ಹೊಡೆದಾಟ: ಇಬ್ಬರು ಆಸ್ಪತ್ರೆಗೆ ದಾಖಲು
ಪುತ್ತೂರು, ಸೆ.1: ಮುಂಡೂರು ಗ್ರಾಮದ ಅಜ್ಜಿಕಟ್ಟೆಯಲ್ಲಿ ತಂಡಗಳೊಳಗೆ ಹೊಡೆ ದಾಟ ನಡೆದು ಇಬ್ಬರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮುಂಡೂರು ಗ್ರಾಮದ ಅಜ್ಜಿಕಟ್ಟೆ ಎಂಬಲ್ಲಿ ರುದ್ರಭೂಮಿಗೆಂದು ಗ್ರಾಪಂ 2 ಎಕ್ರೆ ಜಾಗವನ್ನು ಕಾಯ್ದಿರಿಸಿತ್ತು. ಈ ಜಾಗವನ್ನು ಸರ್ವೇ ನಡೆಸಲು ಪುತ್ತೂರು ಸಹಾ ಯಕ ಕಮೀಷನರ್ರ ಆದೇಶದಂತೆ ಕಂದಾಯ ಅಧಿಕಾರಿಗಳು ತೆರಳಿದ್ದರು. ಈ ವೇಳೆ ಅಬ್ದುಲ್ ಕುಂಞಿ ಮುಂಡೂರು ಎಂಬವರು ರುದ್ರಭೂಮಿಯ ಸರ್ವೇಗೆ ಬಂದ ಕಂದಾಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸುತ್ತಿದ್ದರು ಎನ್ನಲಾಗಿದೆ.
ಇದೇ ವೇಳೆ ಅಲ್ಲಿಗೆ ಆಗಮಿಸಿದ ಸ್ಥಳೀಯರಾದ ಯೂಸುಫ್, ಉಮರ್, ಇಬ್ರಾಹೀಂ ಎಂಬವರ ನಡುವೆ ಮಾತಿನ ಚಕಮಕಿ ನಡೆದು ಬಳಿಕ ಹೊಡೆದಾಟ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಬ್ದುಲ್ಕುಂಞಿ ಮತ್ತು ಯೂಸುಫ್ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ರುದ್ರಭೂಮಿ ವಿಚಾರದಲ್ಲಿ ಹಿಂದೆ ವಿವಾದ ಉಂಟಾಗಿತ್ತು, ಇದರ ಹಿನ್ನೆಲೆಯಲ್ಲಿ ಹೊಡೆದಾಟ ನಡೆದಿರುವುದಾಗಿ ತಿಳಿದು ಬಂದಿದೆ.
Next Story