Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಒಎನ್‌ಜಿಸಿಯ ಕೊಳ್ಳೆ ಹೊಡೆದ ರಿಲಯನ್ಸ್:...

ಒಎನ್‌ಜಿಸಿಯ ಕೊಳ್ಳೆ ಹೊಡೆದ ರಿಲಯನ್ಸ್: 11,000 ಕೋಟಿ ರೂ.ಗೂ ಅಧಿಕ ಮೊತ್ತದ ಅನಿಲ ಕಳವು

ವಾರ್ತಾಭಾರತಿವಾರ್ತಾಭಾರತಿ3 Sept 2016 11:51 PM IST
share
ಒಎನ್‌ಜಿಸಿಯ ಕೊಳ್ಳೆ ಹೊಡೆದ ರಿಲಯನ್ಸ್: 11,000 ಕೋಟಿ ರೂ.ಗೂ ಅಧಿಕ ಮೊತ್ತದ ಅನಿಲ ಕಳವು

ಮುಂಬೈ, ಸೆ.3: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅನ್ಯಾಯದ ಹಾದಿಯ ಮೂಲಕ ಕೃಷ್ಣಾ-ಗೋದಾವರಿ ನದಿ ದಂಡೆ ಪ್ರದೇಶದ ಒಎನ್‌ಜಿಸಿ ತೈಲ ಬಾವಿಯಿಂದ ಅಕ್ರಮವಾಗಿ ಭಾರೀ ಲಾಭ ಪಡೆದುಕೊಂಡಿದೆ ಎಂದು ದಿಲ್ಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಎ.ಪಿ. ಶಾ ಅವರ ಏಕ ಸದಸ್ಯ ಆಯೋಗವು ಜಿಯೋ ಸೇವೆ ಚಾಲನೆಯ ಮುನ್ನಾ ದಿನ, ಅಂದರೆ ಆಗಸ್ಟ್ 31ರಂದು ದೋಷಾರೋಪಣೆ ಮಾಡಿದೆ.

ಒಎನ್‌ಜಿಸಿಯ ಗೋದಾವರಿ-ಪಿಎಂಎಲ್ ಹಾಗೂ ಕೆಜಿ-ಡಿ5ಗಳಿಂದ 11.122 ಬಿಲಿಯನ್ ಘನ ಮೀಟರ್‌ಗಳಷ್ಟು ಒಎನ್‌ಜಿಸಿ ಗ್ಯಾಸ್ ಆರ್‌ಐಎಲ್‌ನ ಕೆಜಿ-ಡಿ6ಕ್ಕೆ ವರ್ಗಾವಣೆಯಾಗಿದೆ. ಮಿಲಿಯನ್ ಥರ್ಮಲ್ ಯುನಿಟ್‌ಗೆ 4.2 ಡಾಲರ್‌ಗಳಂತೆ ಆರ್‌ಐಎಲ್ ಉತ್ಪಾದಿಸಿರುವ ಒಎನ್‌ಜಿಸಿಗೆ ಸೇರಿದ ಗ್ಯಾಸ್‌ನ ಬೆಲೆ 1.7 ಶತಕೋಟಿ ಡಾಲರ್ ಅಥವಾ ರೂ. 11,055 ಕೋಟಿಗಳಾಗಿವೆ ಎಂದು ಸ್ಕ್ರೋಲ್.ಇನ್ ವರದಿಯೊಂದು ತಿಳಿಸಿದೆ. ಗುರುವಾರದ ರಿಲಯನ್ಸ್ ಜಿಯೋ 4ಜಿ ಸೇವೆಗಳ ಚಾಲನೆಯೇ ಮಾಧ್ಯಮಗಳಿಗೆ ಬಹಳ ದೊಡ್ಡ ಸುದ್ದಿಯಾಗಿ ಬಿಟ್ಟಿತ್ತು. ಆದರೆ ಈ ಜಿಯೋ ಗದ್ದಲದಲ್ಲಿ ಒಂದು ಪ್ರಮುಖ ಹಾಗೂ ರಿಲಯನ್ಸ್‌ಗೆ ಸಂಬಂಧ ಪಟ್ಟ ಬಹುಮುಖ್ಯ ವಿಚಾರ ಸುದ್ದಿಯಾಗಲೇ ಇಲ್ಲ.

ಈ ಅಕ್ರಮ, ಭವಿಷ್ಯದಲ್ಲಿ ಕಂಪೆನಿಗೆ ಸಂಕಷ್ಟ ತಂದೊಡ್ಡಲಿದೆಯೆಂಬುದು ಸ್ಪಷ್ಟವಾಗಿದೆ.

ಆರ್‌ಐಎಲ್ ತನ್ನ ವಿದೇಶಿ ಪಾಲುದಾರರಾದ ಬಿಪಿ ಪಿಎಲ್‌ಸಿ ಹಾಗೂ ನೈಕೋ ರಿಸೋರ್ಸಸ್ ಜತೆ ಒಎನ್‌ಜಿಸಿ ತೈಲ ಬಾವಿಗಳಿಂದ ನೈಸರ್ಗಿಕ ಅನಿಲವನ್ನು ಅಕ್ರಮವಾಗಿ ತೆಗೆದಿದೆಯೆಂದು ಈ ಆಯೋಗ ಹೇಳಿದೆ.

ಕೃಷ್ಣಾ-ಗೋದಾವರಿ ನದಿ ದಂಡೆ ಪ್ರದೇಶದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ನಡೆಸುತ್ತಿರುವ ಕೆಜಿ-ಡಿ6 ಗ್ಯಾಸ್ ಬ್ಲಾಕ್‌ನಿಂದ ಹೆಚ್ಚುವರಿ ವೆಚ್ಚ ವಸೂಲಿಯನ್ನು ರೂ. 9307.22 ಕೋಟಿಗೆ ನಿಗದಿಪಡಿಸಲಾಗಿದೆಯೆಂದು ಸಿಎಜಿ ವರದಿ ತಿಳಿಸಿದ ಒಂದು ತಿಂಗಳ ನಂತರ ಈ ಬೆಳವಣಿಗೆ ನಡೆದಿದೆ.

 ಶಾ ಸಮಿತಿಯ ವರದಿಯನ್ನು ಸಾರ್ವಜನಿಕರು ನೋಡಬಾರದೆಂಬುದು ರಿಲಯನ್ಸ್ ಕಂಪೆನಿಯ ಇಂಗಿತವಾಗಿತ್ತು ಹಾಗೂ ಈ ಬಗ್ಗೆ ಶಾ ಸಮಿತಿಯ ವರದಿಯ ಐದನೆ ಅಧ್ಯಾಯದಲ್ಲಿ ಹೀಗೆಂದು ಉಲ್ಲೇಖವಾಗಿದೆ - ‘‘ಸಮಿತಿ ಮಾಡುವ ಯಾವುದೇ ಶಿಫಾರಸು ಬಹಿರಂಗ ಪಡಿಸಲಾಗುವುದರಿಂದ, ಆರ್‌ಐಎಲ್‌ಗೆ ಹಾಗೂ ಅದರ ಗೌರವಕ್ಕೆ ಸರಿಪಡಿಸಲಾಗದ ಹಾನಿಯುಂಟಾಗಬಹುದು ಎಂದು ಆರ್‌ಐಎಲ್ ಹೇಳಿಕೊಂಡಿದೆ. ಸಮಿತಿಯ ಶಿಫಾರಸಿನ ಆಧಾರದ ಮೇಲೆ ಸರಕಾರ ತನ್ನ ಕ್ರಮಗಳನ್ನು ನಿರ್ಧರಿಸಬಹುದು.’’

ಶಾ ಸಮಿತಿಯ ವರದಿಯ ಹಿನ್ನೆಲೆ

 ಜುಲೈ 2013ರಲ್ಲಿ ಒಎನ್‌ಜಿಸಿ ಹೈಡ್ರೋಕಾರ್ಬನ್ಸ್ ಮಹಾ ನಿರ್ದೇಶಕರಿಗೆ ಪತ್ರ ಬರೆದು ತನ್ನ ತೈಲ ಬಾವಿಯ ಸಮೀಪವೇ ಇರುವ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಬ್ಲಾಕ್ ಬಗ್ಗೆ ಮಾಹಿತಿ ಕೇಳಿತ್ತು. ಈ ವಿಚಾರವನ್ನು ವಿಮರ್ಶಿಸಿ ಒಂದು ನಿರ್ಧಾರಕ್ಕೆ ಬರಲು ಒಎನ್‌ಜಿಸಿ, ಆರ್‌ಐಎಲ್ ಹಾಗೂ ಹೈಡ್ರೋಕಾರ್ಬನ್ಸ್ ಮಹಾನಿರ್ದೇಶಕರು ಸ್ವತಂತ್ರ ಕನ್ಸಲ್ಟಂಟ್ ಒಬ್ಬರನ್ನು ನೇಮಿಸಲು ನಿರ್ಧರಿಸಿದ್ದವು. ಆದರೆ ಈ ಕನ್ಸಲ್ಟಂಟ್‌ನ ವರದಿ ಬರುವ ಮುನ್ನವೇ ಒಎನ್‌ಜಿಸಿ ದಿಲ್ಲಿ ಹೈಕೋರ್ಟ್‌ನ ಮೊರೆ ಹೋಗಿತ್ತು. ‘‘ಆರ್‌ಐಎಲ್ ತನ್ನ ತೈಲಬಾವಿಗಳನ್ನು ಡ್ರಿಲ್ ಮಾಡಿದ ರೀತಿ ಅದೆಷ್ಟು ಪೂರ್ವನಿರ್ಧರಿತವಾಗಿತ್ತೆಂದರೆ ಅದು ಒಎನ್‌ಜಿಸಿ ತೈಲಬಾವಿಯತ್ತ ವಾಲಿತ್ತಲ್ಲದೆ ಅಲ್ಲಿಂದ ಸಂಪನ್ಮೂಲಗಳನ್ನು ತೆಗೆಯುವ ಉದ್ದೇಶ ಹೊಂದಿತ್ತು. ತನ್ನ ತೈಲಬಾವಿಯಿಂದ ರೂ. 30,000 ಕೋಟಿ ಬೆಲೆಯ ನೈಸರ್ಗಿಕ ಅನಿಲವನ್ನು ಆರ್‌ಐಎಲ್ ಕೊಳ್ಳೆ ಹೊಡೆದಿದೆ’’ ಎಂದೂ ಒಎನ್‌ಜಿಸಿ ಆರೋಪಿಸಿತ್ತು. ನಂತರ ಬಂದ ಕನ್ಸಲ್ಟಂಟ್ ವರದಿಯೂ ಇದನ್ನು ದೃಢೀಕರಿಸಿದ್ದರಿಂದ ಈ ವರದಿ ಬಂದ ಎರಡು ವಾರಗಳ ತರುವಾಯ ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್, ಜಸ್ಟಿಸ್ ಶಾ ಸಮಿತಿಯನ್ನು ನೇಮಿಸಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X