Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ದರ ಏರಿಕೆ ಏಕೆ ಎಂದು ಜನ ಕೇಳಿದರೆ...

ದರ ಏರಿಕೆ ಏಕೆ ಎಂದು ಜನ ಕೇಳಿದರೆ 'ಪ್ರಭು' ಗಳಿಗೆ ಸಿಟ್ಟು ಬಂತು !

ರೈಲ್ವೆ ಸಚಿವ ಬನಿಯಾ ಆಗಿದ್ದಾರೆ : ಪ್ರಯಾಣಿಕರ ಆರೋಪ

ವಾರ್ತಾಭಾರತಿವಾರ್ತಾಭಾರತಿ8 Sept 2016 11:38 PM IST
share
ದರ ಏರಿಕೆ ಏಕೆ ಎಂದು ಜನ ಕೇಳಿದರೆ ಪ್ರಭು ಗಳಿಗೆ ಸಿಟ್ಟು ಬಂತು !

ಮುಂಬೈ, ಸೆ.8 : ಗುರುವಾರ ರೈಲ್ವೆ ಸಚಿವ ಸುರೇಶ ಪ್ರಭು ಅವರ ಮುಂಬೈ ನಿವಾಸದ ಹೊರಗೆ ಕಾಯುತ್ತಿದ್ದ ಇಂಡಿಯಾ ಟುಡೇ ಪತ್ರಕರ್ತರಿಗೆ ಸಚಿವರ ಆಪ್ತ ಸಿಬ್ಬಂದಿ "ನಿಮ್ಮನ್ನು ನೋಡಿದರೆ ಅವರಿಗೆ ಈಗ ಸಿಟ್ಟು ಬರುತ್ತದೆ. ಹೀಗೆ ಹಠಾತ್ತನೆ ಮಾಧ್ಯಮದವರು ಬಂದು ಪ್ರಶ್ನಿಸುವುದು ಅವರಿಗೆ ಇಷ್ಟವಿಲ್ಲ" ಎಂದು ಎಚ್ಚರಿಸಿದ್ದಾನೆ. ಸಚಿವರು ಮನೆಯಿಂದ ಹೊರಬಂದ ಮೇಲೆ ಆತ ಹೇಳಿದಂತೆಯೇ ಆಗಿದೆ. 

ಬುಧವಾರ ರೈಲ್ವೆ ಸಚಿವಾಲಯ ಹೈಸ್ಪೀಡ್ ರೈಲುಗಳ ಟಿಕೆಟ್ ದರ ಏರಿಕೆ ಮಾಡಿದೆ. ಇದರಂತೆ ಪ್ರತಿ ಹತ್ತು ಶೇಕಡಾ ಟಿಕೆಟ್ ಮಾರಾಟವಾಗುತ್ತಿದ್ದಂತೆ ಹತ್ತು ಶೇಕಡಾ ದರ ಹೆಚ್ಚುತ್ತಾ ಹೋಗುತ್ತದೆ. ಹಾಗಾಗಿ ಸಚಿವರನ್ನು ಪ್ರಶ್ನಿಸುವುದು ಅನಿವಾರ್ಯವಾಗಿತ್ತು. 

ಆದರೆ ಪತ್ರಕರ್ತರನ್ನು ನೋಡಿದ ಕೂಡಲೇ ಸಚಿವರ ಮುಖ ಕಪ್ಪಿಟ್ಟಿತು. ಅವರು ಉತ್ತರಿಸುವ ಮೂಡ್ ನಲ್ಲಿರಲಿಲ್ಲ. "ನಾನು ನಿಮ್ಮನ್ನು ಕರೆದಿದ್ದೆನಾ ? " ಎಂದು ಅವರೇ ಕೇಳಿದರು. ಅಷ್ಟಕ್ಕೇ ನಿಲ್ಲದೆ, "ನಿಮ್ಮ ಸೀನಿಯರ್ ಬಳಿ ಹೋಗಿ ಕೇಳಿ. ಒಬ್ಬ ಸಚಿವರನ್ನು ಈ ರೀತಿ ಪ್ರಶ್ನಿಸುತ್ತಾರಾ?" ಎಂದಿದ್ದಾರೆ. 
ಆದರೆ ಇದಕ್ಕೆ ಬಗ್ಗದ ಪತ್ರಕರ್ತ "ನಾನು ಖಂಡಿತ ನೀವು ಹೇಳಿದ್ದನ್ನು ನನ್ನ ಸೀನಿಯರ್ ಗೆ ತಲುಪಿಸುತ್ತೇನೆ. ಆದರೆ ದೇಶದ ಜನರು ಟಿಕೆಟ್ ದರ ಏರಿಸಿದ್ದು ಏಕೆ ಎಂದು ಉತ್ತರ ಬಯಸುತ್ತಿದ್ದಾರೆ. ನನ್ನ ಸೀನಿಯರ್ ಗೂ ಉತ್ತರ ಬೇಕಾಗಿದೆ" ಎಂದು ಹೇಳಿದ್ದಾನೆ. ಇದಕ್ಕೆ ಇನ್ನಷ್ಟು ಸಿಟ್ಟಾದ ಪ್ರಭು ಹೊರಟೇಬಿಟ್ಟರು. 

ರೈಲ್ವೆ ಬಳಕೆದಾರರ ಸಂಘದ ಹಿರಿಯ ಸದಸ್ಯ ರಾಜೀವ್ ಸಿಂಘಲ್ "ರೈಲ್ವೆ ಸಚಿವರು ಬನಿಯಾ ಆಗಿಬಿಟ್ಟಿದ್ದಾರೆ. ಈಗ ಮುಂಬೈ - ದಿಲ್ಲಿ ವಿಮಾನದ ರಿಟರ್ನ್ ಟಿಕೆಟ್ ರೈಲ್ವೆ ಟಿಕೆಟ್ ದರದಲ್ಲಿ ಸಿಗುವಾಗ ಜನರು ಏಕೆ ರೈಲಿನಲ್ಲಿ ಹೋಗುತ್ತಾರೆ ? ಇದಕ್ಕೆ ಸಚಿವರು ಉತ್ತರಿಸಬೇಕು. ಸಚಿವರು ಮಾಧ್ಯಮದ ಜೊತೆ ಹೀಗೆ ವರ್ತಿಸಿದರೆ ಕೇಂದ್ರ ಸರಕಾರ ಜನರೊಂದಿಗೆ ಹೇಗೆ ವರ್ತಿಸುತ್ತದೆ ? " ಎಂದು ಹೇಳಿದ್ದಾರೆ. 


 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X