌಡರ ವಿರುದ್ಧ ಸಿಡಿದು ನಿಂತು ತನ್ನ ರಾಜಕೀಯ ಅಸ್ತಿತ್ವವನ್ನು ಸಾಬೀತು ಪಡಿಸುವ ಜರೂರತ್ತು ಅವತ್ತು ಸಿದ್ದರಾಮಯ್ಯನವರ ಮುಂದಿತ್ತು. ಜೊತೆಗೆ ಸರದಿಯಂತೆ ಅಕಾರ ಅನುಭವಿಸುತ್ತಿದ್ದ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದ ಪಾರುಪತ್ಯವನ್ನು ಕೊನೆಗಾಣಿಸಿ ‘ಅಹಿಂದ’ವನ್ನು ಅಕಾರದ ಸನಿಹಕ್ಕೆ ತರುವ ಒಂದು ಹೊಣೆಗಾರಿಕೆಯೂ ಅವರಿಗಿತ್ತು. ದುರಂತವೆಂದರೆ ಅವರು ಹೀಗೆ ‘ಅಹಿಂದ’ದ ಪರವಾಗಿ ನಿಂತಾಗ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದವರು ಹಿಂದುಳಿದ ವರ್ಗದವರೇ ಆಗಿದ್ದ ಧರಂಸಿಂಗ್ ಅವರು. ಆದರೆ ಅವರು ತಮ್ಮ ಅಕಾರ ನಡೆಸುವಲ್ಲಿ ಸಂಪೂರ್ಣವಾಗಿ ಜನತಾದಳದ ದೇವೇಗೌಡರ ಕಪಿಮುಷ್ಟಿಯಲ್ಲಿ ಸಿಲುಕಿಹಾಕಿಕೊಂಡಿದ್ದರು.

   ಹೀಗಾಗಿ ರಾಜಕೀಯವಾಗಿ ತಮಗಿರುವ ಜನಸಮುದಾಯದ ಬೆಂಬಲವನ್ನೂ, ‘ಅಹಿಂದ’ ವರ್ಗಗಳ ತಾಕತ್ತನ್ನು ತೋರಿಸಲು ಸಿದ್ದರಾಮಯ್ಯನವರಿಗೆ ಬೇಕಾಗಿದ್ದ ವೇದಿಕೆಯೊಂದನ್ನು ರಚಿಸಿಕೊಳ್ಳುವ ಕಷ್ಟ ಎದುರಾಗಲಿಲ್ಲ. ಯಾಕೆಂದರೆ ಅಲ್ಲಿಗಾಗಲೇ ಕರ್ನಾಟಕದಲ್ಲಿ ತನ್ನ ಅಸ್ತಿತ್ವವನ್ನು ಪಡೆದಿದ್ದ ‘ಅಹಿಂದ’ವನ್ನು ಪುನರುಜ್ಜೀವನಗೊಳಿಸಿದ ಸಿದ್ದರಾಮಯ್ಯನವರು ಅದಕ್ಕೊಂದು ತಾರಾ ಮೆರುಗನ್ನು ನೀಡಿದ್ದರು. ಅದಾಗಲೇ ಕಾಂಗ್ರೆಸ್‌ನಿಂದ ದೂರಸರಿದಿದ್ದ ಒಕ್ಕಲಿಗ ಮತ್ತು ಲಿಂಗಾಯತ ರಾಜಕೀಯ ಶಕ್ತಿಗಳೆದುರು ‘ಅಹಿಂದ’ ಎದ್ದುನಿಂತು ಕಾಂಗ್ರೆಸ್‌ಗೆ ಬೆಂಬಲ ನೀಡುವ ಎಲ್ಲ ಸೂಚನೆಯನ್ನು ನೀಡಿತು. ನಂತರ ಸಿದ್ದರಾಮಯ್ಯನವರು ಕಾಂಗ್ರೆಸ್‌ಗೆ ಹೋದರು. 2013ರಲ್ಲಿ ನಡೆದ ರಾಜ್ಯವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಕಾರಕ್ಕೆ ಬರುವಲ್ಲಿ ಈ ‘ಅಹಿಂದ’ ವರ್ಗದ ಬೆಂಬಲವೇ ಮುಖ್ಯ ಕಾರಣವಾಗಿತ್ತು. ಅಲ್ಲಿಗೆ ‘ಅಹಿಂದ’ದ ಮೂಲಕ ಸಿದ್ದರಾಮಯ್ಯನವರು ಎರಡು ವಿಚಾರಗಳನ್ನು ಸಾಸಿ ತೋರಿಸಿದ್ದರು. ಒಂದು, ‘ಅಹಿಂದ’ ವರ್ಗಗಳು ಒಟ್ಟಾಗಿ ನಿಂತರೆ, ತಾವೇ ಒಂದು ಪ್ರಬಲ ಶಕ್ತಿಯಾಗಿ ಅಕಾರ ಹಿಡಿಯಬಹುದು ಎನ್ನುವುದು. ಎರಡನೆಯದು, ತಾವು ದೇವೇಗೌಡರು ಹಾಗೂ ಯಡಿಯೂರಪ್ಪನವರಂತೆ ಒಂದು ಜಾತಿಯ ನಾಯಕರಾಗಿರದೆ ಒಟ್ಟಾರೆ ‘ಅಹಿಂದ’ ವರ್ಗಗಳ ನಾಯಕರಾಗಿದ್ದೇನೆಂಬುದು. ಹೀಗೆ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆದ ಸಿದ್ದರಾಮಯ್ಯನವರಿಗೆ ‘ಅಹಿಂದ’ ಅನಿವಾರ್ಯವಾಗಿತ್ತು, ನಿಜ. ತಮ್ಮ ರಾಜಕೀಯ ಶಕ್ತಿಯ ಪ್ರದರ್ಶನಕ್ಕೆ ಅದನ್ನು ವೇದಿಕೆಯನ್ನಾಗಿ ಬಳಸಿಕೊಂಡಿದ್ದರೂ ಸಹ, ಆ ಹೊತ್ತಿಗಾಗಲೇ ಅವರಿಗಿದ್ದ ಜನಬೆಂಬಲವನ್ನು ‘ಅಹಿಂದ’ ಪರವಾಗಿ ಬಳಸಿಕೊಂಡು ‘ಅಹಿಂದ’ ವರ್ಗಗಳಿಗೆ ಅಕಾರ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಹೀಗಾಗಿ ಸಿದ್ದರಾಮಯ್ಯನವರ ಸ್ವಾರ್ಥ ರಾಜಕಾರಣದ ಹೊರತಾಗಿಯೂ ‘ಅಹಿಂದ’ಕ್ಕೆ ಪ್ರಾಮಾಣಿಕವಾಗಿ ದುಡಿದ ಮತ್ತು ಆ ವರ್ಗಗಳಿಗೊಂದು ರಾಜಕೀಯ ಅಕಾರ ತಂದುಕೊಟ್ಟ ಕೀರ್ತಿಯೂ ಸೇರುತ್ತದೆ.

ಇನ್ನು ಇವತ್ತು ಮಾಜಿ ಉಪಮುಖ್ಯಮಂತ್ರಿಯೂ, ಭಾಜಪದ ನಾಯ ಕರೂ ಆದ ಈಶ್ವರಪ್ಪನವರ ಹಿಂದ ಚಳವಳಿಯ ಬಗ್ಗೆ ನೋಡೋಣ: ಯಡಿಯೂರಪ್ಪನವರು ಭಾಜಪದ ರಾಜ್ಯಾಧ್ಯಕ್ಷರಾದ ತಕ್ಷಣ ಇಡೀ ಭಾಜಪವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಕ್ರಿಯೆಗೆ ಚಾಲನೆ ನೀಡಿದರು. ಜೊತೆಗೆ ಈ ಹಿಂದೆ ತಾವು ಕೆಜೆಪಿ ಕಟ್ಟಿದಾಗ ತಮ್ಮಿಂದಿಗೆ ಬಾರದೆ ತಮ್ಮನ್ನು ಕಟುವಾಗಿ ಟೀಕಿಸಿದ್ದ ಭಾಜಪದ ನಾಯಕರ ವಿರುದ್ಧ ಸೇಡಿನ ಕ್ರಮಕ್ಕೆ ಮುಂದಾದರು. ಇದರ ಭಾಗವಾಗಿ ಅವರು ಪಕ್ಷದ ಪದಾಕಾರಿಗಳ ಪಟ್ಟಿ ರಚಿಸುವಾಗ ಭಾಜಪದ ಇತರ ಯಾವುದೇ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಹಾಗೂ ತಾವು ಹಿಂದೆ ಕೆಜೆಪಿ ಕಟ್ಟಿದಾಗ ತಮ್ಮ ಜೊತೆಗಿದ್ದ ಬಹಳಷ್ಟು ನಾಯಕರಿಗೆ ಭಾಜಪದ ಪದಾಕಾರಿಗಳನ್ನಾಗಿ ಮಾಡಿದರು. ಯಡಿಯೂರಪ್ಪನವರ ಆಪ್ತವಲಯಕ್ಕೆ ಮಾತ್ರ ಅನುಕೂಲಕರವಾಗಿದ್ದ ಇಂತಹದೊಂದು ಪದಾಕಾರಿಗಳ ಪಟ್ಟಿ ಬಿಡುಗಡೆಯಾದಾಗ ಇದನ್ನು ನಿರೀಕ್ಷಿಸಿದ್ದವರಿಗೂ ಅಚ್ಚರಿಯಾಗುವಷ್ಟು ಜನ ಯಡಿಯೂರಪ್ಪನವರ ಬೆಂಬಲಿಗರೇ ತುಂಬಿದ್ದರು.

ಇದು ಭಾಜಪದೊಳಗಿನ ಯಡಿಯೂರಪ್ಪನವರ ವಿರೋ ಬಣಕ್ಕೆ ನುಂಗಲಾರದ ತುತ್ತಾಯಿತು. ಆದರೆ ಯಡಿಯೂರಪ್ಪನವರ ಹಟಮಾರಿ ಧೋರಣೆ ಹಾಗೂ ಕೋಪದ ಬಗ್ಗೆ ಅರಿವಿದ್ದ ನಾಯಕರ್ಯಾರು ಅವರ ವಿರುದ್ಧ ಧ್ವನಿಯೆತ್ತುವ ಧೈರ್ಯ ಮಾಡಲಿಲ್ಲ. ಆದರೆ ಭಾಜಪ ಅಕಾರದಲ್ಲಿ ಇದ್ದಾಗಿನಿಂದಲೂ ಯಡಿಯೂರಪ್ಪನವರ ಬಗ್ಗೆ ನೇರಾನೇರಾ ಮಾತಾಡುತ್ತಿದ್ದ ಈಶ್ವರಪ್ಪನವರು ಮಾತ್ರ ಸುಮ್ಮನೇ ಕೂರಲಿಲ್ಲ. ಬದಲಿಗೆ ಇದರ ಬಗ್ಗೆ ಮಾಧ್ಯಮಗಳ ಎದುರೇ ಹೇಳಿಕೆ ನೀಡಿದರು. ಅವರ ಇಂತಹ ಆಕ್ರೋಶಕ್ಕೂ ಸೂಕ್ತ ಕಾರಣವಿತ್ತು. ಅದೆಂದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಸೋಲಿಗೆ ಕಾರಣರಾಗಿದ್ದ ರುದ್ರೇಗೌಡರನ್ನು ಶಿವಮೊಗ್ಗ ಜಿಲ್ಲಾ ಭಾಜಪದ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಇದರಿಂದ ತಮ್ಮ ಜಿಲ್ಲೆಯಲ್ಲಿಯೇ ತಮಗೆ ಅವಮಾನ ಮಾಡಲಾಗಿದೆಯೆಂಬ ಕೋಪ ಈಶ್ವರಪ್ಪನವರನ್ನು ಉದ್ರಿಕ್ತಗೊಳಿಸಿದ್ದು ನಿಜ.

ಆದರೆ ವಾಸ್ತವ ಇದಕ್ಕಿಂತ ಭಿನ್ನವಿದೆ. ಯಾಕೆಂದರೆ ಪಕ್ಷದೊಳಗಿನ ಉಳಿದ ನಾಯಕರ ಸಂಪೂರ್ಣ ಬೆಂಬಲವಿಲ್ಲದೆ ಈಶ್ವರಪ್ಪನವರು ಯಡಿಯೂರಪ್ಪನವರ ವಿರುದ್ಧ ಈ ಮಟ್ಟದಲ್ಲಿ ಧ್ವನಿಯೆತ್ತುವುದು ಕಷ್ಟದ ಮಾತು. ಇದಕ್ಕೆ ತಕ್ಕ ಹಾಗೆ ಈಗ ಈಶ್ವರಪ್ಪನವರು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮೂಲಕ ತಾವು ‘ಹಿಂದ’ (ಹಿಂದುಳಿದ ಮತ್ತು ದಲಿತ) ಚಳವಳಿಗೆ ಜನ್ಮ ನೀಡಿ ಅವರ ಅಭಿವೃದ್ಧಿಗಾಗಿ ಹೋರಾಡುವ ಮಾತಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಅವರು ಈ ಸಮುದಾಯಗಳ ಅನೇಕ ನಾಯಕರ ಜೊತೆ ಸಭೆಗಳನ್ನು ನಡೆಸುತ್ತಿದ್ದು, ಸಕ್ರಿಯವಾಗಿ ತಾವು ಬ್ರಿಗೇಡಿನ ಪದಾಕಾರಿಯಾಗದೆ ಹೋದರೂ ಹಿನ್ನೆಲೆಯಲ್ಲಿ ನಿಂತು ಅದರ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿದ್ದಾರೆ. ಸರಿಯಾಗಿ ವಿಶ್ಲೇಷಿಸಿ ನೋಡಿದರೆ ಈಶ್ವರಪ್ಪನವರ ಈ ನಡೆಯ ಹಿಂದೆ ಯಡಿಯೂರಪ್ಪನವರ ನಾಗಾಲೋಟಕ್ಕೆ ತಡೆಯೊಡ್ಡಲು ಸಂಘಪರಿವಾರ ನಡೆಸುತ್ತಿರುವ ಚಾಣಕ್ಯ ನಡೆಯ ಒಂದು ಭಾಗವೇ ಈಶ್ವರಪ್ಪನವರ ‘ಹಿಂದ’ ಚಳವಳಿಯ ಮಾತುಗಳು. ಯಾಕೆಂದರೆ ಲಿಂಗಾಯತರ ಮತಬ್ಯಾಂಕಿನ ಏಕೈಕ ಕಾರಣಕ್ಕೆ ಮತ್ತು ಮುಂದಿನ ವಿಧಾನಸಭಾ ಚುನಾವಣೆಗಳಲ್ಲಿ ಅಕಾರ ಹಿಡಿಯುವ ಉದ್ದೇಶದಿಂದ ಯಡಿಯೂರಪ್ಪನವರಿಗೆ ರಾಜ್ಯಾಧ್ಯಕ್ಷ ಪದವಿ ನೀಡಿದ ಭಾಜಪದ ಹೈಕಮಾಂಡ್, ಇದೀಗ ಕೈ ಕೈ ಹಿಸುಕಿಕೊಳ್ಳುವ ಸನ್ನಿವೇಶ ನಿರ್ಮಾಣವಾಗಿದೆ. ಯಾಕೆಂದರೆ ಅಧ್ಯಕ್ಷ ಪದವಿ ದೊರೆತ ತಕ್ಷಣವೇ ಯಡಿಯೂರಪ್ಪನವರ ರಾಜಕಾರಣದ ನಡೆಗಳೇ ಬದಲಾಗಿತ್ತು. ಉಳಿದೆಲ್ಲ ರಾಜ್ಯಮಟ್ಟದ ನಾಯಕರನ್ನು ಪಕ್ಕಕ್ಕೆ ಸರಿಸಿ ತಮ್ಮ ಬೆಂಬಲಿಗರನ್ನು ಆಯಕಟ್ಟಿನ ಜಾಗದಲ್ಲಿ ಕೂರಿಸುವ ಅವರ ಆಸೆಗೆ ಅನುಗುಣವಾಗಿಯೇ ಪದಾಕಾರಿಗಳ ಪಟ್ಟಿ ತಯಾರಾಗಿತ್ತು. ಜೊತೆಗೆ ಮುಂದಿನ ವಿಧಾನಸಭೆಗೆ ಟಿಕೆಟು ನೀಡುವಾಗ ತಮ್ಮ ಬೆಂಬಲಿಗರಿಗೆ ಹೆಚ್ಚು ಸ್ಥಾನ ದೊರೆಯುವಂತೆ ಮಾಡಲು ಸಹ ಈ ಪದಾಕಾರಿಗಳ ಪಟ್ಟಿ ಸಹಾಯಕವಾಗುವಂತಿತ್ತು. ಯಡಿಯೂರಪ್ಪನವರ ಈ ಮಹತ್ವಾಕಾಂಕ್ಷೆಯನ್ನು ಸಂಘಪರಿವಾರವಾಗಲಿ, ಭಾಜಪದ ಹೈಕಮಾಂಡ್ ಅಮಿತ್ ಶಾ ಅಥವಾ ಪ್ರಧಾನಮಂತ್ರಿ ನರೇಂದ್ರ ಮೋದಿಯವರಾಗಲಿ ಸಹಿಸುವ ಪರಿಸ್ಥಿತಿಯಲ್ಲಿ ಇಲ್ಲ.

ತನಗಿಂತ ದೊಡ್ಡದಾಗಿ ಬೆಳೆಯುವ ಯಾವ ನಾಯಕನನ್ನೂ ಸಂಘ ಪರಿವಾರ ಸಹಿಸುವುದಿಲ್ಲ. ಇನ್ನು ಕೇಂದ್ರದಲ್ಲಿಯೂ ಇದೇ ಮನಸ್ಥಿತಿ ಇದೆ. ಅಮಿತ್ ಶಾ ಮತ್ತು ಮೋದಿ ಜೋಡಿ ತಮಗಿಂತ ಗಟ್ಟಿಯಾಗಿ ಬೆಳೆಯುವ ಯಾವ ಪ್ರಾದೇಶಿಕ ನಾಯಕನನ್ನೂ ಸಹನೆಯಿಂದ ಕಾಣುವುದಿಲ್ಲ. ಈ ಹಿನ್ನೆಲೆಯಲ್ಲಿಯೇ ಅವರು ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾರಾಜೇ ಅವರ ವಿರುದ್ಧ ಭಿನ್ನಮತೀಯ ಧ್ವನಿಗಳನ್ನು ಬೆಂಬಲಿಸಿದ್ದರು ಆದರೆ ರಾಜ್ಯದ ಶಾಸಕರನ್ನು ತನ್ನ ಮುಷ್ಟಿಯಲ್ಲಿಟ್ಟುಕೊಂಡಿದ್ದ ವಸುಂಧರಾರಾಜೇ ಭಿನ್ನಮತವನ್ನು ಹತ್ತಿಕ್ಕಿ ಮುಂದುವರಿಯುತ್ತಿದ್ದಾರೆ. ಇನ್ನು ಮಧ್ಯಪ್ರದೇಶದಲ್ಲಿ ಅಡ್ವಾಣಿಯವರ ಬೆಂಬಲಿಗರಾದ ಶಿವರಾಜಸಿಂಗ್ ಸಹ ಸ್ಥಳೀಯವಾಗಿ ಬಲಾಢ್ಯವಾಗಿದ್ದು ಅಲ್ಲಿ ಶಾ-ಮೋದಿ ಜೋಡಿಗೆ ಮಾನ್ಯತೆಯಿಲ್ಲದಂತಾಗಿದೆ. ಈ ಕಾರಣಗಳಿಂದಾಗಿಯೇ ಮಹಾರಾಷ್ಟ್ರ, ಗುಜರಾತ್, ಗೋವಾ, ಅಸ್ಸಾಮಿನಲ್ಲಿ ಮುಖರಹಿತವಾದ, ಹೊಸನಾಯಕರನ್ನು, ತಮಗೆ ಬೇಕಾದವರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡಿರುವುದು. ಹಾಗಾಗಿ ಮುಂದೆ ಯಡಿಯೂರಪ್ಪನವರು ರಾಜಕೀಯವಾಗಿ ಬಲಾಢ್ಯರಾಗಿ ಬಿಡುತ್ತಾರೆಂಬ ಕಾರಣದಿಂದಲೇ ಅವರನ್ನು, ಅವರ ಓಟವನ್ನು ತಡೆಹಿಡಿಯುವ ದೃಷ್ಟಿಯಿಂದಲೇ ಈಶ್ವರಪ್ಪನವರ ಕೈಯಲ್ಲಿ ‘ಹಿಂದ’ಚಳವಳಿಯ ಮಾತಾಡಿಸುತ್ತಾ, ಭಾಜಪಕ್ಕೆ ‘ಹಿಂದ’ ವರ್ಗದವರ ಬೆಂಬಲವೂ ಇದ್ದು ಲಿಂಗಾಯತರ ಮತವಷ್ಟೇ ಅನಿವಾರ್ಯವಲ್ಲ ಎಂಬುದನ್ನು ಯಡಿಯೂರಪ್ಪನವರಿಗೆ ಮನವರಿಕೆ ಮಾಡಿ ಕೊಡಲು ಯತ್ನಿಸಲಾಗುತ್ತಿದೆ. ಇಂತಹ ಕಾರಣದಿಂದಲೇ ಸ್ವತಃ ಯಡಿಯೂರಪ್ಪನವರೇ ಸಿದ್ಧಪಡಿಸಿ ಕಳಿಸಿದ್ದ ಕೋರ್ ಕಮಿಟಿಯನ್ನು ಸಹ ಹೈಕಮಾಂಡ್ ತನಗಿಷ್ಟಬಂದಂತೆ ಸರಿಪಡಿಸಿ ಕಳಿಸಿ, ಯಡಿಯೂರಪ್ಪನವರಿಗೆ ಒಂದು ಎಚ್ಚರಿಕೆಯನ್ನೂ ನೀಡಿದೆ.

ಪಕ್ಷವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಯಡಿಯೂರಪ್ಪನವರ ಯೋಜನೆಯನ್ನು ತಡೆಹಿಡಿಯಲು ಸಂಘಪರಿವಾರ ಇಂತಹ ದೊಂದು ತಂತ್ರಗಾರಿಕೆ ಹೆಣೆದಿದ್ದು, ಸದ್ಯ ಈಶ್ವರಪ್ಪನವರು ಅದರ ಯಾಗದ ಕುದುರೆಯಾಗಿದ್ದಾರೆ. ಇದನ್ನು ಅರಿತೋ ಅರಿಯದೆಯೋ ಈಶ್ವರಪ್ಪನವರು ಯಡಿಯೂರಪ್ಪನವರ ವಿರುದ್ಧದ ತಮ್ಮ ‘ಹಿಂದ’ ಚಟುವಟಿಕೆಗಳನ್ನು ಮುಂದುವರಿಸುತ್ತಿದ್ದಾರೆ. ಪಕ್ಷದೊಳಗಿರುವ ವಿವಿಧ ಮೋರ್ಚಾಗಳನ್ನು ಬಳಸಿಕೊಂಡು ಈಶ್ವರಪ್ಪ ನವರು ಹೋರಾಟಮಾಡಲೆಂಬ ಯಡಿಯೂರಪ್ಪನವರ ಮಾತಿಗೆ ಈಶ್ವರಪ್ಪನವರು ತಲೆ ಕೆಡಿಸಿಕೊಳ್ಳದೆ, ಸೆಪ್ಟ್ಟಂಬರ್ ತಿಂಗಳ 21ನೆ ತಾರೀಕು ಹಾವೇರಿಯಲ್ಲಿ ‘ಹಿಂದ’ ಸಮಾವೇಶ ಮಾಡುವುದಾಗಿ ಬಹಿರಂಗವಾಗಿಯೇ ಘೋಷಿಸಿದ್ದಾರೆ. ಇದೀಗ ಮೌನವಾಗಿರುವಂತೆ ಕಾಣುತ್ತಿರುವ ಯಡಿಯೂರಪ್ಪನವರು ಅಷ್ಟು ಸುಲಭಕ್ಕೆ ಈ ತಂತ್ರಗಳಿಗೆ ಮಣಿಯುವವರಲ್ಲ.

ಈಶ್ವರಪ್ಪನವರ ‘ಹಿಂದ’ ಚಳವಳಿಯ ತಂತ್ರಗಾರಿಕೆಯಲ್ಲಿ ‘ಅ’ ಅಂದರೆ ಅಲ್ಪಸಂಖ್ಯಾತರನ್ನು ಬಿಡಲಾಗಿದ್ದು, ಸಂಘಪರಿವಾರದ ಪ್ರಾಯೋಜಿತ ಚಳವಳಿ ಎನ್ನುವುದನ್ನು ಇದೊಂದೇ ತೋರಿಸುತ್ತದೆ. ಅಲ್ಲದೆ ಸಿದ್ದರಾಮಯ್ಯನವರಷ್ಟು ಜನಬೆಂಬಲವಿರದ ಈಶ್ವರಪ್ಪನವರು ಯಡಿಯೂರಪ್ಪನವರನ್ನು ಹಣಿಯುವ ಮತ್ತು ತಮ್ಮನ್ನು ಪಕ್ಷದೊಳಗೆ ಗಟ್ಟಿ ಮಾಡಿಕೊಳ್ಳುವ ಏಕೈಕ ಉದ್ದೇಶದಿಂದಲೇ ‘ಹಿಂದ’ವನ್ನು ಬಳಸಿಕೊಳ್ಳುತ್ತಿರುವುದು ಸ್ವತಃ ‘ಹಿಂದ’ ವರ್ಗಗಳಿಗೆ ಗೊತ್ತಾಗಿದೆ. ಯಾಕೆಂದರೆ ಇದೀಗ ಹಿಂದುಳಿದ ವರ್ಗಗಳ ನಾಯಕ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿದ್ದು, ಅವರ ಸಚಿವ ಸಂಪುಟದಲ್ಲಿ ಹಿಂದುಳಿದ ಮತ್ತು ದಲಿತ ವರ್ಗದವರೇ ಬಹುಮುಖ್ಯವಾದ ಖಾತೆಗಳನ್ನು ಹೊಂದಿದ್ದಾರೆ. ಜೊತೆಗೆ ಅಲ್ಪಸಂಖ್ಯಾತರಿಗೂ ಸಾಕಷ್ಟು ಪ್ರಾತಿನಿಧ್ಯ ದೊರೆತಂತಾಗಿದೆ. ಪರಿಸ್ಥಿತಿ ಹೀಗಿರುವಾಗ, ಸ್ವತ: ‘ಅಹಿಂದ’ ವರ್ಗಗಳೇ ಅಕಾರ ಅನುಭವಿಸುತ್ತಿರುವಾಗ ಮತ್ತೆ ‘ಹಿಂದ’ ವರ್ಗಗಳ ಅಭಿವೃದ್ಧಿಗಾಗಿ ಈ ಚಳವಳಿ ಎನ್ನುವ ಈಶ್ವರಪ್ಪನವರ ಮಾತು ಚಟುವಟಿಕೆಗಳು ಹಾಸ್ಯಾಸ್ಪದವಾಗಿವೆ.

share
ಕು.ಸ.ಮಧುಸೂದನ ನಾಯರ್
ಕು.ಸ.ಮಧುಸೂದನ ನಾಯರ್
Next Story
X