Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಹೀಗೊಂದು ‘ಯುಟೋಪಿಯಾ’ ಕನಸು

ಹೀಗೊಂದು ‘ಯುಟೋಪಿಯಾ’ ಕನಸು

ಚಂದ್ರಶೇಖರ ಐಜೂರು

ವಾರ್ತಾಭಾರತಿವಾರ್ತಾಭಾರತಿ2 Sept 2016 11:27 PM IST
share
ಹೀಗೊಂದು ‘ಯುಟೋಪಿಯಾ’ ಕನಸು

ಅತಿಹೆಚ್ಚು ಮುಗ್ಧರನ್ನು, ಮೂರ್ಖರನ್ನು, ಅಮಾಯಕರನ್ನು ಮತ್ತು ಕಮಂಗಿಗಳನ್ನು ತುಂಬಿಕೊಂಡ ಸಮಾಜ ನಮ್ಮದು. ಹೀಗಾಗಿಯೇ ಇಲ್ಲಿ ಅನೇಕ ಸಲ ತರ್ಕಕ್ಕಿಂಥ ಹಟಮಾರಿತನ ಮೇಲುಗೈ ಸಾಧಿಸಿ ಬಿಡುತ್ತದೆ. ಇರಲಿಕ್ಕೊಂದು ಮನೆ, ಒಂದಿಷ್ಟು ಭೂಮಿ, ಮಾಡಲಿಕ್ಕೊಂದು ಕೆಲಸ, ಮೇಯಿಸಲು ಎರಡು ಹಸು, ತೊಡಲಿಕ್ಕೆ ಮೂರು ಜೊತೆ ಬಟ್ಟೆ? ಇವಿಷ್ಟು ಕೊಟ್ಟುಬಿಟ್ಟರೆ ಸಾಕು ದಲಿತರು ಆರಾಮವಾಗಿ ತಮ್ಮಪಾಡಿಗೆ ತಾವು ಇದ್ದುಬಿಡುತ್ತಾರೆ; ಇವಿಷ್ಟು ಕೊಟ್ಟುಬಿಟ್ಟರೇ ಸಾಕು ದಲಿತರ ಮೇಲೆ ಯಾವ ಅಟ್ರಾಸಿಟಿನೂ ನಡೆಯಲ್ಲ ಪಟ್ರಾಸಿಟಿನೂ ನಡೆಯಲ್ಲ, ಎಲ್ಲ ಎಲ್ಲವೂ ಸುಖವಾಗಿದ್ದು ಬಿಡುತ್ತವೆ ಎಂದು ಮುಗ್ಧವಾಗಿ ನಂಬಿಕೊಂಡ ಜನ ಸಮಾಜದಲ್ಲಿ ನಾನು ನೀವೆಲ್ಲ ಬದುಕುತ್ತಿದ್ದೀವಿ ಅನ್ನೋದೇ ಇವತ್ತಿನ ದುರಂತ.

ಇಚ್ಞಜಜ್ಞಿಜ ಠಿಠಿಛ್ಟ್ಞಿ ಟ್ಛ ಅಠ್ಟಿಟ್ಚಜಿಠಿಜಿಛಿ ಟ್ಞ ಈಚ್ಝಜಿಠಿ ಎಂಬ ಹೊಸದೊಂದು ಥಿಯರಿ ಈಗ ಹುಟ್ಟುಕೊಂಡಿದೆ. ದಲಿತನೊಬ್ಬ ತನ್ನ ಸ್ಥಾನಕ್ಕೆ ತಕ್ಕಂತೆ ಜಾತಿ ಶೋಷಣೆ, ಜಾತಿ ತಾರತಮ್ಯ, ಜಾತಿ ದೌರ್ಜನ್ಯವನ್ನು ಅನುಭವಿಸುವ ವಿವಿಧ ಬಗೆಯನ್ನು ಮಂಡಿಸುವ ಹೊಸ ಸಿದ್ಧಾಂತವಿದು. ವಿಶ್ವವಿದ್ಯಾನಿಲಯದ ಡಿ-ಗ್ರೂಪ್ ನೌಕರನೊಬ್ಬ ತನ್ನ ವೃತ್ತಿ ತನ್ನ ಸ್ಥಾನಕ್ಕೆ ತಕ್ಕಂತೆ ಅತಿ ಹೀನ ಬರ್ಬರ ಅವಮಾನಗಳನ್ನು ಈ ಜಾತಿವ್ಯವಸ್ಥೆಯ ಸಮಾಜದಲ್ಲಿ ಅನುಭವಿಸಿದರೆ, ಉನ್ನತ ಹುದ್ದೆಯಲ್ಲಿರುವ ದಲಿತ ಕುಲಪತಿಗೂ ಅವನ ಸ್ಥಾನಕ್ಕೆ ತಕ್ಕಂತಹ ಶೋಷಣೆ, ತಾರತಮ್ಯಗಳನ್ನು ಜಾತಿಪ್ರಣೀತ ಮೇಲ್ಜಾತಿ ಮನಸ್ಸುಗಳು ದಂಡಿಯಾಗಿ ಕರುಣಿಸುತ್ತವೆ.
ಉನ್ನತ ಶಿಕ್ಷಣ, ಅಧಿಕಾರ ಕೇಂದ್ರದ ಸ್ಥಾನಗಳನ್ನು ದಲಿತರು ತಲುಪಿಬಿಟ್ಟರೆ ಸಾಕು ಅವರ ಮೇಲೆ ಯಾವ ಬಗೆಯ ದೌರ್ಜನ್ಯಗಳು ನಡೆಯುವುದಿಲ್ಲವೆಂದು ನಂಬಿಕೊಂಡಿರುವುದು ಮೇಲ್ಜಾತಿಗಳಲ್ಲ ಮುಗ್ಧ ದಲಿತರು. ಈ ತರಹದ ದಲಿತರು ಕೊನೆಯವರೆಗೂ ಮುಗ್ಧರಾಗಿಯೇ ಉಳಿದು ಬಿಡುತ್ತಾರೆ ಅನ್ನುವುದೇ ನನ್ನ ಆತಂಕಕ್ಕೆ ಮೂಲ ಕಾರಣ.
ಒಳ್ಳೇ ಸೋಪು, ಶ್ಯಾಂಪು, ಆಧುನಿಕ ಕ್ರೀಮು ತಿಕ್ಕಿ ಸ್ನಾನಮಾಡಿ ಶೋಷಿತನೊಬ್ಬ ಬೀದಿಗೆ ಬಂದುಬಿಟ್ಟರೆ ಸಾಕು ಅವನನ್ನು ಎಂಥ ಮೇಲ್ಜಾತಿಯ ಹೆಣ್ಣು ಸ್ವೀಕರಿಸಿ ಬಿಡುತ್ತಾಳೆ ಎಂದುಕೊಳ್ಳುವುದು ಹುಡುಗನೊಬ್ಬನ ಕಮರ್ಷಿಯಲ್ ಸಿನೆಮಾವೊಂದರ ರೊಮ್ಯಾಂಟಿಕ್ ಕನಸಾಗಿದ್ದರೆ ಸಮಸ್ಯೆಯೇನೂ ಇಲ್ಲ. ಆದರೆ ಇದು ವಾಸ್ತವದಲ್ಲೂ ನಡೆದೇ ತೀರುತ್ತದೆಂದು ನಂಬಿಕೊಳ್ಳುವುದು ಮಾತ್ರ ಮೂರ್ಖತನ.
ವ್ಯಕ್ತಿಯೊಬ್ಬ ಮುಗ್ಧನೋ ಅಮಾಯಕನೋ ಆಗಿದ್ದಾಗ ಆತನನ್ನು ಕನ್ವಿನ್ಸ್ ಮಾಡಲು ನೂರು ಯತ್ನಗಳನ್ನು ಮಾಡಬಹುದು. ಅದೇ ವ್ಯಕ್ತಿ ಮೂರ್ಖನೋ ಕಮಂಗಿಯೋ ಆಗಿದ್ದಾಗ ಇಂಥ ಕನ್ವಿನ್ಸ್ ಮಾಡುವ ಯತ್ನಗಳೇ ಮೂರ್ಖತನವಾಗಿ ಬಿಡುತ್ತವೆ. ಈ ಫೇಸ್ಬುಕ್ಕಿನಲ್ಲಿ ತಕ್ಷಣದ ತೀರ್ಪು ಜಾರಿಮಾಡಲು ಹೊರಡುವವರು ಹೀಗೆ ಶುದ್ಧ ಕಮಂಗಿಗಳಂತಾಡುತ್ತಿರುವುದನ್ನು ನಾನು ಹೆಚ್ಚು ಕಂಡಿದ್ದೇನೆ.
ಇರಲಿ, ಕೊನೆಗೊಂದು ಮಾತು: ‘ಯುಟೋಪಿಯಾ’ ಅನ್ನುವ ಸಿದ್ಧಾಂತವೊಂದು ರಾಜ್ಯಶಾಸ್ತ್ರದ ಅಧ್ಯಯನದಲ್ಲಿ ಬರುತ್ತದೆ. ‘ಯುಟೋಪಿಯಾ’ ಅನ್ನುವುದು ಒಂದು ಆದರ್ಶ ರಾಜ್ಯದ ಕಲ್ಪನೆ. ‘ಯುಟೋಪಿಯಾ’ ಎಂಬ ಆದರ್ಶ ರಾಜ್ಯಕ್ಕಾಗಿ ಕನಸು ಕಾಣುವುದು, ಧ್ಯಾನಿಸುವುದು ತಪ್ಪಲ್ಲ. ಇಲ್ಲಿ ‘ಯುಟೋಪಿಯಾ’ ದೇಶದ ಸ್ಥಾಪನೆಗಾಗಿ ಜಗತ್ತಿನ ಯಾರೂ ಬೇಕಾದರೂ ಕನಸು ಕಾಣಬಹುದು. ಆದರೆ, ಜಗತ್ತಿನ ಭೂಪಟ ಕೈಯಲ್ಲಿ ಹಿಡಿದು ‘ಯುಟೋಪಿಯಾ’ ಅನ್ನುವ ದೇಶಕ್ಕಾಗಿ ಹುಡುಕುವುದು ಮಾತ್ರ ಶುದ್ಧ ಮೂರ್ಖತನ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X