ಕುಂದಾಪುರ, ಸೆ.1: ಕೋಟೇಶ್ವರ ಗ್ರಾಮದ ಸರ್ಜನ್ ಆಸ್ಪತ್ರೆಯ ಬಳಿ ರಾ.ಹೆ. 66ರಲ್ಲಿ ಬುಧವಾರ ರಾತ್ರಿ 7:30ಕ್ಕೆ ಬೈಕೊಂದು ಸ್ಕೀಡ್ ಆದ ಪರಿಣಾಮ ಬೈಕ್ಸವಾರ ನಾಗಪ್ಪ ನರಗುಂದ ಮೃತಪಟ್ಟಿದ್ದಾರೆ. ಸಹಸವಾರ ಪ್ರವೀಣ್ ಎಂಬವರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ ಯುತ್ತಿದ್ದಾರೆ.