Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಹರಪ್ಪ ನಾಗರಿಕತೆ ಸುನಾಮಿಯಿಂದ ನಾಶ:...

ಹರಪ್ಪ ನಾಗರಿಕತೆ ಸುನಾಮಿಯಿಂದ ನಾಶ: ಅಧ್ಯಯನ

ವಾರ್ತಾಭಾರತಿವಾರ್ತಾಭಾರತಿ30 Aug 2016 11:04 PM IST
share

ಪಣಜಿ, ಆ.30: ಹರಪ್ಪ ನಾಗರಿಕತೆಯ 5ನೆ ಅತಿ ದೊಡ್ಡ ನಿವೇಶನವಾಗಿದ್ದ, ಗುಜರಾತ್‌ನ ಧೊಲವಿರ ಬಂದರು ಪಟ್ಟಣವು ಭಾರೀ ಸುನಾಮಿಯೊಂದರಿಂದ ನಾಶವಾಗಿರ ಬೇಕೆಂದು ಸಿಎಸ್‌ಐಆರ್ ರಾಷ್ಟ್ರೀಯ ಸಾಗರ ಶಾಸ್ತ್ರ ಸಂಸ್ಥೆ(ಎನ್‌ಐಒ) ಶಂಕಿಸಿದೆ.

ಧೊಲವಿರ ಹರಪ್ಪ ನಾಗರಿಕತೆಯ ಕಾಲದ ಒಂದು ಪುರಾತನ ನಗರದ ನಿವೇಶನವಾಗಿದ್ದು, ಅವರ ಅತಿ ದೊಡ್ಡ ಬಂದರು ಪಟ್ಟಣವಾಗಿತ್ತು.
ಈ ಪ್ರದೇಶದಲ್ಲಿ ಭಾರೀ ಸುನಾಮಿ ಸಾಮಾನ್ಯವಾಗಿತ್ತೆಂಬುದನ್ನು ಫಲಿತಾಂಶ ಸ್ಪಷ್ಟವಾಗಿ ಸೂಚಿಸುತ್ತದೆ. ಹರಪ್ಪ ನಾಗರಿಕರಿಗೆ ಸುನಾಮಿಯ ಪ್ರಬಲ ಬೆದರಿಕೆಯ ಅರಿವಿತ್ತು ಮಾತ್ರವಲ್ಲದೆ, ಅವರು ಕರಾವಳಿ ವಿಕೋಪ ಪ್ರಬಂಧನದ ಆದ್ಯರೂ ಆಗಿದ್ದರೆಂಬುದನ್ನು ಧೊಲವಿರದ ದಪ್ಪ ಗೋಡೆಯು ತೋರಿಸುತ್ತದೆಂದು ಸಂಸ್ಥೆಯ ಅಧ್ಯಯನವೊಂದು ತಿಳಿಸಿದೆ.
ಧೊಲವಿರ, ಕನಿಷ್ಠ ಭಾಗವಾದರೂ ಅಂತಹ ಸುನಾಮಿಯೊಂದರಿಂದ ನಾಶ ವಾಗಿರಬಹುದೆಂಬ ಸಾಧ್ಯತೆಯನ್ನು ಈ ಅಧ್ಯಯನವು ತೆರೆದಿಟ್ಟಿದೆಯೆಂಬುದು ಅತಿ ಮುಖ್ಯವಾಗಿದೆಯೆಂದು ಎನ್‌ಐಒದ ನಿರ್ದೇಶಕ ಡಾ. ಎಸ್‌ಡಬ್ಲುಎ ನಖ್ವಿ ನಿನ್ನೆ ಹೇಳಿದ್ದಾರೆ.
ಗೋವಾ ಮೂಲದ ಸಂಸ್ಥೆಯ ವಿಜ್ಞಾನಿ ಗಳು ಕೈಗೊಂಡಿದ್ದ ವಿಸ್ತೃತ ಅಧ್ಯಯನದ ವಿವರವನ್ನು ಅವರು ಹಂಚಿಕೊಳ್ಳುತ್ತಿದ್ದರು.
ಧೋವಿರದ ಗೋಡೆಯ ನೈಜ ಉದ್ದೇಶ ವೇನೆಂಬುದು ಗಮನಾರ್ಹ ಚರ್ಚೆಯ ವಿಷಯವಾಗಿರುವಾಗಲೇ ರಾಜೀವ್ ನಿಗಂ ನೇತೃತ್ವದ ವಿಜ್ಞಾನಿಗಳ ತಂಡ ಅಲ್ಗ್ ಅಧ್ಯಯನಕ್ಕಾಗಿ ಹೋಗಿತ್ತು.
ಈ ಸುಯೋಜಿತ ನಾಗರಿಕ ವಸಾಹತು ಈ ಪುರಾತತ್ವ ಉತ್ಖನನಕ್ಕಿಂತ 5 ಸಾವಿರದಿಂದ 3,450 ವರ್ಷಗಳ ಮೊದಲು 1,500 ವರ್ಷ ಗಳ ಕಾಲ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಈ ನಗರದಲ್ಲಿ ಕೋಟೆ, ಮಧ್ಯದ ಪಟ್ಟಣ ಹಾಗೂ ಕೆಳಗಿನ ಪಟ್ಟಣಗಳೆಂಬ 3 ಭಾಗಗಳಿದ್ದುದು ಉತ್ಖನನದಿಂದ ತಿಳಿದು ಬಂದಿದೆಯೆಂದು ನಖ್ವಿ ವಿವರಿಸಿದ್ದಾರೆ.
ಸಂಘರ್ಷಗಳು ಸಾಮಾನ್ಯವಾಗಿದ್ದ ಹಾಗೂ ಶಸ್ತ್ರಾಸ್ತ್ರಗಳು ಹೆಚ್ಚು ವಿನಾಶಕಾರಿಗಳಾಗಿದ್ದ ಚಾರಿತ್ರಿಕ ಕಾಲದಲ್ಲೂ ರಕ್ಷಣಾ ಕ್ರಮವಾಗಿ, ಧೊಲವಿರದಲ್ಲಿರುವಂತಹ 14-18 ಮೀ. ದಪ್ಪದ ವಿಶಿಷ್ಟ ಗೋಡೆಗಳಿರಲಿಲ್ಲವೆಂದು ಅವರು ಹೇಳಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X