ಕಾಸರಗೋಡು: ಕೊಲೆ ಆರೋಪಿ ಬಂಧನ

ಕಾಸರಗೋಡು,ಸೆ. 5: ಹಫ್ತಾ ಹಣಕ್ಕಾಗಿ ಕರ್ನಾಟಕ ಮೂಲದ ಕೂಲಿ ಕಾರ್ಮಿಕನನ್ನು ಕೊಲೆಗೈದ ಘಟನೆಗೆ ಸಂಬಂಧಪಟ್ಟಂತೆ ಆರೋಪಿಯನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ನುಳ್ಳಿಪ್ಪಾಡಿ ಚೆನ್ನಿಕೆರೆಯ ಮಣಿ (23) ಎಂದು ಗುರುತಿಸಲಾಗಿದೆ.
ಶನಿವಾರ ರಾತ್ರಿ ಘಟನೆ ನಡೆದಿತ್ತು. ಕೊಪ್ಪಳ ದ ಶರಣಪ್ಪ ( 34) ಎಂಬವರನ್ನು ಹಫ್ತಾ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದನು. ಹಲ್ಲೆ ತಡೆದ ಸ್ನೇಹಿತ ಮಾರುತಿ ಮೇಲೂ ಹಲ್ಲೆ ನಡೆಸಿದ್ದನು. ಗಂಭೀರ ಗಾಯಗೊಂಡ ಶರಣಪ್ಪ ರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದರು.
Next Story





