ಸಚಿವ ಪ್ರಮೋದ್ರಿಂದ ಪ್ರವಾಸೋದ್ಯಮ ವೆಬ್ಸೈಟ್ ಉದ್ಘಾಟನೆ
![ಸಚಿವ ಪ್ರಮೋದ್ರಿಂದ ಪ್ರವಾಸೋದ್ಯಮ ವೆಬ್ಸೈಟ್ ಉದ್ಘಾಟನೆ ಸಚಿವ ಪ್ರಮೋದ್ರಿಂದ ಪ್ರವಾಸೋದ್ಯಮ ವೆಬ್ಸೈಟ್ ಉದ್ಘಾಟನೆ](https://www.varthabharati.in/sites/default/files/images/articles/2016/08/29/UD-A29-WEBSITE.jpg)
ಉಡುಪಿ, ಆ.29: ಉಡುಪಿಯ ಉತ್ಸಾಹಿ ತರುಣರು ಸೇರಿ ರೂಪಿಸಿದ ಪ್ರವಾಸೋದ್ಯಮದ ಕುರಿತು ‘ಹೆವೆನ್ಸ್ ಆಫ್ ಕರ್ನಾಟಕ’ ಅಂತರ್ಜಾಲ ಪ್ರವಾಸಿ ತಾಣವನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಇಂದು ನಾಯರ್ಕೆರೆಯಲ್ಲಿರುವ ಪ್ರೆಸ್ಕ್ಲಬ್ನಲ್ಲಿ ಉದ್ಘಾಟಿಸಿದರು.
ಈಗ ಲಭ್ಯವಿರುವ ಅಂತರ್ಜಾಲ ತಾಣಗಳಲ್ಲಿ ಉಪಲಬ್ಧವಿರದ ಹಲವಾರು ಪ್ರವಾಸಿ ತಾಣಗಳನ್ನು ನೂತನ ಜಾಲತಾಣ ಹೊಂದಿಗೆ. ಈ ಜಾಲತಾಣದಲಲಿ ಕರ್ನಾಟವನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿ ಅಲ್ಲಿರುವ ಪ್ರವಾಸಿ ಕೇಂದ್ರಗಳ ಕುರಿತು ಸಮಗ್ರ ಮಾಹಿತಿ ನೀಡಲಾಗಿದೆ ಎಂದು ತಂಡ ಅವಿನಾಶ್ ಕಾಮತ್ ತಿಳಿಸಿದ್ದಾರೆ.
ಪ್ರವಾಸಿ ತಾಣಗಳ ಇತಿಹಾಸ, ವೈಶಿಷ್ಟತೆ. ಅಲ್ಲಿಗೆ ತೆರಳುವ ಮಾರ್ಗ ನಕ್ಷೆ, ಅಲ್ಲಿ ಆಸುಪಾಸಿನಲ್ಲಿರುವ ಇತರ ಪ್ರವಾಸಿ ತಾಣಗಳ ಮಾಹಿತಿ ವಿವರಗಳನ್ನು ಹೆವೆನ್ಸ್ ಆಫ್ ಕರ್ನಾಟಕದಲ್ಲಿ ನೀಡಲಾಗಿದೆ. ಅತ್ಯಾಕರ್ಷಕ ಛಾಯಾಚಿತ್ರಗಳೂ ಈ ಬಗ್ಗೆ ತಿಳಿಸುತ್ತವೆ ಎಂದವರು ಹೇಳಿದರು.
ಈ ಜಾಲತಾಣವನ್ನು ಅತ್ಯಂತ ಸರಳವಾಗಿ ರೂಪಿಸಲಾಗಿದ್ದು, ಯಾರು ಸಹ ಹೆಚ್ಚಿನ ಪರಿಶ್ರಮವಿಲ್ಲದೇ ಪ್ರವಾಸಿ ಕೇಂದ್ರಗಳ ಮಾಹಿತಿಗಳನ್ನು ಪಡೆದುಕೊಳ್ಳ ಬಹುದು. ಆರಂಭದಲ್ಲಿ ಈಗ ರಾಜ್ಯದ ಪ್ರಮುಖ ನೂರು ಪ್ರವಾಸಿ ಕೇಂದ್ರಗಳ ಮಾಹಿತಿಯನ್ನು ನೀಡಲಾಗಿದ್ದು, ಮುಂದಿನ ತಿಂಗಳು ಇನ್ನೂ 50 ಕೇಂದ್ರಗಳ ಮಾಹಿತಿಗಳನ್ನು ಅಪ್ಲೋಡ್ ಮಾಡಲಿದ್ದೇವೆ ಎಂದು ಅವಿನಾಶ್ ಕಾಮತ್ ತಿಳಿಸಿದರು.
ಈ ವೆಬ್ಸೈಟ್ನಲ್ಲಿ ಕರ್ನಾಟಕಕ್ಕೆ ವಿಶೇಷ ಒತ್ತು ನೀಡಲಾಗಿದೆ. ಪಕ್ಕದ ಕೇರಳ ಹಾಗೂ ಗೋವಾಗಳಂತೆ ಪ್ರವಾಸೋದ್ಯಮದ ಭೂಪಟದಲ್ಲಿ ರಾಜ್ಯದ ಹೆಸರು ಸೇರಬೇಕೆಂಬ ಉದ್ದೇಶದೊಂದಿಗೆ ಉಡುಪಿಯ ಉತ್ಸಾಹಿ ತರುಣರಾದ ಶಶಿಕಾಂತ್ ಶೆಟ್ಟಿ, ತಿಲಕ್ರಾಜ್, ದಿವಾಕರ ಹಿರಿಯಡ್ಕ, ರಶ್ಮಿ ಜೆನ್ನಿಫರ್, ಅಶ್ವಿನಿ ಜೈನ್, ಗುರುರಾಜ್ ಬಿ., ವಿರಾಜ್ ಕಾಪು ಮುಂತಾದವರು ಕೈಜೋಡಿಸಿದ್ದಾರೆ. ಸಾರ್ವಜನಿಕರೂ ತಮ್ಮ ಸಲಹೆ ಸೂಚನೆಗಳನ್ನು ನೀಡಬಹುದು ಎಂದವರು ನುಡಿದರು.
ಪತ್ರಿಕಾಗೋಷ್ಠಿಯಲ್ಲಿ ಶಶಿಕಾಂತ್ ಶೆಟ್ಟಿ, ರಶ್ಮಿ ಜೆನ್ನಿಫರ್, ನಿತೇಶ್ ರಾವ್ ಉಪಸ್ಥಿತರಿದ್ದರು.