ಯುವ ಲೇಖಕ ಕೆ.ಎಂ. ಸಿದ್ದೀಕ್ ಮೋಂಟುಗೋಳಿಯವರಿಗೆ ‘ನೂರುಲ್ ಉಲಮಾ ಸಾಹಿತ್ಯ ಪ್ರಶಸ್ತಿ’
![ಯುವ ಲೇಖಕ ಕೆ.ಎಂ. ಸಿದ್ದೀಕ್ ಮೋಂಟುಗೋಳಿಯವರಿಗೆ ‘ನೂರುಲ್ ಉಲಮಾ ಸಾಹಿತ್ಯ ಪ್ರಶಸ್ತಿ’ ಯುವ ಲೇಖಕ ಕೆ.ಎಂ. ಸಿದ್ದೀಕ್ ಮೋಂಟುಗೋಳಿಯವರಿಗೆ ‘ನೂರುಲ್ ಉಲಮಾ ಸಾಹಿತ್ಯ ಪ್ರಶಸ್ತಿ’](https://www.varthabharati.in/sites/default/files/images/articles/2016/08/31/IMG-20160830-WA0038.jpg)
ಮಂಗಳೂರು, ಆ.31: ಬರಹ ರಂಗದಲ್ಲಿ ಇಪ್ಪತ್ತೈದನೆ ವರ್ಷಕ್ಕೆ ಪ್ರವೇಶಿಸುತ್ತಿರುವ ಯುವ ಲೇಖಕ, ಅಲ್ ಅನ್ಸಾರ್, ಮೊಯ್ಲಾಂಜಿ ಪತ್ರಿಕೆಗಳ ಸಂಪಾದಕ ಕೆ.ಎಂ.ಸಿದ್ದೀಕ್ ಮೋಂಟುಗೋಳಿಯವರಿಗೆ ‘ನೂರುಲ್ ಉಲಮಾ ಸಾಹಿತ್ಯ ಪ್ರಶಸ್ತಿ’ ನೀಡಿ ಸನ್ಮಾನಿಸಲಾಯಿತು.
ಕೆ.ಎಂ ಅಭಿಮಾನಿ ಬಳಗ ಮಂಗಳೂರು ಇದರ ವತಿಯಿಂದ ನಗರದ ಹೊಟೆಲ್ ಬ್ರಿಗೇಡ್ ರಾಯಲ್ನಲ್ಲಿ ಇತ್ತೀಚೆಗೆ ನಡೆದ ‘ಬರಹ ಕಮ್ಮಟ-16’ ಸಮಾರಂಭದಲ್ಲಿ ಅವರನ್ನು ಸನ್ಮಾನಿಸಲಾಯಿತು. ಸನ್ಮಾನವು 2 ಲಕ್ಷ ರೂ. ನಗದು, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರಗಳನ್ನೊಳಗೊಂಡಿದೆ.
ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ ಖಾದರ್ ಪ್ರಶಸ್ತಿ ಪ್ರದಾನ ಮಾಡಿದರು. ಕರ್ನಾಟಕ ಕಲ್ಚರಲ್ ಫೌಂಡೇಶನ್ನ ಅಂತರಾಷ್ಟ್ರೀಯ ಅಧ್ಯಕ್ಷ ಎಸ್.ಪಿ. ಹಂಝ ಸಖಾಫಿ ಅಧ್ಯಕ್ಷತೆ ವಹಿಸಿದ್ದರು. ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಶಾಫಿ ಸಅದಿ ಬೆಂಗಳೂರು ಉದ್ಘಾಟಿಸಿದರು. ಎಸ್ವೈಎಸ್ ರಾಜ್ಯ ಕಾರ್ಯದರ್ಶಿ ತೋಕೆ ಮುಹಿಯುದ್ದೀನ್ ಖಾವಿಲ್ ಸಖಾಫಿ ಅಭಿನಂದನಾ ಭಾಷಣ ಮಾಡಿದರು. ಕರ್ನಾಟಕ ಜಂಇಯ್ಯತುಲ್ ಉಲಮಾ ಅಧ್ಯಕ್ಷ ವಳವೂರು ಯು.ಕೆ. ಮುಹಮ್ಮದ್ ಸಅದಿ ಆಶಿರ್ವಚನ ನೀಡಿದರು.
ಹಿರಿಯ ಸಾಹಿತಿಗಳಾದ ಡಾ.ನಾ.ದಾಮೋದರ ಶೆಟ್ಟಿ, ರೊನಾಲ್ಡ್ ಫೆರ್ನಾಂಡಿಸ್, ಅಲ್ ಅನ್ಸಾರ್ ಪ್ರಕಾಶಕ ಬಾವ ಹಾಜಿ, ವಕ್ಪ್ ಬೋರ್ಡ್ನ ಜಿಲ್ಲಾಧ್ಯಕ್ಷ ರಶೀದ್ ಹಾಜಿ, ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ, ಸೋಮವಾರ ಪೇಟೆ ಪುರಸಭಾ ಸದಸ್ಯ ಕೆ.ಎಂ. ಆದಂ ಮೊದಲಾದವರು ಮಾತನಾಡಿದರು.
ಎಸ್ಸೆಸ್ಸೆಫ್ ರಾಜ್ಯ ಮುಖಂಡರಾದ ಸೈಯದ್ ಸಿಟಿಎಂ ತಂಙಳ್ ಮನ್ಶರ್, ಶಿಕ್ಷಣಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಕೆ.ಎಂ. ಕಾಮಿಲ್, ಮುಸ್ಲಿಂ ಜಮಾಅಯ್ ಕೌನ್ಸಿಲ್ ಜಿಲ್ಲಾಧ್ಯಕ್ಷ ಹೈದರ್ ಪರ್ತಿಪ್ಪಾಡಿ, ಉದ್ಯಮಿಗಳಾದ ನಝೀರ್ ಹಾಜಿ ಕತಾರ್, ಅಬೂಬಕರ್ ರೈಸ್ಕೋ, ಕೆಸಿಎಫ್ ಕತಾರ್ ಅಧ್ಯಕ್ಷ ರಹೀಂ ಸಅದಿ, ಎಸ್ವೆಎಸ್ ಹಾಸನ ಜಿಲ್ಲಾಧ್ಯಕ್ಷ ಹಕೀಂ ಸಕಲೇಶಪುರ, ಹಾಸನ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಹಸೈನಾರ್ ಆನೆಮಹಲ್, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ನ ನಿರ್ದೇಶಕ ರಫೀಕ್ ಮಾಸ್ಟರ್, ಪತ್ರಕರ್ತ ಹಂಝ ಮಲಾರ್ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭ ಪೆನ್ ಫ್ರೈಂಡ್ಸ್ ಎಂಬ ಸಾಹಿತ್ಯ ವೇದಿಕೆಗೆ ಚಾಲನೆ ನೀಡಲಾಯಿತು. ಯಂಶ ಬೇಂಗಿಲ ಸ್ವಾಗತಿಸಿ, ಡಾ.ಸಿ.ಎಂ. ಹನೀಫ್ ಬೆಳ್ಳಾರೆ ವಂದಿಸಿದರು.