Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ದುರುಪಯೋಗವಾಗುತ್ತಿರುವ ‘ದೇಶದ್ರೋಹ’ದ...

ದುರುಪಯೋಗವಾಗುತ್ತಿರುವ ‘ದೇಶದ್ರೋಹ’ದ ವ್ಯಾಖ್ಯಾನ

ರಘೋತ್ತಮ ಹೊ.ಬ.ರಘೋತ್ತಮ ಹೊ.ಬ.8 Sept 2016 11:52 PM IST
share
ದುರುಪಯೋಗವಾಗುತ್ತಿರುವ ‘ದೇಶದ್ರೋಹ’ದ ವ್ಯಾಖ್ಯಾನ

ಒಂದರ್ಥದಲ್ಲಿ ಇದು ಪ್ರಜಾಪ್ರಭುತ್ವವನ್ನು ವಶಪಡಿಸಿಕೊಂಡು ದೇಶದ ಸ್ವಾತಂತ್ರ್ಯವನ್ನು ಆ ಮೂಲಕ ಜನತೆಯ, ಅದರಲ್ಲೂ ವಿದ್ಯಾರ್ಥಿಗಳ ಬೌದ್ಧಿಕ ಚಿಂತನೆಯ ಹಕ್ಕುಗಳನ್ನು ಕಿತ್ತುಕೊಳ್ಳುವ ಹುನ್ನಾರವಾಗುತ್ತದೆಯಲ್ಲವೆ? ಹಾಗೆಯೇ ದೇಶವಾಸಿ ವಿದ್ಯಾರ್ಥಿಗಳ, ಚಿಂತಕರ ಯೋಚಿಸುವ ಸ್ವಾತಂತ್ರ್ಯ, ಯೋಚಿಸಿದ್ದನ್ನು ಹೇಳುವ ಸ್ವಾತಂತ್ರ್ಯವನ್ನು ಕಿತ್ತುಕೊಂಡು, ಅಂತಹವರನ್ನು ದೇಶದ್ರೋಹಿಗಳೆಂದು ಕರೆದು, ಜೈಲಿಗೆ ತಳ್ಳಿ, ದೇಶದ ಘನತೆವೆತ್ತ ಸಂವಿಧಾನದ ಮೌಲ್ಯಗಳನ್ನು ಹಳ್ಳಹಿಡಿಸುವ ಕ್ರಿಯೆಯಾಗುತ್ತದಲ್ಲವೆ? ಈ ನಿಟ್ಟಿನಲ್ಲಿ ಇಂತಹದ್ದು ದೇಶಪ್ರೇಮದ ಪ್ರಕ್ರಿಯೆ ಹೇಗಾಗುತ್ತದೆ ಎಂಬ ಗಂಭೀರ ಪ್ರಶ್ನೆಯನು್ನ ಕೂಡ ಇಲ್ಲಿ ಕೇಳಬೇಕಾಗುತ್ತದೆ.

ದಿ. ರೋಹಿತ್ ವೇಮುಲಾ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಅವರ ಸಂಘಟನೆಯ ವಿರುದ್ಧ ಬಿಜೆಪಿಯ ಸಚಿವ ಬಂಡಾರು ದತ್ತಾತ್ರೇಯ ಪತ್ರ ಬರೆದು ಹೇಳಿದ್ದು ‘‘ದೇಶದ್ರೋಹಿಗಳು, ಸಮಾಜಘಾತುಕರು ವಿವಿಯೊಳಗೆ ಸೇರಿಕೊಂಡಿದ್ದಾರೆ’’ ಎಂದು. ಮುಝಪ್ಫರ್ ನಗರ ಗಲಭೆ ಕುರಿತ ಚಿತ್ರ ‘ಮುಝಪ್ಫರ್ ನಗರ್ ಬಾಕಿ ಹೈ’ ವೀಕ್ಷಣೆಗೆ ಸಂಬಂಧಿಸಿದಂತೆ ರೋಹಿತ್ ವೇಮುಲಾ ನೇತೃತ್ವದ ಹೈದರಾಬಾದ್‌ನ ಅಂಬೇಡ್ಕರ್ ಸ್ಟೂಡೆಂಟ್ಸ್ ಅಸೋಸಿಯೇಶನ್(ಎಎಸ್‌ಎ) ಸಂಘಟನೆಗೆ ಬಿಜೆಪಿ ದೇಶದ್ರೋಹಿ ಪಟ್ಟ ಕಟ್ಟಿತು. ಆ ಮೂಲಕ ಶೋಷಿತ ಸಮುದಾಯದ ಯುವ ಚಿಂತಕ ರೋಹಿತ್ ವೇಮುಲಾರ ಸಾವಿಗೆ ಕಾರಣವಾಯಿತು, ಈ ಟ್ರೆಂಡ್ ಜೆಎನ್‌ಯುನಲ್ಲಿಯೂ ಮುಂದುವರಿಯಿತು, ದೇಶಾದ್ಯಂತ ಮುಂದುವರಿಯುತ್ತಲೇ ಇದೆ. ಈಚಿನ ರಮ್ಯಾ ಪಾಕಿಸ್ತಾನ ಭೇಟಿ ಪ್ರಕರಣದಲ್ಲಂತೂ ಅದು ತಾರಕಕ್ಕೇರಿತು. ಅಂದಹಾಗೆ ಈ ‘ದೇಶದ್ರೋಹಿ’ ಟ್ಯಾಗ್‌ನ ನಿರ್ಣಾಯಕ ಅಂಶಗಳು ಹಿಂದುತ್ವ ವಿರೋಧಿಸುವವರು... ಮೋದಿ ವಿರೋಧಿಸುವವರು... ಬಿಜೆಪಿ ವಿರೋಧಿಸುವವರು... ಹೀಗೆ ಸಾಗುತ್ತದೆ. ಈ ಟ್ಯಾಗ್‌ಗೆ ಈಗಾಗಲೇ ಮುಸ್ಲಿಂ ಸಮುದಾಯದ ಅಮಾಯಕರನ್ನು ಸಿಕ್ಕಿಸಿ ಅವರನ್ನು ಇಡೀ ದೇಶವೇ ಸಂಶಯದಿಂದ ನೋಡುವಂತಹ ವಾತಾವರಣ ಸೃಷ್ಟಿಸುವುದರಲ್ಲಿ ಪಟ್ಟಭದ್ರರು ಯಶಸ್ವಿಯಾಗಿದ್ದಾರೆ. ಸದ್ದಿಲ್ಲದೆ ನಡೆಯುತ್ತಿರುವ ಸಂಚೆಂದರೆ ಅಂತಹ ಟ್ಯಾಗ್‌ಗೆ ಅಂಬೇಡ್ಕರ್‌ವಾದಿ ವಿದ್ಯಾರ್ಥಿ ಸಂಘಟನೆಗಳನ್ನು, ಎಡಪಂಥೀಯ ವಿದ್ಯಾರ್ಥಿ ಮುಖಂಡರನ್ನು ಸೇರಿಸಿಕೊಳ್ಳುವುದು, ಆ ಮೂಲಕ ಹಿಂದುತ್ವ ವಿರೋಧಿ ನೆಲೆಯನ್ನು ದಮನಮಾಡುವ ಪ್ರಕ್ರಿಯೆಯಾಗಿ ದೇಶದ್ರೋಹಿ ಟ್ಯಾಗ್ ಅಂಟಿಸುವ ಮಾರ್ಗ ಹುಡುಕಿಕೊಂಡಿರುವುದು. ಒಟ್ಟಾರೆ ಇದರ ಅರ್ಥ ವಿದ್ಯಾರ್ಥಿಗಳು/ಸಾರ್ವಜನಿಕರು ಚರ್ಚೆ-ಸಂವಾದಗಳನ್ನು ಬಿಟ್ಟು, ಹಿಂದುತ್ವದ ವಿರುದ್ಧ ಧ್ವನಿ ಎತ್ತುವುದು ಬಿಟ್ಟು, ಬೀಫ್ ತಿನ್ನುವುದನ್ನು ಬಿಟ್ಟು, ಅಸಮಾನತೆಯ ವಿರುದ್ಧ ಧ್ವನಿ ಎತ್ತುವುದನ್ನು ಬಿಟ್ಟು, ಮೀಸಲಾತಿ ಕೇಳುವುದನ್ನು ಬಿಟ್ಟು, ಮೀಸಲಾತಿ ಪರ ವಾದ ಮಾಡುವುದನ್ನು ಬಿಟ್ಟು ಬಲಪಂಥೀಯ ಸಂಘಟನೆಗಳ ಮತ್ತು ಹಿಂದುತ್ವ ಪ್ರತಿಪಾದಿಸುವ ಪಕ್ಷಗಳ ಗುಲಾಮರಾಗಬೇಕು ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸೆಲ್ಲೋಟೇಪ್ ಅಂಟಿಸಿಕೊಂಡು ಬುದ್ಧಿ ಮತ್ತು ಮನಸ್ಸು ಬಂದ್ ಮಾಡಿಕೊಳ್ಳಬೇಕು ಎಂಬುದು. ಪ್ರಶ್ನೆಯೇನೆಂದರೆ ಹೀಗೆ ಆಸೆ ಪಡುವುದು? ಅಂದರೆ ವಿದ್ಯಾರ್ಥಿಗಳು, ವಿದ್ಯಾರ್ಥಿ ಚಿಂತಕರು ಮತ್ತು ಸಾರ್ವಜನಿಕರು ತಮ್ಮನ್ನು ವಿರೋಧಿಸದೆ ನಮ್ಮ ಚಿಂತನೆಗಳನ್ನು ಒಪ್ಪಿಕೊಳ್ಳಬೇಕು ಇಲ್ಲವೆ ಗಪ್‌ಚುಪ್ ಇರಬೇಕೆನ್ನುವುದು ಸಂವಿಧಾನಬದ್ಧ ನಡವಳಿಕೆ ಹೇಗಾಗುತ್ತದೆ? ಮತ್ತು ಭಾರತದ ಸ್ವಾತಂತ್ರ್ಯ ನಿರ್ಮಾಪಕರು ಬ್ರಿಟಿಷರ ವಿರುದ್ಧ ಹೋರಾಡಿ ಗಳಿಸಿಕೊಟ್ಟ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆಲೆಯಾದರೂ ಎಲ್ಲಿ ಸಿಗುತ್ತದೆ? ಒಂದರ್ಥದಲ್ಲಿ ಇದು ಪ್ರಜಾಪ್ರಭುತ್ವವನ್ನು ವಶಪಡಿಸಿಕೊಂಡು ದೇಶದ ಸ್ವಾತಂತ್ರ್ಯವನ್ನು ಆ ಮೂಲಕ ಜನತೆಯ, ಅದರಲ್ಲೂ ವಿದ್ಯಾರ್ಥಿಗಳ ಬೌದ್ಧಿಕ ಚಿಂತನೆಯ ಹಕ್ಕುಗಳನ್ನು ಕಿತ್ತುಕೊಳ್ಳುವ ಹುನ್ನಾರವಾಗುತ್ತದೆಯಲ್ಲವೇ? ಹಾಗೆಯೇ ದೇಶವಾಸಿ ವಿದ್ಯಾರ್ಥಿಗಳ, ಚಿಂತಕರ ಯೋಚಿಸುವ ಸ್ವಾತಂತ್ರ್ಯ, ಯೋಚಿಸಿದ್ದನ್ನು ಹೇಳುವ ಸ್ವಾತಂತ್ರ್ಯವನ್ನು ಕಿತ್ತುಕೊಂಡು, ಅಂತಹವರನ್ನು ದೇಶದ್ರೋಹಿಗಳೆಂದು ಕರೆದು, ಜೈಲಿಗೆ ತಳ್ಳಿ, ದೇಶದ ಘನತೆವೆತ್ತ ಸಂವಿಧಾನದ ಮೌಲ್ಯಗಳನ್ನು ಹಳ್ಳಹಿಡಿಸುವ ಕ್ರಿಯೆಯಾಗುತ್ತದಲ್ಲವೇ? ಈ ನಿಟ್ಟಿನಲ್ಲಿ ಇಂತಹದ್ದು ದೇಶಪ್ರೇಮದ ಪ್ರಕ್ರಿಯೆ ಹೇಗಾಗುತ್ತದೆ ಎಂಬ ಗಂಭೀರ ಪ್ರಶ್ನೆಯನ್ನು ಕೂಡ ಇಲ್ಲಿ ಕೇಳಬೇಕಾಗುತ್ತದೆ. ನಿಜವಾದ ದೇಶಪ್ರೇಮ; ಈ ದೇಶದ ಸಮಸ್ತರೂ ಅವರು ಮೇಲು-ಕೀಳು ಎನ್ನದೆ, ಆ ಧರ್ಮ-ಈ ಧರ್ಮ ಎನ್ನದೆ ಸೌಹಾರ್ದದಿಂದ ಬದುಕುವ ವಾತಾವರಣ ನಿರ್ಮಿಸುವುದು. ಇದನ್ನೆ ಭಾರತದ ಸಂವಿಧಾನದ ಪೀಠಿಕೆ ಸ್ವಾತಂತ್ರ್ಯ -ಸಮಾನತೆ-ಸಹೋದರತೆ ಎನ್ನುತ್ತದೆ. ಮತ್ತದರ ಜಾರಿ ಸಂವಿಧಾನಬದ್ಧ ಸರಕಾರದ ಹೊಣೆ ಎನ್ನುತ್ತದೆ. ಅದರಲ್ಲೂ ನೋವುಂಡವರು ಮುಂದೆ ಬರಬೇಕು, ಸಮಾನತೆಯಿಂದ ಸಮಸಮಾಜದ ಅಡಿಯಲ್ಲಿ ಬದುಕಬೇಕು ಇದು ಸಂವಿಧಾನದ ಪ್ರಮುಖ ಆಶಯ. ಯಾಕೆಂದರೆ ಸಹಸ್ರಾರು ವರ್ಷಗಳಿಂದ ಹೊಟ್ಟೆ ತುಂಬ ಉಂಡವರೇ ಮತ್ತೂ ಉಣ್ಣಬೇಕು... ಇನ್ನೊಬ್ಬರಿಗೆ ಅದನ್ನು ನೀಡುವುದಿಲ್ಲ... ಇನ್ನೊಬ್ಬರು ನಮ್ಮ ಅಡಿಯಾಳಾಗಿ ಬದುಕಬೇಕು... ನಮ್ಮ ವಿರುದ್ಧ ಧ್ವನಿ ಎತ್ತಬಾರದು... ಮತ್ತು ಇದಕ್ಕೆಲ್ಲ ದೇಶಪ್ರೇಮದ ಹಣೆಪಟ್ಟಿ ಅಂಟಿಸುವುದು... ಖಂಡಿತ ಇವ್ಯಾವುವೂ ನಾಗರಿಕತೆಯ ಒಳ್ಳೆಯ ಲಕ್ಷಣಗಳಾಗುವುದಿಲ್ಲ. ನಿಜ, ಪ್ರಜಾಪ್ರಭುತ್ವದಲ್ಲಿ ಪಕ್ಷವೊಂದಕ್ಕೆ ಕೇಂದ್ರದಲ್ಲಿ ಬಹುಮತ ಬಂದಿರಬಹುದು. ಆದರೆ ಹಾಗಂತ ಆ ಬಹುಮತವನ್ನು ದಮನಕಾರಿ ನೀತಿಯಾಗಿ ಬಳಸಿಕೊಂಡು ವಿವಿಗಳಲ್ಲಿ ನಡೆಯುತ್ತಿರುವ ಬೌದ್ಧಿಕ ಚರ್ಚೆಗಳನ್ನು, ವಿರೋಧಿ ವಿದ್ಯಾರ್ಥಿ ಸಂಘಟನೆಗಳನ್ನು, ಮತ್ತವರ ಚಟುವಟಿಕೆಗಳನ್ನು ಹತ್ತಿಕ್ಕುವ ಅಸ್ತ್ರವಾಗಿ ಬಳಸಿಕೊಳ್ಳುವುದು ಅಕ್ಷರಶಃ ಅಕ್ಷಮ್ಯ. ಹಾಗೆ ಹೇಳುವುದಾದರೆ ಬಹುಪಕ್ಷ ಪದ್ಧತಿಯ ಭಾರತದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಅವರಿಗೆ ಬಂದಿರುವುದು ಶೇ.31 ಮತಗಳು ಅಷ್ಟೆ. ಇನ್ನುಳಿದ ಶೇ.69 ಮತಗಳು ಅವರಿಗೆ ಬಂದಿಲ್ಲ ಎಂದರೆ ಅವು ವಿರುದ್ಧ ಇವೆ ಎಂದರ್ಥ ಮತ್ತು ಇದನ್ನು ಹಾಲಿ ಅಧಿಕಾರದಲ್ಲಿರುವ ಸರಕಾರ ಅರ್ಥಮಾಡಿಕೊಳ್ಳಬೇಕು.

ಈ ಸಂದರ್ಭದಲ್ಲಿ ದೇಶದ್ರೋಹ ಪಟ್ಟವನ್ನು ನಾವು ಬೇರೆಯದೇ ರೀತಿಯಲ್ಲಿ ವ್ಯಾಖ್ಯಾನಿಸುವ ಅಗತ್ಯಬೀಳುತ್ತದೆ. ಅಂದರೆ ನಮ್ಮದೇ ದೇಶವಾಸಿ ಶೋಷಿತ ಸಮುದಾಯಗಳ ವಿರುದ್ಧ ಅಸ್ಪಶ್ಯತೆ-ಜಾತಿಭೇದ ಆಚರಿಸುವವರು, ಅವರು ಪಡೆಯುವ ಮೀಸಲಾತಿ ವಿರುದ್ಧ ಜಾಗೃತಿ ಮೂಡಿಸುವವರು, ಅವರ ಮೂಲಭೂತಹಕ್ಕುಗಳಿಗೆ ತಡೆಯೊಡ್ಡುವವರು ಇಂಥವರನ್ನು ದೇಶದ್ರೋಹಿಗಳು ಎಂದು ವ್ಯಾಖ್ಯಾನಿಸಬೇಕಾಗುತ್ತದೆ. ಇಂತಹ ಚಿಂತನೆಗಳನ್ನು ಆಗಾಗ ಬಲಪಂಥೀಯ ವಿದ್ಯಾರ್ಥಿ ಸಂಘಟನೆಗಳು ಮಾಡುತ್ತಿರುತ್ತವೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ, ಅವರ ಈ ಕ್ರಿಯೆಗೆ ಮೀಸಲಾತಿ ಪರಾಮರ್ಶಿಸಬೇಕು ಎಂಬ ಅವರ ಮಾತೃ ಸಂಘಟನೆಯ ಹಿರಿಯರ ಒತ್ತಾಸೆಯೂ ಇರುತ್ತದೆ. ಈಚಿನ ಉದಾಹರಣೆಯೊಂದನ್ನೇ ಹೇಳುವುದಾದರೆ ಈ ವರ್ಷದ(2016) ಫೆಬ್ರವರಿ 3ರಂದು ಬೆಂಗಳೂರಿನಲ್ಲಿ ಒಬಿಸಿ/ಎಸ್ಸಿ/ಎಸ್ಟಿ ಶೋಷಿತ ಸಮುದಾಯದ ವಿದ್ಯಾರ್ಥಿಗಳನ್ನು ಪ್ರತಿನಿಧಿಸುವ ಬಹುಜನ ವಿದ್ಯಾರ್ಥಿ ಸಂಘ(ಬಿವಿಎಸ್) ಖಾಸಗಿ ವಲಯದಲ್ಲೂ ಮೀಸಲಾತಿ ಜಾರಿಗೆ ಒತ್ತಾಯಿಸಿ ಬೃಹತ್ ರ್ಯಾಲಿ ಹಮ್ಮಿಕೊಂಡಾಗ ಬಲಪಂಥೀಯ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಅತ್ತ ತಪ್ಪಿಯೂ ಕಣ್ಣೆತ್ತಿ ನೋಡಲಿಲ್ಲ. ಕಡೇ ಪಕ್ಷ ವಿದ್ಯಾರ್ಥಿಗಳ ಹೋರಾಟಕ್ಕೆ ಒಂದು ಬೆಂಬಲದ ಹೇಳಿಕೆಯನ್ನು ಹೊರಡಿಸಲಿಲ್ಲ. ಆದರೆ ಅದೇ ಬಿವಿಎಸ್ ಮಾದರಿಯ ಶೋಷಿತ ಸಮುದಾಯದ ವಿದ್ಯಾರ್ಥಿ ಸಂಘಟನೆಗಳ ವಿರುದ್ಧ ಅಂದರೆ ಹೈದರಾಬಾದ್‌ನ ಅಂಬೇಡ್ಕರ್ ಸ್ಟೂಡೆಂಟ್ಸ್ ಅಸೋಸಿಯೇಶನ್ ಮತ್ತು ದಿಲ್ಲಿಯ ಎಸ್‌ಎಫ್‌ಐಗಳ ವಿರುದ್ಧ ಎಬಿವಿಪಿ ಬಹಳ ಸಲೀಸಾಗಿ ದೇಶದ್ರೋಹದ ಪಟ್ಟ ಕಟ್ಟುತ್ತದೆ, ಪಾಕಿಸ್ತಾನದತ್ತ ಕೈತೋರಿಸುತ್ತದೆ!
  

share
ರಘೋತ್ತಮ ಹೊ.ಬ.
ರಘೋತ್ತಮ ಹೊ.ಬ.
Next Story
X