Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಕೇಂದ್ರದ ಅಪಾಯಕಾರಿ ನಡೆ

ಕೇಂದ್ರದ ಅಪಾಯಕಾರಿ ನಡೆ

ವಾರ್ತಾಭಾರತಿವಾರ್ತಾಭಾರತಿ8 Sept 2016 11:53 PM IST
share
ಕೇಂದ್ರದ ಅಪಾಯಕಾರಿ ನಡೆ

ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರಕಾರ ಹೊರಟಿರುವ ದಿಕ್ಕನ್ನು ನೋಡಿದರೆ ಭಾರತದ ಜನತಂತ್ರಕ್ಕೆ ಅಪಾಯದ ದಿನಗಳು ಕಾದಿವೆ ಎಂದೆನಿಸುತ್ತದೆ. ಒಂದೆಡೆ ಕಾರ್ಪೊರೇಟ್ ಬಂಡವಾಳಶಾಹಿಗೆ ದೇಶದ ಸಂಪತ್ತನ್ನು ಕೊಳ್ಳೆ ಹೊಡೆಯಲು ಮುಕ್ತ ಅವಕಾಶ ನೀಡಲಾಗಿದೆ. ಇನ್ನೊಂದೆಡೆ ಸಂಘಪರಿವಾರದ ಮನುವಾದಿ ಹಿಂದೂರಾಷ್ಟ್ರ ಕಾರ್ಯಸೂಚಿಯನ್ನು ದೇಶದ ಮೇಲೆ ಹೇರಲು ಹುನ್ನಾರಗಳು ನಡೆದಿವೆ. ಒಂದೆಡೆ ಗೋರಕ್ಷಕರೆಂಬ ನರಭಕ್ಷಕರು ಗೋರಕ್ಷಣೆಯ ಹೆಸರಿನಲ್ಲಿ ಅಮಾಯಕರನ್ನು ಕೊಂದು ಹಾಕುತ್ತಿದ್ದಾರೆ. ಇನ್ನೊಂದೆಡೆ ಪ್ರಧಾನಿ ಸ್ಥಾನದಲ್ಲಿ ಕುಳಿತ ವ್ಯಕ್ತಿ ಗಟ್ಟಿಯಾಗಿ ಮಾತನಾಡುವುದನ್ನು ಬಿಟ್ಟು ‘ಬೇಕಾದರೆ ನನ್ನನ್ನು ಹೊಡೆಯಿರಿ’ ಎಂದು ಅಸಹಾಯಕರಂತೆ ಮಾತನಾಡುತ್ತಿದ್ದಾರೆ. ಆದರೆ, ಆರೆಸ್ಸೆಸ್ ಕಾರ್ಯಸೂಚಿಯ ಜಾರಿ ಅತ್ಯಂತ ವ್ಯವಸ್ಥಿತವಾಗಿ ನಡೆದಿದೆ.

ಇದೀಗ ಸರಕಾರ ಇನ್ನೊಂದು ವಿವಾದದಲ್ಲಿ ಸಿಲುಕಿಕೊಂಡಿದೆ. ಅಂತಾರಾಷ್ಟ್ರೀಯ ಖ್ಯಾತಿಯ ಇತಿಹಾಸಕಾರರಾದ ಬಿಪನ್ ಚಂದ್ರ ಅವರು ಬರೆದ ‘ಭಾರತದ ಸ್ವಾತಂತ್ರ ಹೋರಾಟದ ಇತಿಹಾಸ’ ಎಂಬ ಪುಸ್ತಕವನ್ನು ಮಾರಾಟ ಮಾಡದಿರಲು ದಿಲ್ಲಿಯ ವಿಶ್ವವಿದ್ಯಾನಿಲಯ ತೀರ್ಮಾನಿಸಿದ ಬೆನ್ನಲ್ಲೇ ಈ ಪುಸ್ತಕದ ಹಿಂದಿಯ ಆವೃತ್ತಿಯನ್ನು ಮರು ಮುದ್ರಿಸದಿರಲು ನ್ಯಾಶನಲ್ ಬುಕ್ ಟ್ರಸ್ಟ್ ತೀರ್ಮಾನಿಸಿದೆ. ಪುಸ್ತಕಕ್ಕೆ ಬೇಡಿಕೆ ಇದ್ದರೂ ಮರು ಮುದ್ರಿಸಲು ತೀರ್ಮಾನಿಸದೆ ಇರುವುದು ಖಂಡನೀಯವಾಗಿದೆ. ಬಿಪನ್ ಚಂದ್ರ ಅವರು ಬರೆದ ಪುಸ್ತಕದ ಬಗ್ಗೆ ಸಂಘಪರಿವಾರ ಮುಂಚಿನಿಂದಲೂ ಆಕ್ಷೇಪ ವ್ಯಕ್ತಪಡಿಸುತ್ತಲೇ ಬಂದಿದೆ. ತಾನು ಒಪ್ಪಿಕೊಂಡಿರುವ ಹಿಂದೂ ರಾಷ್ಟ್ರ ಸಿದ್ಧಾಂತಕ್ಕೆ ಭಿನ್ನವಾಗಿರುವ ಇತಿಹಾಸ ವಿಶ್ಲೇಷಣೆಯನ್ನು ಆರೆಸ್ಸೆಸ್ ಸಹಿಸುವುದಿಲ್ಲ. ಅಂತಲೇ ಅದು ಕೇಂದ್ರ ಸರಕಾರದಲ್ಲಿ ಅಧಿಕಾರಕ್ಕೆ ಬಂದಾಗಲೆಲ್ಲ ಇಂತಹ ಇತಿಹಾಸಕಾರರನ್ನು ಗುರಿಯಾಗಿರಿಸಿಕೊಂಡು ದಾಳಿ ಮಾಡುತ್ತಾ ಬಂದಿದೆ. ಹಿಂದೆ ವಾಜಪೇಯಿ ಸರಕಾರ ಅಸ್ತಿತ್ವದಲ್ಲಿದ್ದಾಗ ಇದೇ ಬಿಪನ್ ಚಂದ್ರ ಅವರು ಬರೆದ ಪುಸ್ತಕಗಳನ್ನು ಶಾಲಾ ಪಠ್ಯಪುಸ್ತಕಗಳನ್ನಾಗಿ ಮಾಡಬಾರದೆಂದು ರದ್ದುಗೊಳಿಸಿತ್ತು. ಆಗಲೂ ಈ ಬಗ್ಗೆ ದೇಶದ ಚಿಂತಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಆರೆಸ್ಸೆಸ್‌ನ ಸುಳ್ಳು ಇತಿಹಾಸ ವಿಶ್ಲೇಷಣೆಯನ್ನು ದೇಶದ ಜನರಲ್ಲಿ ದ್ವೇಷದ ವಿಷಬೀಜ ಬಿತ್ತುವ ಸುಳ್ಳು ಸೃಷ್ಟಿಗಳನ್ನು ಬಿಪನ್‌ಚಂದ್ರ ಬಯಲಿಗೆಳೆಯುತ್ತಾ ಬಂದಿದ್ದಾರೆ.

ಇತಿಹಾಸ ಅಂದರೆ ರಾಜ ರಾಣಿಯರ ಕಥೆಯಲ್ಲ. ಅವು ಬರೀ ಧರ್ಮದ ನಡುವಿನ ಸಂಘರ್ಷವಲ್ಲ. ಜನತೆ ತಮ್ಮ ಬದುಕನ್ನು ಕಟ್ಟಿಕೊಳ್ಳಲು ನಡೆಸಿದ ಹೋರಾಟ ಎಂಬುದನ್ನು ಬಿಪನ್‌ಚಂದ್ರ ಅವರು ಪರಿಣಾಮಕಾರಿಯಾಗಿ ವಿಶ್ಲೇಷಿಸಿದ್ದಾರೆ. ಅದರಲ್ಲೂ ಭಾರತದ ಸ್ವಾತಂತ್ರ ಹೋರಾಟದ ಕುರಿತು ಅವರು ಬರೆದ ಸಂಶೋಧನಾ ಗ್ರಂಥದಲ್ಲಿ ಈ ದೇಶದ ಹಿಂದೂ ಮುಸ್ಲಿಮರು ಸೇರಿದಂತೆ ಎಲ್ಲ ಸಮುದಾಯಗಳು ಒಂದಾಗಿ ನಡೆಸಿದ ಹೋರಾಟವನ್ನು ಅವರು ವಿಶ್ಲೇಷಿಸಿದ್ದಾರೆ. ಬಿಪನ್ ಚಂದ್ರ ಮಾತ್ರವಲ್ಲದೆ ಕೆ.ಎಂ. ಪಣಿಕ್ಕರ್, ರೊಮಿಲಾ ಥಾಪರ್ ಅವರಂತಹ ಇತಿಹಾಸಕಾರರು ಇಂತಹ ಪುಸ್ತಕಗಳನ್ನು ಬರೆದಿದ್ದಾರೆ. ಈ ಪುಸ್ತಕಗಳನ್ನು ಮರು ಮುದ್ರಿಸದಿರಲು ಹಾಗೂ ಈಗಾಗಲೇ ಶಾಲಾ ಪಠ್ಯವಾಗಿರುವ ಪುಸ್ತಕಗಳನ್ನು ಕೈಬಿಡಲು ಸರಕಾರ ತೀರ್ಮಾನಿಸಿದ್ದು ಸರಿಯಲ್ಲ. ಈ ದೇಶದ ಸರಕಾರ ಸಂವಿಧಾನದ ಬೆಳಕಿನಲ್ಲಿ ಸಾಗಬೇಕಾಗಿದೆ. ಚುನಾಯಿತ ಸಂಸತ್ತು ತೋರಿಸಿದ ದಿಕ್ಕಿನಲ್ಲಿ ಮುನ್ನಡೆಯಬೇಕಾಗಿದೆ. ಆದರೆ ಮೋದಿ ಸರಕಾರವನ್ನು ನಾಗಪುರದ ಸಂವಿಧಾನೇತರ ಅಧಿಕಾರ ಕೇಂದ್ರವೊಂದು ನಿಯಂತ್ರಿಸುತ್ತಿರುವುದು ಈಗಾಗಲೇ ವ್ಯಾಪಕ ಖಂಡನೆಗೆ ಗುರಿಯಾಗಿದೆ.

ಈ ಸಂವಿಧಾನೇತರ ಅಧಿಕಾರ ಕೇಂದ್ರವೇ ಬಿಪನ್‌ಚಂದ್ರ ಪುಸ್ತಕ ಮರು ಮುದ್ರಣ ಕೈಬಿಡಲು ಕಾರಣವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ದೇಶದ ಶಿಕ್ಷಣ ಮತ್ತು ಸಾಂಸ್ಕೃತಿಕ ಕ್ಷೇತ್ರವನ್ನು ಸಂಪೂರ್ಣವಾಗಿ ಕೈವಶಪಡಿಸಿಕೊಂಡು ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಆರೆಸ್ಸೆಸ್ ಚಿಂತಿಸುತ್ತಿದೆ. ಅಂತಲೇ ಭಾರತದ ಇತಿಹಾಸ ಅನುಸಂಧಾನ ಪರಿಷತ್ತಿಗೆ ಸಂಘದ ಸ್ವಯಂ ಸೇವಕನೆಂಬ ಖ್ಯಾತಿ ಪಡೆದ ವ್ಯಕ್ತಿಯನ್ನು ನೇಮಕಮಾಡಲಾಗಿದೆ. ಕೇಂದ್ರದ ಮಾನವ ಸಂಪನ್ಮೂಲ ಸಚಿವ ಖಾತೆಯನ್ನು ನಿಗೂಢ ಅಧಿಕಾರ ಕೇಂದ್ರ ನಿಯಂತ್ರಿಸುತ್ತಿದೆ. ಆದರೆ ದೇಶದ ಜನ ಅದನ್ನು ಒಪ್ಪಿಕೊಳ್ಳುತ್ತಿಲ್ಲ. ಪುಣೆಯ ಚಲನಚಿತ್ರ ತರಬೇತಿ ಸಂಸ್ಥೆಯಲ್ಲಿ ಕೈಹಾಕಿ ಸಂಘದ ಸ್ವಯಂ ಸೇವಕನೊಬ್ಬನನ್ನು ಅದರ ನಿರ್ದೇಶಕನನ್ನಾಗಿ ಮಾಡಲಾಯಿತು. ಆಗ ಅಲ್ಲಿನ ವಿದ್ಯಾರ್ಥಿಗಳು ರೊಚ್ಚಿಗೆದ್ದು ಒಂದು ವರ್ಷ ಕಾಲ ಹೋರಾಟ ನಡೆಸಿದರು. ಕೊನೆಗೆ ಆ ವ್ಯಕ್ತಿಯನ್ನು ವರ್ಗಾವಣೆ ಮಾಡುವುದು ಮೋದಿ ಸರಕಾರಕ್ಕೆ ಅನಿವಾರ್ಯವಾಯಿತು. ಅದೇ ರೀತಿ ಚಲನಚಿತ್ರ ಸೆನ್ಸಾರ್ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಸಂಘಪರಿವಾರದ ವ್ಯಕ್ತಿಯನ್ನು ನೇಮಕ ಮಾಡಿ ಸರಕಾರ ಮುಖಭಂಗ ಅನುಭವಿಸಿತು.

ಕೇಂದ್ರ ಮಾನವ ಸಂಪನ್ಮೂಲ ಖಾತೆಯನ್ನು ಬಳಸಿಕೊಂಡು ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ದಲಿತ ವಿದ್ಯಾರ್ಥಿಗಳ ವಿರುದ್ಧ ಎಬಿವಿಪಿ ನಡೆಸಿದ ಹುನ್ನಾರಕ್ಕೆ ಸರಕಾರ ಅವಕಾಶ ನೀಡಿತು. ಕೊನೆಗೆ ಪ್ರತಿಭಾವಂತ ದಲಿತ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆ ಮಾಡಿಕೊಳ್ಳುವಂತಹ ಸನ್ನಿವೇಶ ನಿರ್ಮಾಣವಾಯಿತು. ಅದೇ ರೀತಿ ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ಹಸ್ತಕ್ಷೇಪ ನಡೆಸಿ ಅಲ್ಲಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್, ಉಮರ್ ಖಾಲಿದ್ ಮತ್ತು ಅನಿರ್ಬನ್ ಭಟ್ಟಾಚಾರ್ಯ ಅವರನ್ನು ದೇಶದ್ರೋಹಿಗಳೆಂದು ಬಿಂಬಿಸಿ ಬಂಧನಕ್ಕೆ ಗುರಿಪಡಿಸಲಾಯಿತು. ಇದರ ವಿರುದ್ಧ ಈ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಐತಿಹಾಸಿಕ ಹೋರಾಟವನ್ನು ನಡೆಸಿದರು. ಕೊನೆಗೆ ಕೇಂದ್ರ ಸರಕಾರ ಮಾನವ ಸಂಪನ್ಮೂಲಸಚಿವ ಖಾತೆಯಿಂದ ಸ್ಮತಿ ಇರಾನಿ ಅವರನ್ನು ತೆಗೆದುಹಾಕುವ ಪರಿಸ್ಥಿತಿ ನಿರ್ಮಾಣವಾಯಿತು.

ಈ ರೀತಿ ಸಂಘಪರಿವಾರದ ಅಜೆಂಡಾವನ್ನು ಹೇರಲು ಹೋಗಿ ನಿರಂತರವಾಗಿ ಮುಖಭಂಗ ಅನುಭವಿಸಿದ ಸರಕಾರ ಈಗ ಬಿಪನ್ ಚಂದ್ರ ಅವರ ಇತಿಹಾಸ ಸಂಶೋಧನಾ ಗ್ರಂಥ ಮರುಮುದ್ರಣಕ್ಕೆ ಅಡ್ಡಿ ಉಂಟುಮಾಡಿರುವುದು ಖಂಡನೀಯವಾಗಿದೆ. ಯಾವುದೇ ಕಾರಣಕ್ಕೂ ಸರಕಾರ ಇಂತಹ ಅಪಾಯಕಾರಿ ತೀರ್ಮಾನ ಕೈಗೊಳ್ಳಬಾರದು. ಬೇಡಿಕೆ ಇರುವ ಪುಸ್ತಕಗಳ ಮರುಮುದ್ರಣಕ್ಕೆ ಅವಕಾಶ ನೀಡಬೇಕು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X