ಹೆಬ್ರಿ, ಆ.30: ವೈಯಕ್ತಿಕ ಕಾರಣದಿಂದ ಮನನೊಂದ ನಾಲ್ಕೂರು ಗ್ರಾಮದ ಮಾರಾಳಿ ಬಡಾಬೆಟ್ಟು ನಿವಾಸಿ ನಾಗಯ್ಯ ಶೆಟ್ಟಿ ಪತ್ನಿ ಗುಲಾಬಿ (67) ಎಂಬವರು ಆ.29ರಂದು ಸಂಜೆ ವೇಳೆ ಮನೆಯ ತೋಟದಲ್ಲಿರುವ ಆವರಣವಿಲ್ಲದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.