ಕೇರಳ ಜರ್ನಲಿಸ್ಟ್ ಯೂನಿಯನ್ಗೆ ಆಯ್ಕೆ
ಮಂಜೇಶ್ವರ, ಆ.30: ಏಳನೆ ಕೇರಳ ಜರ್ನಲಿಸ್ಟ್ ಯೂನಿಯನ್ ಜಿಲ್ಲಾ ಸಮ್ಮೇಳನ ಕಾಞಂಗಾಡ್ ಪಿ ಸ್ಮಾರಕ ಸಭಾಂಗಣದಲ್ಲಿ ಇತ್ತೀ ಚೆಗೆ ನಡೆಯಿತು. ಉದುಮ ಶಾಸಕ ಕೆ. ಕುಂಞಿರಾಮನ್ ಸಮ್ಮೇ ಳನವನ್ನು ಉದ್ಘಾಟಿಸಿದರು. ಸಂಘ ಟನೆಯ ರಾಜ್ಯ ಉಪಾಧ್ಯಕ್ಷ ಸಿ.ಕೆ. ನಾಸರ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಸದಸ್ಯ ಪ್ರಕಾಶ್ ಪಯ್ಯನ್ನೂರು ಮುಖ್ಯ ಭಾಷಣ ಮಾಡಿದರು. ಕಾಸರಗೋಡು ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಹಾಗೂ ಪತ್ರಕರ್ತ ಹರ್ಷಾದ್ ವರ್ಕಾಡಿ ಅಧ್ಯಕ್ಷತೆ ವಹಿಸಿದ್ದರು. ನೂತನ ಸಾಲಿನ ಅಧ್ಯಕ್ಷರಾಗಿ ಹನೀಸ್ ಉಪ್ಪಳ, ಪ್ರಧಾನ ಕಾರ್ಯದರ್ಶಿಯಾಗಿ ಸಿ.ಕೆ. ಕಣ್ಣನ್, ಕೋಶಾಧಿಕಾರಿಯಾಗಿ ಅಶೋಕನ್ ನೀರ್ಚಾಲ್, ಉಪಾಧ್ಯಕ್ಷರಾಗಿ ಅಬ್ದುರ್ರಹ್ಮಾನ್ ಉದ್ಯಾವರ, ಪುರುಷೋತ್ತಮ ಭಟ್, ಶರೀಫ್ ಹೇರಾಲ್, ಜತೆ ಕಾರ್ಯದರ್ಶಿಯಾಗಿ ವಿಜಯ ರಾಜ್ ಉದುಮ, ಪ್ರಸಾದ್ ಭೀಮನಡಿ, ಹಾರೂನ್ ಕಾಞಂಗಾಡ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಝುಬೈರ್ ಕುಕ್ಕಾರ್, ರತೀಶ್ ಆಯ್ಕೆಯಾದರು.
Next Story