Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ಹಾಕಿ ಆಟಗಾರ್ತಿಯರ ‘ನರ್ಸರಿ’ ಜಾರ್ಖಂಡ್‌ನ...

ಹಾಕಿ ಆಟಗಾರ್ತಿಯರ ‘ನರ್ಸರಿ’ ಜಾರ್ಖಂಡ್‌ನ ಗ್ರಾಮ ಹೆಸಲ್

ವಾರ್ತಾಭಾರತಿವಾರ್ತಾಭಾರತಿ7 Sept 2016 11:18 PM IST
share
ಹಾಕಿ ಆಟಗಾರ್ತಿಯರ ‘ನರ್ಸರಿ’ ಜಾರ್ಖಂಡ್‌ನ ಗ್ರಾಮ ಹೆಸಲ್

ಜಾರ್ಖಂಡ್, ಸೆ.7: ಹರ್ಯಾಣದ ಮೊಖ್ರಾ ಖಾಸ್ ಒಲಿಂಪಿಕ್‌ನಲ್ಲಿ ಪದಕ ವಿಜೇತೆ ಸಾಕ್ಷಿ ಮಲಿಕ್‌ರಂತಹ ಹಲವು ಮಹಿಳಾ ಕುಸ್ತಿಪಟುಗಳನ್ನು ನೀಡಿದ ಹಳ್ಳಿಯಾಗಿ ಗುರುತಿಸಿಕೊಂಡಿದ್ದರೆ, ಜಾರ್ಖಂಡ್‌ನಲ್ಲಿರುವ ಬುಡಕಟ್ಟು ಸಮುದಾಯದವರೇ ಹೆಚ್ಚು ವಾಸಿಸುತ್ತಿರುವ ಹೆಸಲ್ ಎಂಬ ಹಳ್ಳಿ ಭಾರತದ ಹಾಕಿ ಆಟಗಾರ್ತಿಯರನ್ನು ತಯಾರುಗೊಳಿಸುತ್ತಿರುವ ‘ನರ್ಸರಿ’ ಆಗಿದೆ.

 ರಾಜ್ಯ ರಾಜಧಾನಿ ರಾಂಚಿಯಿಂದ 50 ಕಿ.ಮೀ. ದೂರದಲ್ಲಿರುವ ಮಾವೋವಾದಿಗಳ ಪ್ರಾಬಲ್ಯ ಹೊಂದಿರುವ ಖುಂಟಿ ಜಿಲ್ಲೆಯಲ್ಲಿ ಈ ಹಳ್ಳಿಯಿದೆ. ಇತ್ತೀಚೆಗೆ ರಿಯೋ ಗೇಮ್ಸ್‌ನಲ್ಲಿ ಮಹಿಳಾ ಹಾಕಿ ತಂಡದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಒಲಿಂಪಿಯನ್ ನಿಕ್ಕಿ ಪ್ರಧಾನ್ ಸಹಿತ ಸುಮಾರು 20 ಅಂತಾರಾಷ್ಟ್ರೀಯ ಮಹಿಳಾ ಆಟಗಾರ್ತಿಯರು ಹೆಸಲ್ ಹಳ್ಳಿಯಿಂದ ಬಂದವರು.

1988ರ ಬಳಿಕ ಸುಮಾರು 55 ಬಾಲಕಿಯರು ವಿವಿಧ ವಯೋಮಿತಿಯ ಗುಂಪುಗಳಲ್ಲಿ ರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಭಾಗವಹಿಸಿದ್ದಾರೆ. ಕನಿಷ್ಠ 20 ಬಾಲಕಿಯರು ಭಾರತ ತಂಡದೊಂದಿಗೆ ವಿದೇಶಕ್ಕೂ ತೆರಳಿದ್ದಾರೆ.

ಸುಮಾರು 60 ಕುಟುಂಬಗಳಿರುವ ಈ ಹಳ್ಳಿಯ ಪ್ರತಿಯೊಬ್ಬ ನಾಗರಿಕನ ರಕ್ತದಲ್ಲಿ ಹಾಕಿಯಿದೆ. ಕೃಷಿಯನ್ನೇ ನಂಬಿಕೊಂಡಿರುವ ಈ ಹಳ್ಳಿಯ ಪ್ರತಿ ಮನೆಯಲ್ಲೂ ಹಾಕಿ ಸ್ಟಿಕ್‌ಗಳಿವೆ. ಹುಡುಗಿಯರು ಹಾಕಿಯಲ್ಲಿ ಹೆಚ್ಚು ಒಲವು ಹೊಂದಿರುವ ಕಾರಣ ಈ ಹಳ್ಳಿಯಲ್ಲಿ ಮಹಿಳಾ ಆಟಗಾರ್ತಿಯರೇ ಅಧಿಕ ಸಂಖ್ಯೆಯಲ್ಲಿದ್ದಾರೆ.

ಹುಡುಗಿಯರು ರಾಷ್ಟ್ರೀಯ ಹಾಕಿ ಶಿಬಿರಕ್ಕೆ ಆಯ್ಕೆಯಾದರೆ, ತಕ್ಷಣವೇ ಪಾಸ್‌ಪೋರ್ಟ್ ಸಿದ್ಧಪಡಿಸುತ್ತಾರೆ. ಏಕೆಂದರೆ ಅವರಿಗೆ ಯಾವಾಗ ವಿದೇಶಕ್ಕೆ ತೆರಳಬಹುದೆಂದು ಗೊತ್ತಿರುವುದಿಲ್ಲ. ಬಿಡುವಿನ ವೇಳೆ ಹಾಕಿ ಅಭ್ಯಾಸ ನಡೆಸುವ ಇಲ್ಲಿನ ಮಕ್ಕಳಿಗೆ ಹಾಕಿ ಕ್ರೀಡೆಯೇ ಮನರಂಜನೆಯ ಮೂಲವಾಗಿದೆ.

ಈ ಎಲ್ಲ ಸಾಧ್ಯತೆಗಳಿಗೆ ಕಾರಣ ಹೆಸಲ್ ಹಳ್ಳಿಯ ಸರಕಾರಿ ಶಾಲೆಯ ಶಿಕ್ಷಕ ದಶರಥ್ ಮೆಹತೋ. ಮೆಹತೋ ಕಳೆದ ಎರಡು ದಶಕಗಳಿಂದ ಹೆಸಲ್‌ನ ಹುಡುಗಿಯರಿಗೆ ಹಾಕಿ ಕ್ರೀಡೆಯನ್ನು ಕಲಿಸಿಕೊಡುತ್ತಿದ್ದಾರೆ.

ಹೆಸಲ್‌ನಲ್ಲಿ ಹಾಕಿ ತರಬೇತಿಗೆ ಸರಿಯಾದ ವ್ಯವಸ್ಥೆಗಳಿಲ್ಲ. ಹುಡುಗಿಯರು ರಾಜ್ಯ ಹಾಗೂ ನ್ಯಾಶನಲ್ ತಂಡಗಳಿಗೆ ಆಯ್ಕೆಯಾದರೆ, ಹೆಚ್ಚಿನ ತರಬೇತಿಗೆ ಖುಂಟಿ ಅಥವಾ ರಾಂಚಿಗೆ ತೆರಳಬೇಕಾಗುತ್ತದೆ. ಜಿಲ್ಲಾ ಕೇಂದ್ರವಾಗಿರುವ ಖುಂಟಿಯಲ್ಲಿರುವ ಹಾಕಿ ಸ್ಟೇಡಿಯಂ ಸರಕಾರದಿಂದ ದಿವ್ಯ ನಿರ್ಲಕ್ಷಕ್ಕೆ ಒಳಗಾಗಿದೆ.

 ‘‘ಇಡೀ ಜಿಲ್ಲೆ ಅದರಲ್ಲೂ ಮುಖ್ಯವಾಗಿ ಹೆಸಲ್ ಶ್ಲಾಘನೆಗೆ ಯೋಗ್ಯವಾಗಿದೆ. ಈ ಹಳ್ಳಿ ಕಳೆದ ಒಂದು ದಶಕದಿಂದ ಅತ್ಯುತ್ತಮ ಆಟಗಾರ್ತಿಯರನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದೆ. ರಾಜ್ಯ ಹಾಗೂ ದೇಶಕ್ಕೆ ಗೌರವ ತರುವಂತಾಗಲು ಜಿಲ್ಲಾಡಳಿತ ಕ್ರೀಡಾಳುಗಳಿಗೆ ಮತ್ತಷ್ಟು ಬೆಂಬಲ ನೀಡುವ ಅಗತ್ಯವಿದೆ’’ ಎಂದು ಇತ್ತೀಚೆಗೆ ರಾಷ್ಟ್ರಪತಿಗಳಿಂದ ಧ್ಯಾನ್‌ಚಂದ್ ಪ್ರಶಸ್ತಿ ಪುರಸ್ಕೃತರಾಗಿರುವ ಮಾಜಿ ಒಲಿಂಪಿಯನ್ ಸಿಲ್ವನುಸ್ ಡುಂಗ್ ಡುಂಗ್ ಅಭಿಪ್ರಾಯಪಟ್ಟಿದ್ದಾರೆ.

‘‘ನಿರ್ಲಕ್ಷತನದಿಂದಾಗಿ ಜಾರ್ಖಂಡ್ ಹಾಕಿಯಲ್ಲಿ ಪ್ರಾಬಲ್ಯ ಸಾಧಿಸಲು ಸಾಧ್ಯವಾಗುತ್ತಿಲ್ಲ. ನೆರೆಯ ಒಡಿಶಾ ರಾಜ್ಯದಲ್ಲಿ ಅಥ್ಲೀಟ್‌ಗಳನ್ನು ಚೆನ್ನಾಗಿ ನೋಡಿಕೊಳ್ಳಲಾಗುತ್ತಿದೆ. ಉತ್ತಮ ಆಟಗಾರರಾಗಲು ಬೆಂಬಲ ನೀಡಲಾಗುತ್ತಿದೆ’’ಎಂದು ಡುಂಗ್ ಡುಂಗ್ ಬೆಟ್ಟು ಮಾಡಿದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿರುವ ಹೆಸಲ್ ಹಳ್ಳಿಯ ಪ್ರಮುಖ ಆಟಗಾರ್ತಿಯರೆಂದರೆ: ಹೆಲೆನ್ ಸೊಯ್, ಸಾವಿತ್ರಿ ಪೂರ್ತಿ, ಬಿಶ್ವಾಸಿ ಪೂರ್ತಿ, ಆಲ್ಮಾ ಗುರಿಯಾ, ದಯಾಮಣಿ, ಪುಷ್ಪಾ ಪ್ರಧಾನ್, ಬಿಸ್ವಾಸಿ ಭೆಂಗ್ರಾ, ನಿಕ್ಕಿ ಪ್ರಧಾನ್, ಶಶಿ ಪ್ರಧಾನ್, ಸಲೊಮಿ ಪೂರ್ತಿ, ಗುಡ್ಡಿ ಕುಮಾರಿ, ಅನಿಮಾ ಸೊರೆಂಗ್ ಹಾಗೂ ಬಸಂತಿ ಕಚ್ಚಪ್.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X