Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಆಧುನಿಕ ಆಹಾರ ಪದ್ಧತಿಯಿಂದ ರೋಗಗಳ...

ಆಧುನಿಕ ಆಹಾರ ಪದ್ಧತಿಯಿಂದ ರೋಗಗಳ ಹೆಚ್ಚಳ: ಡಾ. ಖಾದರ್ ಕಳವಳ

ವಾರ್ತಾಭಾರತಿವಾರ್ತಾಭಾರತಿ28 Aug 2016 5:32 PM IST
share
ಆಧುನಿಕ ಆಹಾರ ಪದ್ಧತಿಯಿಂದ ರೋಗಗಳ ಹೆಚ್ಚಳ: ಡಾ. ಖಾದರ್ ಕಳವಳ

ಮಂಗಳೂರು, ಆ. 28: ಆಧುನಿಕತೆ, ತಾಂತ್ರಿಕತೆಯ ಭರಾಟೆಯಲ್ಲಿ ಶಾಸ್ತ್ರೀಯ ಹಾಗೂ ನೈಸರ್ಗಿಕ ಆಹಾರ ಪದ್ಧತಿಯಿಂದ ದೂರವಾಗಿ ಅಸಹಜ ಆಹಾರಗಳನ್ನು ನಮ್ಮದಾಗಿಸಿಕೊಂಡಿರುವುದು ಇಂದು ಮನುಷ್ಯ ಇಂದು ವಿವಿಧ ರೋಗಗಳಿಗೆ ತುತ್ತಾಗಲು ಪ್ರಮುಖ ಕಾರಣ ಎಂದು ಎಂದು ಮೈಸೂರಿನ ಆಹಾರ, ಕೃಷಿ ಹಾಗೂ ಹೋಮಿಯೋ ತಜ್ಞ ಡಾ. ಎ. ಖಾದರ್ ಕಳವಳ ವ್ಯಕ್ತಪಡಿಸಿದ್ದಾರೆ.

ದೇಸಿ ಉತ್ಥಾನ ಸಾವಯವ ರೈತ ಬಂಧು ಟ್ರಸ್ಟ್ ಮಂಗಳೂರು ಹಾಗೂ ಆರೋಗ್ಯ ಭಾರತಿ ಮಂಗಳೂರು ವಿಭಾಗದ ಜಂಟಿ ಆಶ್ರಯದಲ್ಲಿ ಮಂಗಳೂರು ಪುರಭವನದಲ್ಲಿ ರವಿವಾರ ಆಯೋಜಿಸಲಾದ ‘ಅನ್ನದ ಬಟ್ಟಲಿಗೆ ಸಿರಿಧಾನ್ಯಗಳು’ ಕಾರ್ಯಕ್ರಮದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು.

ನೈಸರ್ಗಿಕವಾದ ಆಹಾರ ಪದ್ಧತಿಯಿಂದ ದೂರವಾಗಿರುವ ಕಾರಣ, ಜನರನ್ನಿಂದು ಅಕಾಲಿಕವಾಗಿ ರಕ್ತಹೀನತೆ, ಕ್ಯಾಲ್ಸಿಯಂ ಕೊರತೆ, ಮಲ ಬದ್ದತೆ, ರಕ್ತದೊತ್ತಡ, ಸಕ್ಕರೆ ಕಾಯಿಲೆಗಳು ಕಾಡುತ್ತಿವೆ. ರಾಸಾಯನಿಕಗಳನ್ನೇ ಬಳಸಿ ಮಾಡುವ ಹಲವು ಆಹಾರ ಕ್ರಮಗಳು, ಪಾಶ್ಚಾತ್ಯ ಆಹಾರ ಪದ್ದತಿಗಳು ಜೀವನ ಕ್ರಮದ ಮೇಲೆ ಗಂಭೀರವಾದ ಪರಿಣಾಮವನ್ನು ಬೀರುತ್ತಿದೆ ಎಂದು ಅವರು ಹೇಳಿದರು.

ರಾಸಾಯನಿಕ ಪರಿಣಾಮ ಬೀರುವ ನ್ಯಾನೋ ಉತ್ಪನ್ನ, ಪ್ಲಾಸ್ಟಿಕ್ ಬಾಟಲಿಗಳಲ್ಲಿ ದೊರೆಯುವ ನೀರು, ಎಣ್ಣೆ, ಹಾಲು ಸೇವಿಸುವುದರಿಂದ ನಮ್ಮ ದೇಹಕ್ಕೆ ಬೇಕಾದ ಸೂಕ್ಷ್ಮ ಪೋಷಕಾಂಶಗಳನ್ನು ಸೆಳೆಯುವ ಅಂಗಾಂಗಗಳು ಕಾರ್ಯನಿರ್ವಹಿಸದಂತಾಗಿ ನಮಗರಿವಿಲ್ಲದೇ ಅನೇಕ ರೋಗಗಳಿಗೆ ಆಹ್ವಾನವಿತ್ತುಕೊಂಡು ಸಮಸ್ಯೆ ಎದುರಾಗಿದೆ. ಜತೆಗೆ ಇಂದಿಗೂ ನಮ್ಮಲ್ಲಿ ವೈಜ್ಞಾನಿಕವಾಗಿ ಯಾರೂ ಕೂಡಾ ಆಹಾರವನ್ನು ನಿರ್ವಚನ ಮಾಡದಿರುವುದು ನಮ್ಮ ಇಂದಿನ ಅನಾರೋಗ್ಯ ಪರಿಸ್ಥಿತಿಗೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಿದರು.

ನಾವು ತಿನ್ನುವ ಮೊಟ್ಟೆ, ಕೋಳಿ, ಮೀನು ಮೊದಲಾದ ಮಾಂಸಗಳಲ್ಲಿ ರಾಸಾಯನಿಕ ವಸ್ತುಗಳು ಸಾಂದ್ರಿಕೃತಗೊಂಡಿರುತ್ತವೆ. ಭೂಮಿಯ ಮೇಲೆ ಇಂದು ಯಾವುದು ಸಹಜವಾಗಿ ಉಳಿದಿಲ್ಲ. ವೈದ್ಯಲೋಕ ಇಂದು ಮಾಯಾಲೋಕ, ಭ್ರಮಾಲೋಕವಾಗಿ ಮಾರ್ಪಟ್ಟಿದೆ. ವೈಜ್ಞಾನಿಕತೆಯ ಹೆಸರಲ್ಲಿ ವೌಡ್ಯತೆಗೆ ಒಳಗಾಗಿರುವ ವೈದ್ಯಲೋಕದಿಂದ ನಾವಿಂದು ಹೊರಬರಬೇಕಾಗಿದೆ. ಆರೋಗ್ಯ ಕಾಪಾಡಿಕೊಳ್ಳಲು ನಾರಿನಂಶದಿಂದ ಕೂಡಿದ ದವಸಧಾನ್ಯಗಳು, ನವಣೆಯಂತಹ ಕಾಳುಗಳು ಮಾತ್ರವೇ ಪರಿಪೂರ್ಣವಾದ ಆಹಾರ ಎಂದು ಡಾ. ಖಾದರ್ ನುಡಿದರು.

ವೈದ್ಯಕೀಯ ವ್ಯವಸ್ಥೆಯು ನಮ್ಮನ್ನು ಇನ್ನಷ್ಟು ರಾಸಾಯನಿಕ ಪ್ರಪಂಚಕ್ಕೆ ಕೊಂಡೊಯ್ಯುತ್ತದೆ. ಸೌಖ್ಯವಿಲ್ಲದಾಗ ನೀಡುವ ಒಂದೊಂದು ಮಾತ್ರೆಗಳು, ಔಷಧಗಳು ದೇಹದ ಒಟ್ಟು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಗರ್ಭಧರಿಸಿದ ಸಂದರ್ಭದಲ್ಲಿ ಆಕೆಗೆ ವೈದ್ಯರು ನೀಡುವ ಔಷಧಿಗಳು ಹೊಟ್ಟೆಯಲ್ಲಿರುವ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಬದಲಾಗಿ ಆ ಸಂದರ್ಭ ಬೀಟ್‌ರೋಟ್, ಕ್ಯಾರೆಟ್, ನೆಲ್ಲಿಕಾಯಿ ತಿನ್ನುವಂತೆ ಬಹುತೇಕ ವೈದ್ಯರು ಸೂಚಿಸುವುದಿಲ್ಲ. ಬದಲಾಗಿ ಹುಟ್ಟುವ ಮಗುವಿಗೆ ರಾಸಾಯನಿಕಗಳ ಸ್ಪರ್ಶವನ್ನು ಹೊಟ್ಟೆಯೊಳಗಿನಿಂದಲೇ ಆರಂಭಿಸುವ ವ್ಯವಸ್ಥೆ ನಮ್ಮಲ್ಲಿರುವುದು ದುರಂತ ಎಂದವರು ಹೇಳಿದರು. ಕಳೆದ 50 ವರ್ಷಗಳಿಂದೀಚೆಗೆ ವಿವಿಧ ರೀತಿಯ ರೋಗಗಳು ಹೆಚ್ಚಾಗುತ್ತಿರಲು, ಬಾಲ್ಯದಲ್ಲೇ ರಕ್ತದೊತ್ತಡ, ಮಧಮೇಹದಂತಹ ರೋಗಗಳು ಕಾಡುತ್ತಿರಲು ಪ್ರಮುಖ ಕಾರಣ ರಕ್ತದಲ್ಲಿ ಗ್ಲೋಕೋಸ್ ನಿಯಂತ್ರಣ ಇಲ್ಲದಿರುವುದಾಗಿದೆ. ಪ್ರಕೃತಿಯೆಡೆಗೆ ಕಣ್ಣುಹಾಯಿಸಿದಾಗ ಮಾತ್ರವೇ ಆರೋಗ್ಯದಲ್ಲಿ ಸಮತೋಲನ ಕಾಯ್ದುಕೊಳ್ಳಲು ಸಾಧ್ಯ ಎಂದರು.

ಆರೋಗ್ಯಭಾರತಿ ಪ್ರಾಂತ ಕೋಶಾಧ್ಯಕ್ಷ ಡಾ. ಪ್ರತಾಪಕುಮಾರ ಪಾಂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಗಳೂರು ಆರೋಗ್ಯ ಭಾರತಿ ಅಧ್ಯಕ್ಷ ಡಾ. ಈಶ್ವರ ಭಟ್, ಆಯುಷ್ ಫೌಂಡೇಶನ್‌ನ ಅಧ್ಯಕ್ಷೆ ಡಾ.ಆಶಾಜ್ಯೋತಿ ರೈ, ದೇಸಿ ಉತ್ಥಾನ ಸಾವಯವ ರೈತಬಂಧು ಟ್ರಸ್ಟ್ ಮುಖ್ಯಸ್ಥ ರಾಮಕೃಷ್ಣ ಭಟ್ ಮೈರುಗ, ಆಡಳಿತ ಟ್ರಸ್ಟಿ ಡಾ.ರಾಜೇಶ್ ಪಾದೆಕಲ್ಲು ಮುಂತಾದವರು ಉಪಸ್ಥಿತರಿದ್ದರು.

ಸೂರಜ್ ಪ್ರಾರ್ಥಿಸಿದರು. ಡಾ. ರಾಜೇಶ್ ಸ್ವಾಗತಿಸಿದರು.

ಹಾಲಿನಿಂದ ಹಾಲಾಹಲ ಸೃಷ್ಟಿ!

ಅಮೆರಿಕದಲ್ಲಿ 8ರ ಹರೆಯದಲ್ಲಿಯೇ ಬಾಲಕಿಯರು ಮುಟ್ಟಾಗುತ್ತಿದ್ದಾರೆ. ಈ ಬಗ್ಗೆ ಅಧ್ಯಯನ ನಡೆಸಿದಾಗ, ಗಂಭೀರ ವಿಚಾರ ಬಹಿರಂಗಗೊಂಡಿತು. ರಾಸಾಯನಿಕ ಪದಾರ್ಥಗಳನ್ನು ದನಗಳಿಗೆ ಚುಚ್ಚಿಸಿ ಅದರ ಮೂಲಕ ಹಾಲಿನ ಇಳುವರಿಯನ್ನು ಹೆಚ್ಚಿಸುವ ಪರಿಕಲ್ಪನೆಯನ್ನು ಅಮೆರಿಕದಲ್ಲಿ ಮಾಡಿದ ಪರಿಣಾಮ, ರಾಸಾಯನಿಕ ಪೂರಿತ ಹಾಲು ಕುಡಿಯುವ ಮಕ್ಕಳ ಹಾರ್ಮೊನುಗಳು ಬೇಗನೆ ಪ್ರತಿಕ್ರಿಯಿಸಿ ಬೇಗ ಮುಟ್ಟಾಗುವಂತಾಗಿದೆ. ಆಶ್ಚರ್ಯವೆಂದರೆ 8 ವರ್ಷದಲ್ಲಿ ಮುಟ್ಟಾಗುವ ಪರಿಸ್ಥಿತಿ ಈಗ ಭಾರತಕ್ಕೂ ಕಾಲಿಟ್ಟಿದೆ. ಹಾಲು ಹಾಲಾಹಲವನ್ನು ಸೃಷ್ಟಿಸುತ್ತಿದೆ. ಬಯೋಟೆಕ್ನಾಲಜಿ ನೆಪದಲ್ಲಿ ಹಾಲನ್ನು ಹಾಲಾಹಲವಾಗಿ ಮಾಡಿ ಮಕ್ಕಳ ಬಾಯಿಗೆ ಹಾಕಿದ ಘನತೆ ಮಾನವಕುಲಕ್ಕೆ ಶಾಪವಾಗುತ್ತಿದೆ ಎಂದು ಡಾ. ಎ. ಖಾದರ್ ವಿಶ್ಲೇಷಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X