ಪರಿಸರ ಜಾಗೃತಿಗೆ ವಿಶಿಷ್ಟ ಗಣೇಶ
ಉಡುಪಿ, ಸೆ.2: ನಗರದ ಕೋರ್ಟ್ನ ಹಿಂಭಾಗದಲ್ಲಿರುವ ಭವಾನಿ ಎಂಟರ್ ಪ್ರೈಸಸ್ನಲ್ಲಿ ‘ಮಣಿಪಾಲ್ಸ್ಯಾಂಡ್ ಹಾರ್ಟ್’ನ ಕಲಾವಿದರಾದ ವೆಂಕಿ ಪಲಿಮಾರು, ಶ್ರೀನಾಥ್ ಮಣಿಪಾಲ್, ರವಿ ಹಿರೆಬೆಟ್ಟು ಇವರು ಗಣೇಶ ಚತುರ್ಥಿಯ ಅಂಗವಾಗಿ ಡ್ರಾಯಿಂಗ್ ಶೀಟ್, ಕೈಯಿಂದ ತಯಾರಿಸಿದ ಪೇಪರ್ನಿಂದ ವಿಭಿನ್ನ ರೀತಿಯ 10 ಅಡಿ ಎತ್ತರದ ಗಣೇಶನ ಕಲಾಕೃತಿಯನ್ನು ರಚಿಸಿದ್ದಾರೆ.
ಈ ಕಲಾಕೃತಿಯ ಅನಾವರಣ ಸಮಾ ರಂಭ ಸೆ.3ರ ಬೆಳಗ್ಗೆ 10ಕ್ಕೆ ಕೋರ್ಟ್ನ ಹಿಂಭಾಗದಲ್ಲಿರುವ ಭವಾನಿ ಎಂಟರ್ ಪ್ರೈಸಸ್ನಲ್ಲಿ ನಡೆಯಲಿದೆ.
Next Story