Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಜನರ ರಕ್ಷಣೆಗಾಗಿ ಈ ಐಎಎಸ್ ಅಧಿಕಾರಿ ಏನು...

ಜನರ ರಕ್ಷಣೆಗಾಗಿ ಈ ಐಎಎಸ್ ಅಧಿಕಾರಿ ಏನು ಮಾಡಿದರು ನೋಡಿ !

ಅಪಾಯ ಲೆಕ್ಕಿಸದೆ ಕರ್ತವ್ಯ ಪಾಲಿಸಿದ ಅಪರೂಪದ ಅಧಿಕಾರಿ

ವಾರ್ತಾಭಾರತಿವಾರ್ತಾಭಾರತಿ2 Sept 2016 12:41 PM IST
share
ಜನರ ರಕ್ಷಣೆಗಾಗಿ ಈ ಐಎಎಸ್ ಅಧಿಕಾರಿ ಏನು ಮಾಡಿದರು ನೋಡಿ !

ಪಾಟ್ನಾ, ಸೆ.2: ಇತ್ತೀಚೆಗೆ ಬಿಹಾರದ ಸಾವಿರಾರು ಹಳ್ಳಿಗಳ ಲಕ್ಷಗಟ್ಟಲೆ ಜನರು ಪ್ರವಾಹ ಪರಿಸ್ಥಿತಿಯಿಂದ ಕಂಗಾಲಾಗಿದ್ದ ಸಮಯದಲ್ಲಿ ಬಲಿಯ ಜಿಲ್ಲೆಯ ಬೈರಿಯಾ ಎಂಬ ಹಳ್ಳಿಗೂ ಪ್ರವಾಹದ ಎಚ್ಚರಿಕೆಯನ್ನು ನೀಡಲಾಗಿತ್ತು. ಈ ಗ್ರಾಮ ಹಾಗೂ ಸುತ್ತಮುತ್ತಲಿನ ಒಂದು ಡಜನ್ ಗ್ರಾಮಗಳನ್ನು ಪ್ರವಾಹದಿಂದ ರಕ್ಷಿಸುವ 60 ವರ್ಷ ಹಳೆಯದಾದ ಅಣೆಕಟ್ಟೊಂದು ದುಬೆಚಪಾರ ಜಿಲ್ಲೆಯಲ್ಲಿತ್ತಾದರೂ ಈ ಅಣೆಕಟ್ಟೂ ದುರಸ್ತಿಯಲ್ಲಿತ್ತು. ಆದರೆ ನೀರಿನ ಒತ್ತಡದಿಂದ ದುರಸ್ತಿಯ ನಡುವೆಯೂ ಈ ಅಣೆಕಟ್ಟು ಕುಸಿಯಬಹುದೆಂಬ ಮುನ್ಸೂಚನೆ ದೊರೆತ ಕೂಡಲೇ ಅಪಾಯದ ಎಚ್ಚರಿಕೆ ನೀಡಲಾಗಿತ್ತು. ಇಂತಹ ಒಂದು ಸಂಕಷ್ಟದ ಸಮಯದಲ್ಲಿಯೇ ಬಲಿಯಾ ಜಿಲ್ಲೆಯ ಹಿರಿಯ ಡಿವಿಷನಲ್ ಮ್ಯಾಜಿಸ್ಟ್ರೇಟ್ ಆಗಿದ್ದ ಅರವಿಂದ್ ಕುಮಾರ್ ಎಂಬ ಯುವ ಐಎಎಸ್ ಅಧಿಕಾರಿಯ ಕರ್ತವ್ಯನಿಷ್ಠೆ ಹೊರಜಗತ್ತಿಗೆ ತಿಳಿದು ಬಂದಿತ್ತು.

ಅಣೆಕಟ್ಟು ಅಪಾಯದಲ್ಲಿದೆಯೆಂಬ ಮಾಹಿತಿ ಅರವಿಂದ್ ಕುಮಾರ್ ಅವರಿಗೆ ಆಗಸ್ಟ್ 26 ರ ರಾತ್ರಿ ದೊರೆಯುತ್ತಲೇ ಅವರು ಕಾರನ್ನೇರಿ ಮುಂಜಾವು ಸುಮಾರು 2 ಗಂಟೆಯ ಹೊತ್ತಿಗೆ ಬೈರಿಯಾ ತಲುಪಿದ್ದರು. ಬೋಟೊಂದರ ಸಹಾಯದಿಂದ ಅವರು ಅಣೆಕಟ್ಟು ದುರಸ್ತಿ ನಡೆಯುತ್ತಿದ್ದ ಸ್ಥಳಕ್ಕೆ ಬಂದಾಗ ಅಲ್ಲಿ ಭಯಭೀತ ಜನರನ್ನು ನೋಡಿ ಅವರಿಗೆ ಧೈರ್ಯ ತುಂಬಿದರಲ್ಲದೆ, ಗ್ರಾಮಸ್ಥರಿಗೆ ತಮ್ಮ ಮನೆಗಳನ್ನು ತೊರೆದು ರಾಷ್ಟ್ರೀಯ ಹೆದ್ದಾರಿ ಸಮೀಪದ ಎತ್ತರದ ಪ್ರದೇಶಗಳಿಗೆ ತೆರಳುವಂತೆ ಸೂಚನೆ ನೀಡಿದರು. ತಮ್ಮ ಸಿಬ್ಬಂದಿಯ ಮೂಲಕ ಅಲ್ಲಿನ ನಾವಿಕರನ್ನು ಎಚ್ಚರಿಸಿ ಜನರ ರಕ್ಷಣೆಗೆ ಧಾವಿಸುವಂತೆ ಹೇಳಿದರು. ಅವರಿಗೆ ತಮ್ಮ ಕಿಸೆಯಿಂದಲೇ ಡೀಸೆಲ್ ಮತ್ತಿತರ ಅಗತ್ಯ ವಸ್ತುಗಳನ್ನು ಖರೀದಿಸಲು ಹಣ ನೀಡಿದರು.

ಅಲ್ಲಿನ ನಿರ್ಮಾಣ ಸ್ಥಳದಲ್ಲಿ ಹಲವಾರು ಜಿಯೋ ಬ್ಯಾಗುಗಳಿರುವುದನ್ನು ಗಮನಿಸಿದ ಅವರು ಈ ಚೀಲಗಳನ್ನು ಅಣೆಕಟ್ಟಿಗೆ ಅಡ್ಡಲಾಗಿ ಇರಿಸಿ ಗ್ರಾಮದೆಡೆಗೆ ಅಣೆಕಟ್ಟಿನ ನೀರು ಹರಿದು ಬರದಂತೆ ಮಾಡಲು ತಾತ್ಕಾಲಿಕ ವ್ಯವಸ್ಥೆ ಮಾಡಲು ನಿರ್ಧರಿಸಿದರು. ಆದರೆ ಅಲ್ಲಿರುವ ಯಾರೂ ಈ ಚೀಲಗಳನ್ನು ಎತ್ತಿ ಅಣೆಕಟ್ಟಿನ ಬದಿಯಲ್ಲಿ ಇಡಲು ಧೈರ್ಯ ತೋರದ್ದರಿಂದ ಸ್ವತಹ ಅರವಿಂದ್ ಕುಮಾರ್ ಅವರೇ ಚೀಲಗಳನ್ನು ತಲೆಯಲ್ಲಿ ಹೊತ್ತು ಸಾಗಿದರು. ಅವರನ್ನು ನೋಡುತ್ತಲೇ ಹಲವಾರು ಮಂದಿ ಸಹಾಯ ಮಾಡಲು ಮುಂದೆ ಬಂದು ಸುಮಾರು 100-150 ಮಂದಿ ಮಾನವ ಸರಪಳಿ ನಿರ್ಮಿಸಿ ಚೀಲಗಳನ್ನು ಇರಿಸಿದರು. ಹೀಗೆ ಸುಮಾರು ಒಂದು ಗಂಟೆಯೊಳಗೆ 3.5 ಕಿಮಿ ಉದ್ದದ ಅಣೆಕಟ್ಟಿನ ಸುತ್ತಲೂ ಈ ಗೋಣಿಗಳನ್ನಿರಿಸಲಾಯಿತು.

ಪರಿಸ್ಥಿತಿ ನಿಯಂತ್ರಣಕ್ಕೆ ಬಂತೆಂದು ಅರಿತ ಕೂಡಲೇ ಅರವಿಂದ್ ಕುಮಾರ್ ಅವರು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗೆ ಸುದ್ದಿ ಮುಟ್ಟಿಸಿದರು, ಕೂಡಲೇ ಆಗಮಿಸಿದ ತಂಡ ಅಪಾಯದಲ್ಲಿರುವ ಗ್ರಾಮಸ್ಥರನ್ನು ಸ್ಥಳಾಂತರಿಸಿದರು. ಹೀಗೆ ಸ್ಥಳಾಂತರ ಪ್ರಕ್ರಿಯೆ ಪೂರ್ಣಗೊಂಡ ನಂತರವಷ್ಟೇ ಅಣೆಕಟ್ಟು ಕುಸಿದಿತ್ತು. ಆದರೆ ಗ್ರಾಮಸ್ಥರನ್ನೆಲ್ಲಾ ಸುರಕ್ಷಿತ ಸ್ಥಳಕ್ಕೆಸ್ಥಳಾಂತರಿಸಲಾಗಿದ್ದರಿಂದ ಹೆಚ್ಚಿನ ಸಮಸ್ಯೆಯಾಗಿರಲಿಲ್ಲ.

ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಅಭಿಮಾನಿಯಾಗಿರುವ ಅರವಿಂದ್ ಕುಮಾರ್ ವಾರಣಾಸಿಯ ಬಡ ಕುಟುಂಬವೊಂದರಿಂದ ಬಂದವರು. ಅವರ ಕಾಲೇಜು ಶಿಕ್ಷಣಕ್ಕೆ ಅವರ ಸ್ನೇಹಿತರೇ ಹಣ ಒಟ್ಟುಗೂಡಿಸಿ ಸಹಾಯ ಮಾಡಿದ್ದರು. ಕಳೆದ ಜುಲೈ ತಿಂಗಳಲ್ಲಿ ಅವರು ಬಲಿಯಾ ಜಿಲ್ಲೆಯಲ್ಲಿ ಅಧಿಕಾರ ವಹಿಸಿಕೊಂಢಾಗೆ ಅವರಿಗೆ 28 ವರ್ಷ ವಯಸ್ಸಾಗಿತ್ತು.

ಈ ಅಪರೂಪದ ಅಧಿಕಾರಿಯ ಜನಸೇವೆಯ ವೈಖರಿ ಜನಮಾನಸದಲ್ಲಿ ಅಚ್ಚಳಿಯದೇ ಉಳಿಯುವುದಂತೂ ಖಂಡಿತ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X