Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಬುಡಬುಡಿಕೆ
  4. ದೇಶ ಕಟ್ಟುವುದಕ್ಕೆ ರಿಲಯನ್ಸ್...

ದೇಶ ಕಟ್ಟುವುದಕ್ಕೆ ರಿಲಯನ್ಸ್ ಸಿಮೆಂಟ್...!

ವಾರ್ತಾಭಾರತಿವಾರ್ತಾಭಾರತಿ3 Sept 2016 11:55 PM IST
share
ದೇಶ ಕಟ್ಟುವುದಕ್ಕೆ ರಿಲಯನ್ಸ್ ಸಿಮೆಂಟ್...!

ಮೋದಿ ವಿಶ್ವಕ್ಕೇ ಮೋಡೆಲ್ ಪ್ರಧಾನಿಯಾಗುತ್ತಾರೆ ಎಂದು ಸಂಘಪರಿವಾರ ಸಹಿತ ಮೋದಿ ಭಕ್ತರು ಹೇಳಿಕೆ ನೀಡುತ್ತಲೇ ಇದ್ದರು. ಇದೀಗ ಅದನ್ನು ಸಾಬೀತು ಪಡಿಸುವಂತೆ ಅವರು ಮೋಡೆಲ್ ಆಗಿಯೇ ಬಿಟ್ಟಿರುವುದು ನೋಡಿ ಪತ್ರಕರ್ತ ಎಂಜಲು ಕಾಸಿ ರೋಮಾಂಚನಗೊಂಡು ನೇರವಾಗಿ ಅನಿಲ್ ಅಂಬಾನಿಯವರ ಮನೆಯ ಬಾಗಿಲು ತಟ್ಟಿದ. ‘‘ಯಾರು ಬೇಕಾಗಿತ್ತು?’’ ವಾಚ್‌ಮೆನ್ ಕೇಳಿದ.

‘‘ನರೇಂದ್ರ ಮೋದಿಯವರು ಬೇಕಾಗಿತ್ತು’’ ಕಾಸಿ ಹೇಳಿ ಹಲ್ಲು ಕಿರಿದ.

‘‘ಅದಕ್ಕೆ ನರೇಂದ್ರ ಮೋದಿಯವರ ಮನೆಗೆ ಹೋಗಬೇಕಾಗಿತ್ತು...’’ ವಾಚ್‌ಮೆನ್ ಹೇಳಿದ.

‘‘ಅಲ್ಲಿ ಹೋದ್ರೆ ಅನಿಲ್ ಅಂಬಾನಿ ಮನೆಯಲ್ಲಿದ್ದಾರೆ ಎಂದು ಹೇಳಿದರು. ಅದಕ್ಕೆ ಇಲ್ಲಿಗೆ ಬಂದೆ...’’

‘‘ಆದ್ರೆ ಅವರು ಸ್ಟುಡಿಯೋದಲ್ಲಿ ಶೂಟಿಂಗ್‌ನಲ್ಲಿದ್ದಾರೆ...’’ ವಾಚ್‌ಮೆನ್ ಮುಖಕ್ಕೆ ಹೊಡೆದಂತೆ ಹೇಳಿದ. ‘‘ಸಿನೆಮಾದಲ್ಲಿ ನಟಿಸುತ್ತಿದ್ದಾರಾ ಸಾರ್?’’ ಕಾಸಿ ಕುತೂಹಲದಿಂದ ಕೇಳಿದ.

‘‘ಇಲ್ಲಾರಿ. ಈಗ ಅವರು ವಿಶ್ವಕ್ಕೇ ಮೋಡೆಲ್ ಆಗಲು ಹೊರಟಿದ್ದಾರೆ...’’ ವಾಚ್‌ಮೆನ್ ಹೇಳಿದ.

‘‘ಅದಕ್ಕೆ ಇಲ್ಲೇನು ಮಾಡುತ್ತಿದ್ದಾರೆ ?’’

‘‘ಅದೇರಿ. ಅನಿಲ್ ಅಂಬಾನಿ ಪ್ರಾಡಕ್ಟ್‌ಗಳಿಗೆ ವಿಶ್ವದ ಎಲ್ಲ ದೇಶಗಳಿಗೂ ಇವರೇ ಮೋಡೆಲ್ ಆಗಲಿದ್ದಾರೆ’’ ವಾಚ್‌ಮೆನ್ ಹೇಳಿದ.

‘‘ಸಾರ್...ಅವರ ಒಂದು ಇಂಟರ್ಯೂ ಬೇಕಾಗಿತ್ತು’’ ಕಾಸಿ ಮನವಿ ಮಾಡಿದ. ‘‘ಅವರು ದೇಶ ಕಟ್ಟುವಲ್ಲಿ ಬಿಜಿಯಾಗಿದ್ದಾರೆ ಕಣ್ರೀ...ಈಗ ವಿಶ್ವಕ್ಕೇ ಮೋಡೆಲ್ ಬೇರೆ. ಬೇಕಾದ್ರೆ ನನ್ನದೇ ಇಂಟರ್ಯೂ ತೆಗೆದುಕೊಳ್ಳಿ...’’

‘‘ಅಂದರೆ ದೇಶ ಕಟ್ಟುವುದಕ್ಕೂ ಅಂಬಾನಿಗೂ ಏನು ಸಂಬಂಧ?’’ ಕಾಸಿ ಅರ್ಥವಾಗದೆ ಕೇಳಿದ.

‘‘ದೇಶ ಕಟ್ಟಬೇಕಾದರೆ ಅದಕ್ಕೆ ಭಾರೀ ಪ್ರಮಾಣದಲ್ಲಿ ಸಿಮೆಂಟ್ ಬೇಕಲ್ವಾ...ಈ ನಿಟ್ಟಿನಲ್ಲಿ ರಿಲಯನ್ಸ್ ಸಿಮೆಂಟಿನಿಂದಲೇ ದೇಶ ಕಟ್ಟುವ ಬಗ್ಗೆ ಅವರು ಯೋಚಿಸುತ್ತಿದ್ದಾರೆ. ಈ ಬಗ್ಗೆ ಮಾತುಕತೆಯೂ ನಡೆಯುತ್ತಿದೆ....ಮೋದಿಯ ದೇಶ ನಿರ್ಮಾಣದಲ್ಲಿ ರಿಲಯನ್ಸ್ ಸಿಮೆಂಟಿನ ಮಹತ್ವದ ಬಗ್ಗೆ ಈಗಾಗಲೇ ಸಂಘಪರಿವಾರ ನಾಯಕರೆಲ್ಲ ತಮ್ಮ ತಮ್ಮ ಶಾಖೆಗಳಲ್ಲಿ ಭಾಷಣ ಮಾಡುತ್ತಿದ್ದಾರೆ. ನಿಮಗೆ ಗೊತ್ತಿಲ್ಲವೆ?’’ ವಾಚ್‌ಮೆನ್ ಪ್ರಶ್ನಿಸಿದ.

‘‘ಸಿಮೆಂಟು ರಿಲಯನ್ಸಿನದ್ದಾದರೆ ಮರಳು ಯಾವ ಕಂಪೆನಿಯಿಂದ ಬಳಸುತ್ತಾರೆ ಸಾರ್....’’ ಕಾಸಿ ವಾಚ್‌ಮೆನ್‌ಗೆ ತುಸು ಮರ್ಯಾದೆ ನೀಡಿದ.

‘‘ಮರಳು ಮಾಫಿಯಾದವರಿಗೆ ಪೂರ್ಣ ಸ್ವಾತಂತ್ರವನ್ನು ನೀಡಲಾಗಿದೆ. ದೇಶಕಟ್ಟುವುದಕ್ಕಾಗಿ ಎಷ್ಟು ಬೇಕಾದರೂ ಅಕ್ರಮವಾಗಿ ಮರಳನ್ನು ನದಿಯಿಂದ ಎತ್ತಿರಿ ಎಂದು ಈಗಾಗಲೇ ಮೋದಿ ಸೂಚನೆ ನೀಡಿದ್ದಾರೆ. ರಿಲಯನ್ಸ್ ಸಿಮೆಂಟಿಗೆ ಅಕ್ರಮ ಮರಳು ಸೇರಿಸಿ ದೇಶವನ್ನು ಅತಿ ಬೇಗನೇ ಕಟ್ಟಲಾಗುತ್ತದೆ...’’ ವಾಚ್‌ಮೆನ್ ವಿವರಗಳನ್ನು ನೀಡಿದ.

‘‘ರಿಲಯನ್ಸ್‌ನ ಡಾಟಾಗಳು ಅಗ್ಗವಾಗಿವೆ...ಆದರೆ ಜನರ ರೇಶನ್‌ಗಳ ಬೆಲೆ ಏರುತ್ತಿದೆಯಲ್ಲ...ಇದರ ಬಗ್ಗೆ ಏನು ಹೇಳುತ್ತಾರೆ ಮೋದಿಯವರು?’’ ಕಾಸಿ ಅತ್ಯಾಸಕ್ತಿಯಿಂದ ಕೇಳಿದ.

 ‘‘ರೇಷನ್ ಅಂಗಡಿಯಲ್ಲಿ ಇನ್ನು ಮುಂದೆ ರಿಲಯನ್ಸ್ ಡಾಟಾಗಳು ಬಿಪಿಎಲ್, ಎಪಿಎಲ್ ಕಾರ್ಡ್‌ಗಳಿಗೆ ವಿತರಿಸುವ ಯೋಜನೆಯೊಂದು ನಡೆಯುತ್ತಿದೆ. ರಿಲಯನ್ಸ್‌ನವರಿಗೆ ಸಬ್ಸಿಡಿಯನ್ನು ನೀಡಿ ಅಗ್ಗವಾಗಿ ಡಾಟಾಗಳನ್ನು ಜನರಿಗೆ ರೇಷನ್ ಅಂಗಡಿಯಲ್ಲೇ ಪ್ರತಿ ತಿಂಗಳು ವಿತರಿಸಲಾಗುತ್ತದೆ. ಇದರ ಹೊರೆ ಸರಕಾರಕ್ಕೆ ಬೀಳುವುದರಿಂದ ವಿಶೇಷ ಡಾಟಾ ತೆರಿಗೆಯನ್ನು ಜನರ ಮೇಲೆ ವಿಧಿಸಲಾಗುತ್ತದೆ...’’ ವಾಚ್‌ಮೆನ್ ಇನ್ನಷ್ಟು ವಿವರಗಳನ್ನು ನೀಡಿದ.

‘‘ಆದರೆ ಜನರಿಗೆ ಆಹಾರಕ್ಕೆ ಏನು ಮಾಡುವುದು?’’ ಕಾಸಿ ಆತಂಕದಿಂದ ಕೇಳಿದ.

‘‘ನೋಡ್ರಿ....ಮೊಬೈಲ್‌ಗಳಲ್ಲೇ ವಿವಿಧ ಬಗೆಯ ಆಹಾರಗಳನ್ನು ಶೇರ್ ಮಾಡಿ ಹಂಚುವ ವ್ಯವಸ್ಥೆಯನ್ನು ಮಾಡಲಾಗುತ್ತದೆ...ಎಲ್ಲ ಬಡವರಿಗೆ ಬಿರಿಯಾನಿ(ಕಡ್ಡಾಯವಾಗಿ ಚಿಕನ್ ಮಾತ್ರ) ಇನ್ನಿತರ ಆಹಾರಗಳನ್ನು ಮೊಬೈಲ್ ಮೂಲಕವೇ ರಿಲಯನ್ಸ್ ಡಾಟಾಗಳಲ್ಲಿ ದೇಶಾದ್ಯಂತ ವಿತರಿಸಲಾಗುತ್ತದೆ’’ ವಾಚ್‌ಮೆನ್ ಹೇಳಿದ.

‘‘ರಿಲಯನ್ಸ್ ಮೊಬೈಲ್‌ಗಳ ಮುಖಾಂತರ ಆಹಾರ ವಿತರಣೆಯೇ...’’ ಕಾಸಿ ಅಚ್ಚರಿಯಿಂದ ಕೇಳಿದ.

‘‘ಹೌದ್ರೀ....ಡಾಟಾಗಳಿಗಷ್ಟೇ ಚಾರ್ಜಾಗತ್ತೆ. ಆದರೆ ಆಹಾರ ಮಾತ್ರ ಪುಕ್ಕಟೆಯಾಗಿ ವಿತರಣೆಯಾಗುತ್ತೆ...’’ ವಾಚ್‌ಮೆನ್ ಹೇಳಿದ.

‘‘ಅಂದರೆ...’’ ಕಾಸಿಗೆ ಅರ್ಥವಾಗಲಿಲ್ಲ.

‘‘ಅದೇರಿ...ಮೊಬೈಲ್‌ನಲ್ಲೇ ವಾಟ್ಸ್‌ಆ್ಯಪ್ ಮೂಲಕ ಬಗೆ ಬಗೆಯ ಆಹಾರಗಳನ್ನು ಶೇರ್ ಮಾಡಲಾಗುತ್ತೆ. ಮೊಬೈಲ್‌ಗಳಲ್ಲೇ ಬೇರೆ ಬೇರೆ ಆಹಾರಗಳನ್ನು ಡೌನ್‌ಲೋಡ್ ಮಾಡಬಹುದು...ಇದರಿಂದಾಗಿ ಆಹಾರ ಬೇಯಿಸುವ ಸಮಸ್ಯೆಯೇ ಇರುವುದಿಲ್ಲ. ಸಬ್ಸಿಡಿ ಸಿಲಿಂಡರ್‌ಗಳನ್ನೆಲ್ಲ ರದ್ದು ಮಾಡಲಾಗುತ್ತದೆ’’ ವಾಚ್‌ಮೆನ್ ಹೇಳಿದ.

‘‘ಅಲ್ಲಾರಿ...ಮೊಬೈಲ್‌ಗಳಲ್ಲಿ ಆಹಾರಗಳ ಚಿತ್ರಗಳನ್ನ ಡೌನ್‌ಲೋಡ್ ಮಾಡಿ ಅದನ್ನು ತಿನ್ನೋಕ್ಕಾಗತ್ತ?’’ ಕಾಸಿ ಅಚ್ಚರಿಯಿಂದ ಕೇಳಿದ.

 ‘‘ಏನ್ರೀ...ಮೋದಿ ಸರಕಾರ ಯಾವ ಯೋಜನೆಗಳನ್ನು ಹಾಕಿದರೂ ಅದನ್ನು ಟೀಕೆ ಮಾಡುವುದೇ ನಿಮಗೆ ಅಭ್ಯಾಸವಾಗಿ ಹೋಗಿದೆ. ಪೌಷ್ಟಿಕ ಆಹಾರಗಳನ್ನು ರಿಲಯನ್ಸ್ ಮೊಬೈಲ್‌ಗಳ ಮೂಲಕವೇ ನಾವು ಸುಲಭವಾಗಿ, ಉಚಿತವಾಗಿ ತಲುಪಿಸಲು ಯತ್ನಿಸಿದರೆ ನೀವು ಅದಕ್ಕೂ ಅಡ್ಡಗಾಲು ಹಾಕುತ್ತಿದ್ದೀರಲ್ಲ...ನಮ್ಮದು ಇ ಸರಕಾರ. ಆದುದರಿಂದ ಮೊಬೈಲ್‌ಗಳ ಮೂಲಕವೇ ಆಹಾರವನ್ನು ವಿತರಿಸುತ್ತೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅತ್ಯಗತ್ಯ ವಸ್ತುಗಳನ್ನು ಅಂದರೆ ಬೇಳೆ, ಟೊಮೆಟೊ, ಇವೆಲ್ಲವನ್ನೂ ಮೊಬೈಲ್‌ಗಳಲ್ಲೇ ಡೌನ್‌ಲೋಡ್ ಮಾಡುವ ಮೂಲಕ ಜನರಿಗೆ ತಲುಪಿಸಲಿದ್ದೇವೆ’’ ವಾಚ್‌ಮೆನ್ ತನ್ನ ಜೇಬಿನೊಳಗಿರುವ ಐಫೋನ್ ತೆಗೆದು ಡೌನ್‌ಲೋಡ್ ಮಾಡಿ ತೋರಿಸಿದ.

‘‘ಹಾಗಾದರೆ ಮುಂದಿನ ದಿನಗಳಲ್ಲಿ ನೀರಾವರಿ ವ್ಯವಸ್ಥೆಯನ್ನು ಮೊಬೈಲ್ ಮೂಲಕವೇ ಮಾಡಬಹುದಲ್ಲ?’’ ಕಾಸಿಯೂ ಸಲಹೆ ನೀಡಿದ.

ವಾಚ್‌ಮೆನ್ ಗಂಭೀರವಾಗಿ ತಲೆಯಾಡಿಸಿದ ‘‘ಹೌದು. ಅದಕ್ಕಾಗಿ ರಿಲಯನ್ಸ್ ಇನ್ನೊಂದು ವಿಶೇಷ ಡಾಟಾವನ್ನು ಹೊರ ತರುತ್ತಿದೆ. ಇದರಿಂದಾಗಿ ಜನರು ನೀರು ಬೇಕಾದಾಗೆಲ್ಲ ಮೊಬೈಲ್‌ನಿಂದಲೇ ಡೌನ್‌ಲೋಡ್ ಮಾಡಬಹುದು. ವಿಶ್ವದ ಎಲ್ಲ ನದಿಗಳನ್ನೂ ಈ ಮೊಬೈಲ್ ಮೂಲಕ ನಮ್ಮ ದೇಶದ ಹಳ್ಳಿ ಹಳ್ಳಿಗಳಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಈ ಕಾರಣದಿಂದಲೇ ಹಳ್ಳಿಹಳ್ಳಿಗಳಲ್ಲಿ ರಿಲಯನ್ಸ್ ಟವರ್‌ಗಳು ತಲೆಯೆತ್ತಲು ವಿಶೇಷ ಯೋಜನೆಗಳನ್ನು ಮಾಡಲಾಗುತ್ತಿದೆ. ಈಗಾಗಲೇ ಪಶ್ಚಿಮಘಟ್ಟದಲ್ಲಿರುವ ಬೃಹತ್ ಮರಗಳನ್ನೆಲ್ಲ ಕಡಿದು ಅಲ್ಲಿ ಟವರ್‌ಗಳನ್ನು ನೆಡುವ ಯೋಜನೆಗಳಿಗೂ ನಾವು ಚಾಲನೆ ನೀಡಲಿದ್ದೇವೆ...’’ ಕಾಸಿ ಆತಂಕದಿಂದ ಕೇಳಿದ ‘‘ಮರಗಳು ಕಡಿದರೆ ಮಳೆ ಬರುವುದಿಲ್ಲ ಎಂದು ಹೇಳುತ್ತಾರಲ್ಲ...’’

ವಾಚ್‌ಮೆನ್ ನಕ್ಕ ‘‘ಹೇ...ಎಂತದ್ರೀ ನೀವು. ತಲೆಯಲ್ಲಿ ಮೆದುಳು ಇಲ್ಲವೆ....ಮಳೆಯನ್ನೂ ನಾವು ಮೊಬೈಲ್ ಮೂಲಕವೇ ಡೌನ್‌ಲೋಡ್ ಮಾಡಬಹುದು. ಮಳೆಗಾಗಿ ಮಳೆಗಾಲಕ್ಕೆ ಕಾಯಬೇಕಾಗಿಲ್ಲ. ವಿಶೇಷ ಮೊಬೈಲ್ ಫೋನ್‌ಗಳನ್ನು ಸಬ್ಸಿಡಿಯಲ್ಲಿ ವಿತರಿಸುವ ಯೋಜನೆಯನ್ನೂ ಹಮ್ಮಿಕೊಂಡಿದ್ದೇವೆ....’’

ಕಾಸಿಗೆ ಸಮಾಧಾನವಾಯಿತು. ‘‘ಸಾರ್....ಸೈನಿಕರಿಗೆ ಒಂದೊಂದು ರೂಪಾಯಿ ಕೊಡಿ ಎಂದು ಜನರನ್ನು ಕೇಳಿದ್ದಾರಲ್ಲ...ಸರಿಯಾ ಸಾರ್?’’ ಮತ್ತೆ ಕೇಳಿದ ಕಾಸಿ.

‘‘ದೇಶಕಾಯುವ ಸೈನಿಕರಿಗೆ ಒಂದೊಂದು ರೂಪಾಯಿ ಕೊಡಲು ಸಾಧ್ಯವಿಲ್ಲದವರು ದೇಶದ್ರೋಹಿಗಳು...’’ ವಾಚ್‌ಮೆನ್ ಘೋಷಿಸಿದ.

‘‘ಅಲ್ಲ ಸಾರ್...ತೆರಿಗೆ ಕಟ್ಟುತ್ತೇವೆ...ಅದರಲ್ಲಿ ಬರುವ ಹಣ....’’ ತಡವರಿಸಿ ಕೇಳಿದ.

 ‘‘ನೋಡ್ರೀ...ನಿಮಗೆ ಪುಕ್ಕಟೆ ಆಹಾರ, ಪುಕ್ಕಟೆ ನೀರು, ಪುಕ್ಕಟೆ ಮಳೆ ಎಲ್ಲವನ್ನೂ ಒದಗಿಸಿ ಕೊಟ್ಟ ರಿಲಯನ್ಸ್‌ನವರಿಗೆ ಏನಾದರೂ ಕೊಡಬೇಡವೇ? ಮುಂದಿನ ದಿನಗಳಲ್ಲಿ ಪೊಲೀಸರಿಗಾಗಿ ಎರಡು ರೂಪಾಯಿ, ಗೋರಕ್ಷಕರನ್ನು ಸಾಕಲು ಐದು ರೂಪಾಯಿ, ಆರೆಸ್ಸೆಸ್‌ನ ಪ್ಯಾಂಟ್‌ಗಾಗಿ ಎಂಟಾನೆ, ಇವೆಲ್ಲವನ್ನೂ ಸಂಗ್ರಹಿಸಲು ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದೆ. ದೇಶದ ಭಿಕ್ಷುಕರನ್ನೆಲ್ಲ ಜೈಲಿಗೆ ತಳ್ಳಿ, ನಮ್ಮ ಸರಕಾರ ಭಿಕ್ಷೆ ಬೇಡುವುದಕ್ಕಾಗಿಯೇ ವಿಶೇಷ ಕಚೇರಿ, ಸಚಿವಾಲಯ, ಸಿಬ್ಬಂದಿಯನ್ನು ನೇಮಕ ಮಾಡುತ್ತದೆ. ಭಿಕ್ಷೆ ಬೇಡುವ ತಟ್ಟೆಗಳಿಗಾಗಿ ತಲಾ ನಾಲ್ಕಾನೆಯನ್ನು ಜನರಿಂದಲೇ ಸಂಗ್ರಹಿಸಲಾಗುತ್ತದೆ....’’

ಕಾಸಿಗೆ ತಲೆ ಧಿಂ ಎಂದಿತು.

ಅಷ್ಟರಲ್ಲಿ ಒಳಗಿನಿಂದ ಅಂಬಾನಿಯವರ ಕೂಗು ‘‘ರೀ...ಅಮಿತ್ ಶಾ ಅವರೇ...ಒಮ್ಮೆ ಇಲ್ಲಿಗೆ ಬನ್ನಿ. ಮೋದಿಯವರ ಮೇಕಪ್ ಹೇಗಾಗಿದೆ ನೋಡಿ...’’

‘‘ಇಗೋ ಬಂದೆ ಸಾರ್...’’ ಎಂದವನೇ ವಾಚ್‌ಮೆನ್ ಒಳಗೆ ಓಡಿದ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X