ಪ್ರತ್ಯೇಕ ಪ್ರಕರಣ: ಕೆರೆಗೆ ಬಿದ್ದು ಇಬ್ಬರ ಮೃತ್ಯು
ಬ್ರಹ್ಮಾವರ, ಆ.27: ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ನಡೆದ ಪ್ರತ್ಯೇಕ ಘಟನೆಯಲ್ಲಿ ಇಬ್ಬರು ಕೆರೆಗೆ ಬಿದ್ದು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಆರೂರು ಗ್ರಾಮದ ನೀಲಾವರ ಕ್ರಾಸ್ ಬೊಬ್ಬರ್ಯಗುಡ್ಡೆ ಸಮೀಪ ಇರುವ ಕೆರೆಯ ಬಳಿ ಗುರುವಾರ ಸಂಜೆ ಚಟ್ಟರೆಕಲ್ಲು ನಿವಾಸಿ ಮೋನಪ್ಪನಾಯ್ಕ ಎಂಬವರ ಪತ್ನಿ ವನಜ(60) ನಡೆದು ಕೊಂಡು ಹೋಗುತ್ತಿರುವಾಗ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ. ಅವರ ಮೃತದೇಹ ಶನಿವಾರ ಬೆಳಗ್ಗೆ ಪತ್ತೆಯಾಗಿದೆ. ಹನೇಹಳ್ಳಿ ಗ್ರಾಮದ ಬಾರ್ಕೂರು ಮೂಡುಕೆರೆ ವೇಣುಗೋಪಾಲ ದೇವಸ್ಥಾನದ ಕೆರೆಗೆ ಸಾಲಿಕೇರಿಯ ಸುರೇಂದ್ರ ಪೂಜಾರಿ(34) ಎಂಬವರು ಗುರುವಾರ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಇವರ ಮೃತದೇಹವು ಶನಿವಾರ ಬೆಳಗ್ಗೆ ಪತ್ತೆಯಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story