Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಜೀವನಕ್ಕೆ ಮಾರ್ಗದರ್ಶನರಾದ ಶಿಕ್ಷಕರು:...

ಜೀವನಕ್ಕೆ ಮಾರ್ಗದರ್ಶನರಾದ ಶಿಕ್ಷಕರು: ಶೀಲಾ ಟೀಚರ್,ಸಂತೋಷ್ ಸರ್, ಖಲೀಲ್ ಉಸ್ತಾದ್, ಜಲೀಲ್ ಸರ್…

ಶಿಕ್ಷಕರ ದಿನಾಚರಣೆ ವಿಶೇಷ

ಅಶೀರುದ್ದೀನ್ ಮಂಜನಾಡಿಅಶೀರುದ್ದೀನ್ ಮಂಜನಾಡಿ5 Sept 2016 2:41 PM IST
share
ಜೀವನಕ್ಕೆ ಮಾರ್ಗದರ್ಶನರಾದ ಶಿಕ್ಷಕರು: ಶೀಲಾ ಟೀಚರ್,ಸಂತೋಷ್ ಸರ್, ಖಲೀಲ್ ಉಸ್ತಾದ್, ಜಲೀಲ್ ಸರ್…

ನನ್ನ ಜೀವನದಲ್ಲಿ ಹಲವಾರು ಶಿಕ್ಷಕರು ಜ್ಞಾನದ ಬೆಳಕನ್ನು ನೀಡಿ ನನ್ನನ್ನು ಅಜ್ಞಾನದಿಂದ  ಮುಕ್ತಗೊಳಿಸಿದ್ದಾರೆ. ಅವರೆಲ್ಲರಲ್ಲಿಯೂ ನನಗೆ ಸಮಾನ ಗೌರವ , ಪ್ರೀತಿ, ಭಯ ಭಕ್ತಿ ಶಾಶ್ವತ.ಆದರೆ ನನಗೆ ಶಿಕ್ಷಣದ ಜೊತೆಗೆ ಜೀವನದ ಪಾಠವನ್ನು ಕಲಿಸಿದ ಕೆಲವು ಶಿಕ್ಷಕರನ್ನು ನಾನೆಂದೂ ಮರೆಯಲಾರೆ . ಬಡತನದಲ್ಲೇ ಬೆಳೆದು ಒಂದು ಹೊತ್ತಿನ ಊಟಕ್ಕೂ ಪರಿತಪಿಸುವ ಆ ದಿನಗಳಲ್ಲಿ ಶಾಲಾ ಶಿಕ್ಷಕ ಪರೀಕ್ಷಾ ಶುಲ್ಕ ಕಟ್ಟಲಸಾಧ್ಯವಾದ ಸಂದರ್ಭಗಳಲ್ಲಿ ನನ್ನಂತೆ ಹಲವರಿಗೆ ಬೆನ್ನೆಲುಬಾಗಿ ನಿಂತ ನನ್ನ ಪ್ರಾಥಮಿಕ ಹಂತದ ಮೊದಲ ಅಧ್ಯಾಪಕಿ  ಶೀಲಾ ಟೀಚರ್ ಮಂಜನಾಡಿ ಹಿರಿಯ ಪ್ರಾಥಮಿಕ ಶಾಲೆಯ ಪ್ರತಿಯೊಬ್ಬ ವಿಧ್ಯಾರ್ಥಿಯ ಜೀವನದಲ್ಲಿ ಮತ್ತು ಶಿಕ್ಷಣದಲ್ಲಿ ಕೇಂದ್ರ ಬಿಂದುವಾಗಿ ಸದಾ ನೆನಪಲ್ಲಿರುವರು.

ಪ್ರೌಢಶಾಲೆಯಲ್ಲಿ ನನಗೆ ಹೆಚ್ಚು ಪ್ರಭಾವ ಬೀರಿದ ಅಧ್ಯಾಪಕರೆಂದರೆ ಶ್ರೀ ಸಂತೋಷ್ ಕುಮಾರ್ T.N (ಸಂತೋಷ್ ಸರ್)  ಅವರೊಬ್ಬ ಅಧ್ಯಾಪಕ ಮಾತ್ರವಲ್ಲ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಪಕ . ತನ್ನ ವೆಯಕ್ತಿಕ ,ಕೌಟುಂಬಿಕ ವಿಷಯಕ್ಕಿಂತ ಹೆಚ್ಚಾಗಿ ಶಾಲೆ ಮತ್ತು ವಿಧ್ಯಾರ್ಥಿಗಳ ಏಳಿಗೆಗಾಗಿ ಹಗಲು ರಾತ್ರಿ ಶ್ರಮಿಸುವ ಅಧ್ಯಾಪಕ . ನನ್ನ ವಿಧ್ಯಾರ್ಥಿ ಜೀವನದಲ್ಲಿ "ಗುರಿ ಮತ್ತು ಸಾಧನೆ" ಯ ಬಗ್ಗೆ ಸದಾ ಎಚ್ಚರಿಕೆ ನೀಡುತ್ತಿದ್ದ ಅಧ್ಯಾಪಕರು ಅವರೊಬ್ಬರೆ .

ತನ್ನ ಜೀವನವನ್ನು ಮಕ್ಕಳ ಏಳಿಗೆಗಾಗಿ ಮುಡಿಪಾಗಿಟ್ಟವರು.ಅವರ ಅವಿಶ್ರಾಂತ ಪರಿಶ್ರಮದ ಫಲವಾಗಿ ಸರಕಾರಿ ಪ್ರೌಢಶಾಲೆ ಮೊಂಟೆಪದವು ಕರ್ನಾಟಕದಲ್ಲಿ ಗುರುತಿಸಿಕೊಳ್ಳುವಂತಾಗಿದೆ. ಸರದಿಯಂತೆ ಸರಕಾರಿ ಶಾಲೆಗಳು ಮುಚ್ಚುತ್ತಿರುವ ಈ ಸಂದರ್ಭಗಳಲ್ಲಿಯೂ , ಸರಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಕಮ್ಮಿಯೇನಲ್ಲ ಎಂದು ತೋರಿಸಿಕೊಟ್ಟು ಯಶಸ್ವಿಯಾದವರು . ಅವರ ನುಡಿಗಳು ನನ್ನ ನೆನಪಲ್ಲಿ ಹಲವು ಬಾರಿ ಮೂಡಿ ಬಂದು ಬದುಕು ಅರಳಿಸಿವೆ .

ಕಾಲೇಜು ಜೀವನದಲ್ಲಿ ನನಗೆ ಪ್ರಭಾವ ಬೀರಿದ ಅಧ್ಯಾಪಕರೆಂದರೆ ಖಲೀಲು ರಹ್ಮಾನ್ (ಕಲೀಲ್ ಉಸ್ತಾದ್) ಇವರು ಅರೆಬಿಕ್ ವಿಭಾಗದ ಪ್ರೊಫೆಸರ್ ಆಗಿದ್ದರುಇವರ ಪಾಠ ಕ್ಕಿಂತ ಹೆಚ್ಚಾಗಿ ಇವರ ಒಡನಾಟ ನನ್ನ ಜೀವನದಲ್ಲಿ ಬಹಳ ಪ್ರಭಾವ ಬೀರಿದೆ ಸರಳತೆಗೆ ಇನ್ನೊಂದು ಉದಾಹರಣೆ, ಜವಾಬ್ದಾರಿ ನಿಭಾಯಿಸುವಲ್ಲಿ ಅವರಲ್ಲಿ ನಾವು ಕಲಿಯಲು ಬಹಳ ಇದೆ.

ಮತ್ತೋರ್ವರು ಅಬ್ದುಲ್ ಜಲೀಲ್  (ಜಲೀಲ್ ಸರ್) ಇಂಗ್ಲಿಷ್ ಅಧ್ಯಾಪಕರಾಗಿದ್ದರು. ನಾನು ಇಂಗ್ಲಿಷ್ ಅಂದರೆ ಏನು ಅಂತ ಕಲಿತದ್ದು ಅವರಿಂದ.ತಾಳ್ಮೆ, ಸಜ್ಜನಿಕೆ ಸ್ವಭಾವದವರು. ಅವರ ಬೋಧನೆಯು ವಿದ್ಯಾರ್ಥಿಗಳಲ್ಲಿ ಒಂದು ರೀತಿಯ ಬದಲಾವಣೆಯನ್ನು ತರುತ್ತದೆ.ಆಲಿಯಾ ಇಂಟರ್ ನ್ಯಾಷನಲ್ ಅಕಾಡಮಿಯಲ್ಲಿ ಅವರ ವಿದ್ಯೆಯ ಅಮೂಲ್ಯ ಬಿಂದುಗಳನ್ನು ಪಡೆಯುವ ಭಾಗ್ಯ ನನಗೆ ಲಬಿಸಿದ್ದು ದೇವಾನುಗ್ರಹ ಅವರು ಹೊಡೆಯದಿದ್ದರೂ ಒಂದು ರೀತಿಯ ಭಯ,ಪ್ರೀತಿ ನಮಗೆ ಅವರ ಮೇಲೆ ಮೂಡಿ ಬರುತ್ತಿದ್ದವು. ಅವರ ಜೀವನ ರೀತಿಯೆ ನಾನು ಕಲಿತ ದೊಡ್ಡ ಪಾಠ. ಈ ನಾಲ್ಕು ಶಿಕ್ಷಕರು ನನ್ನ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಗೊಂಡಿದ್ದಾರೆ. ಅವರ ನುಡಿ ಮತ್ತು ಬದುಕಿನ ಪಾಠ ನನ್ನ ಜೀವನ ಮಾರ್ಗದರ್ಶನವಾಗಿದೆ.

share
ಅಶೀರುದ್ದೀನ್ ಮಂಜನಾಡಿ
ಅಶೀರುದ್ದೀನ್ ಮಂಜನಾಡಿ
Next Story
X