Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ತೂಕ ಕಳೆದುಕೊಳ್ಳಲು...

ತೂಕ ಕಳೆದುಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ಉಪಯುಕ್ತ ಡಯಟ್ ಮಾಹಿತಿ

ವಾರ್ತಾಭಾರತಿವಾರ್ತಾಭಾರತಿ1 Sept 2016 5:17 PM IST
share
ತೂಕ ಕಳೆದುಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ಉಪಯುಕ್ತ ಡಯಟ್ ಮಾಹಿತಿ

ತೂಕ ಕಳೆದುಕೊಳ್ಳಬೇಕೆಂದಿದ್ದರೆ ಮತ್ತು ನಿಭಾಯಿಸಬೇಕೆಂದಿದ್ದಲ್ಲಿ ಸರಿಯಾದ ಆಹಾರ ಸೇವಿಸುವುದೇ ಗುರಿಯಾಗಿರಬೇಕು. ಕೆಲವೊಮ್ಮೆ ನಾವು ಕೆಲವು ಆಹಾರವನ್ನು ನಮಗೆ ಹಾನಿಕರ ಎಂದುಕೊಂಡು ತಿನ್ನುವುದು ಬಿಡುತ್ತೇವೆ. ಆದರೆ ಎಲ್ಲಾ ರೀತಿಯ ಆಹಾರ ಸೇವಿಸುವ ಅಗತ್ಯವಿದೆ. ವೈದ್ಯರು ಹೇಳದ ಹೊರತು ಯಾವುದೇ ಆಹಾರ ತ್ಯಜಿಸಬೇಡಿ.

ಸರಿಯಾಗಿ ಕೂತು ಆಹಾರ ಸೇವಿಸಿ

ನಿಮ್ಮ ಊಟದ ಕೋಣೆಯಲ್ಲಿ ಟಿವಿ ಇಲ್ಲದಿರುವುದನ್ನು ಖಚಿತಪಡಿಸಿ. ಏಕೆಂದರೆ ಆಹಾರದ ಕಡೆಗೆ ಗಮನ ಕೊಡದೆ ತಿನ್ನುವುದರಿಂದ ಸುಲಭವಾಗಿ ತೂಕ ಹೆಚ್ಚಾಗಲಿದೆ. ಮೇಜಿನ ಮೇಲೆ ಸರಿಯಾಗಿ ಕುಳಿತು ತಿನ್ನುವುದು ಮತ್ತು ನಿಧಾನವಾಗಿ ತಿನ್ನುವುದು, ಕುಟುಂಬದ ಜೊತೆಗೆ ಮಾತನಾಡುತ್ತಾ ತಿನ್ನುವುದರಿಂದ ಗಮನ ಕೊಟ್ಟು ಆರೋಗ್ಯಕರ ಆಹಾರ ಸೇವಿಸಲು ಸಾಧ್ಯವಾಗುತ್ತದೆ. ಇತರ ಕೆಲಸದಲ್ಲಿ ತೊಡಗಿಕೊಂಡು ಒಟ್ಟಾರೆ ಆಹಾರ ಬಾಯಿಗೆ ಇಳಿಸುವುದರಿಂದ ಸಾಕಷ್ಟು ಆಹಾರ ಹೊಟ್ಟೆಗೆ ಹೋಗಿಲ್ಲ ಎಂದು ಅನಿಸಿ ಅತಿಯಾಗಿ ಭೋಜನ ಮಾಡುವ ಸಾಧ್ಯತೆಯಿದೆ.

ಪ್ರತೀ ಬೆಳಗ್ಗೆ ಒಂದು ಮೊಟ್ಟೆ ತಿನ್ನಿ

ನಿಮ್ಮ ತೂಕ ನಿಯಂತ್ರಿಸಬೇಕೆಂದಿದ್ದರೆ ಬೆಳಗಿನ ಉಪಾಹಾರಕ್ಕೆ ಮೊಟ್ಟೆ ಸೇವಿಸುವುದು ಬುದ್ಧಿವಂತ ಕೆಲಸವಾಗಿರುತ್ತದೆ. ಕೃತಕವಾಗಿ ರುಚಿ ತಂದ, ಸಂಸ್ಕರಿತ ಮತ್ತು ಮೊದಲೇ ಸಿಹಿ ಮಾಡಿರುವ ಧಾನ್ಯಗಳ ಉಪಾಹಾರಗಳು ನಿಮಗೆ ಬಯಸದೆ ಇರುವ ಕಿಲೋಗಳನ್ನು ಕೊಡಬಹುದು. ಮೊಟ್ಟೆಗಳು ಪ್ರೊಟೀನ್ ಮತ್ತು ವಿಟಮಿನ್‌ಗಳನ್ನು ದೇಹಕ್ಕೆ ಕೊಟ್ಟು ದೀರ್ಘ ಸಮಯ ಹೊಟ್ಟೆ ತುಂಬಿರುವಂತೆ ಮಾಡುತ್ತವೆ.

ವಾರಕ್ಕೆ ಎರಡು ಬಾರಿ ಮೀನು ತಿನ್ನಿ

ಎಣ್ಣೆಯಂಶವಿರುವ ಮೀನು ಸೇವಿಸುವುದು ಉತ್ತಮ. ಇದರಿಂದ ಪೌಷ್ಠಿಕಾಂಶ ಮತ್ತು ಒಮೆಗಾ 3ಎಸ್ ಸಿಗುತ್ತದೆ. ನಿಮ್ಮ ಹೃದಯ, ಚರ್ಮಕ್ಕೂ ಒಳಿತಾಗಲಿದ್ದು, ತೂಕವೂ ಕಡಿಮೆಯಾಗಲಿದೆ.

ಕೆಲವೊಮ್ಮೆ ಮಾಂಸವೂ ಸೇವಿಸಿ

ದಿನ ಬಿಟ್ಟು ದಿನ ಮಾಂಸ ಸೇವನೆ ಅನಗತ್ಯ. ಆದರೆ ಆಗಾಗ ಸೇವಿಸುವುದು ಸಾಕಷ್ಟು ಆರೋಗ್ಯಕರ. ಪೌಷ್ಠಿಕಾಂಶಗಳು ಮಾಂಸದಲ್ಲಿ ಹೆಚ್ಚಾಗಿರುತ್ತವೆ. ದೀರ್ಘಕಾಲ ಹೊಟ್ಟೆ ತುಂಬಿರುವಂತೆ ಮಾಡುತ್ತದೆ.

ಇಡೀ ದಿನ ತಿನ್ನುತ್ತಿರುವುದು ಸರಿಯಲ್ಲ

ಊಟದ ಮಧ್ಯೆ ಸಿಕ್ಕಿದ್ದೆಲ್ಲ ತಿನ್ನಬಾರದು. ಹಾಗೆ ಮಾಡುವುದರಿಂದ ಅಗತ್ಯಕ್ಕಿಂತ ಹೆಚ್ಚು ಕ್ಯಾಲರಿಯನ್ನು ದೇಹಕ್ಕೆ ತುಂಬುತ್ತೀರಿ. ಮುಖ್ಯ ಸಮಯದ ಊಟವನ್ನೇ ಸಮತೋಲಿತ ಪ್ರೊಟೀನ್, ಕಾರ್ಬೋಹೈಡ್ರೇಟ್ ಮತ್ತು ತರಕಾರಿಗಳ ಮೂಲಕ ಸೇವಿಸಿ.

ನೀರು ಕುಡಿಯಿರಿ

ದುಬಾರಿ ಹಣ್ಣಿನ ರಸ, ಫಿಝೀ ಪಾನೀಯ ಮತ್ತು ಸ್ಮೂತಿಗಳನ್ನು ಹೊರಗಿನಿಂದ ಸೇವಿಸುವುದು ಸರಿಯಲ್ಲ. ಇಂತಹ ಸಕ್ಕರೆ ತುಂಬಿದ ಪಾನೀಯಗಳೇ ಹೊಟ್ಟೆಯ ಕೊಬ್ಬನ್ನು ಹೆಚ್ಚಾಗಿಸುತ್ತವೆ. ಬಾಯಾರಿಕೆಯಾದಾಗ ನೀರು ಕುಡಿಯಿರಿ. ಆಂಟಿ ಆಕ್ಸಿಡಂಟ್ ಹೆಚ್ಚಾಗಿರುವ ಗ್ರೀನ್ ಟೀ ಕುಡಿಯಬಹುದು. ಇಡೀದಿನ ಹೈಡ್ರೇಟೆಡ್ ಆಗಿರುವುದು ಪರಿಪೂರ್ಣ ಆರೋಗ್ಯವನ್ನು ಕೊಡಲಿದೆ.

ಲೇಬಲ್ ಓದಿ

ಆಹಾರದ ಮೇಲಿರುವ ಲೇಬಲ್‌ಗಳು ದಾರಿ ತಪ್ಪಿಸುವ ಸಾಧ್ಯತೆಯಿದೆ. ಕಡಿಮೆ ಕೊಬ್ಬು ಅಥವಾ ಹಗುರ ಎನ್ನುವ ವಸ್ತುಗಳಿಗೆ ರುಚಿ ಬರಲು ಸಕ್ಕರೆ ತುಂಬಲಾಗಿರುತ್ತದೆ. ಡಯಟ್ ಎನ್ನುವ ಶಬ್ದ ಕೇಳಿ ಹೆಚ್ಚು ತಿಂದು ತೂಕ ಏರಿಸಿಕೊಳ್ಳುವವರೇ ಹೆಚ್ಚು.

ಯಾವಾಗಲೂ ತುಪ್ಪ ಬೇಡ ಎನ್ನಬೇಡಿ

ಹಾಲು ಸೇವಿಸುವುದಿಲ್ಲವೆ? ಹಾಲಿನಲ್ಲಿರುವ ಕೆನೆಯಲ್ಲಿ ವಿಟಮಿನ್‌ಗಳಿರುತ್ತವೆ. ಅದು ಆರೋಗ್ಯಕ್ಕೆ ಉತ್ತಮ. ಸಹಜವಾದ ಬೆಣ್ಣೆಗಿಂತ ಮನುಷ್ಯ ಮಾಡಿರುವ ಬೆಣ್ಣೆ ಉತ್ತಮವೆನ್ನುವ ಭಾವನೆಯೂ ತಪ್ಪು.

ಮನೆಯಲ್ಲೇ ತಯಾರಾದ ಆಹಾರ

ಸಿದ್ಧ ಪ್ಯಾಕೇಜ್ಡ್, ಸಂಸ್ಕರಿತ ಆಹಾರದಲ್ಲಿ ರಾಸಾಯನಿಕಗಳಿದ್ದು, ದೀರ್ಘಕಾಲದಲ್ಲಿ ಹಾನಿಕರ. ಮನೆಯಲ್ಲೇ ತಯಾರಾದ ಆಹಾರಗಳು ಅಗ್ಗವಾಗಿದ್ದು ಹೆಚ್ಚು ಪೌಷ್ಠಿಕಾಂಶಗಳನ್ನು ಹೊಂದಿರುತ್ತವೆ. ಹೊರಗೆ ತಿನ್ನುವ ವ್ಯಕ್ತಿಗಳು ಬೇಗನೇ ತೂಕ ಬೆಳೆಸಿಕೊಂಡು ಆರೋಗ್ಯ ಸಮಸ್ಯೆಗಳನ್ನೂ ತಂದುಕೊಳ್ಳುತ್ತಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X