Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಸಮಾಜದ ಬದಲಾವಣೆಗೆ ‘ನಾಗರಿಕ...

ಸಮಾಜದ ಬದಲಾವಣೆಗೆ ‘ನಾಗರಿಕ ಪತ್ರಿಕೋದ್ಯಮ’ಕ್ಕೆ ಒತ್ತು: ರಾಜ್‌ದೀಪ್ ಸರ್ದೇಸಾಯಿ ಆಶಯ

ವಾರ್ತಾಭಾರತಿವಾರ್ತಾಭಾರತಿ10 Sept 2016 11:35 PM IST
share
ಸಮಾಜದ ಬದಲಾವಣೆಗೆ ‘ನಾಗರಿಕ ಪತ್ರಿಕೋದ್ಯಮ’ಕ್ಕೆ ಒತ್ತು: ರಾಜ್‌ದೀಪ್ ಸರ್ದೇಸಾಯಿ ಆಶಯ

ಮಣಿಪಾಲ, ಸೆ.10: ಇಂದು ಸುದ್ದಿ ಹಾಗೂ ಮಾಹಿತಿ ಎಂಬುದು ಕೆಲವೇ ಮಂದಿಯವಿಶೇಷ ಹಕ್ಕಾಗಿ ಉಳಿದಿಲ್ಲವಾದ ಕಾರಣ ಸಮಾಜದಲ್ಲಿ ಬದಲಾವಣೆ ಗಾಗಿ ನಾಗರಿಕ ಪತ್ರಿಕೋದ್ಯಮ(ಸಿಟಿಝನ್ ಜರ್ನಲಿಸಮ್)ವನ್ನು ಮಾಧ್ಯಮಗಳು ಬಳಸಿಕೊಳ್ಳಬೇಕು ಎಂದು ದೇಶದ ಅಗ್ರಮಾನ್ಯ ಪತ್ರಕರ್ತರಲ್ಲಿ ಒಬ್ಬರಾದ ರಾಜ್‌ದೀಪ್ ಸರ್ದೇಸಾಯಿ ಅಭಿಪ್ರಾಯಪಟ್ಟಿದ್ದಾರೆ.

ಮಣಿಪಾಲದ ಸ್ಕೂಲ್ ಆಫ್ ಕಮ್ಯುನಿಕೇಷನ್ ವತಿಯಿಂದ ಮಣಿಪಾಲದ ಗಂಗಾಬಾಯಿ ಹಾನಗಲ್ ಸಭಾಂಗಣದಲ್ಲಿ ಇಂದು ಸಂಜೆ ಆಯೋಜಿಸ ಲಾದ ಪತ್ರಕರ್ತ ದಿ.ಎಂ.ವಿ.ಕಾಮತ್ ದತ್ತಿನಿಧಿ ಉಪನ್ಯಾಸ ಮಾಲಿಕೆಯಲ್ಲಿ ‘ಸಮಾಜದ ಬದಲಾವಣೆಯಲ್ಲಿ ಮಧ್ಯವರ್ತಿಗಳಾಗಿ ಮಾಧ್ಯಮಗಳು’ ಎಂಬ ವಿಷಯದ ಕುರಿತು ಅವರು ಮಾತನಾಡುತಿದ್ದರು.

ಒಂದು ಕಾಲದಲ್ಲಿ ಪತ್ರಕರ್ತರು ವಿಷಯ ಮತ್ತು ಅಕ್ಷರದ ಪಕ್ಷಪಾತಿಯಾಗಿದ್ದರು. ಆದರೆ ಇಂದು ಪತ್ರಕರ್ತರು ಎಲ್ಲದಕ್ಕೂ ತಮ್ಮ ಬಳಿ ಉತ್ತರಗಳಿದ್ದು, ಉಳಿದವರು ಕೇವಲ ಪ್ರಶ್ನೆಗಳನ್ನು ಮಾತ್ರ ಕೇಳಬೇಕು ಎಂದು ನಂಬಿದ್ದಾರೆ. ಇಂದು ಪತ್ರಕರ್ತರು ಬಣಗಳಲ್ಲಿ ಹಂಚಿಹೋಗಿದ್ದು, ಧ್ರುವೀಕರಣ ಗೊಂಡಿದ್ದಾರೆ.
ಈಗ ಪತ್ರಕರ್ತರನ್ನು ದೇಶಪ್ರೇಮಿ-ದೇಶದ್ರೋಹಿ, ಜಾತ್ಯತೀತ-ನಕಲಿ (ಸ್ಯುಡೋ) ಜಾತ್ಯತೀತ, ಉದಾರವಾದಿ-ನಕಲಿ ಉದಾರವಾದಿ ಎಂದು ಗುರುತಿಸಲಾಗುತ್ತಿದೆ. ಇದರೊಂದಿಗೆ ಸಮಾಜದಲ್ಲಿರುವ ವೈಷಮ್ಯತೆ ಸಾಮಾನ್ಯ ಪತ್ರಕರ್ತನಲ್ಲಿ ಗಂಭೀರ ವಿಶ್ವಾಸಾರ್ಹತೆ ಬಿಕ್ಕಟ್ಟನ್ನು ಸೃಷ್ಟಿಸಿದೆ ಎಂದವರು ಆತಂಕ ವ್ಯಕ್ತಪಡಿಸಿದರು.

ಒಳ್ಳೆಯ ಪತ್ರಕರ್ತನನ್ನು ಸಮಾಜವೇ ರೂಪಿಸುತ್ತದೆ. ಆದರೆ ಇಂದು ಸಮಾಜದಲ್ಲಿ ಉಳಿದೆಲ್ಲಾ ಕ್ಷೇತ್ರಗಳಲ್ಲಿರುವ ಆಮಿಷಕ್ಕೆ ಪತ್ರಕರ್ತನೂ ಸುಲಭದಲ್ಲಿ ಬಲಿಯಾಗುತಿದ್ದಾನೆ. ಇದು ಅಧಿಕಾರದ ರೂಪದಲ್ಲಿರಬಹುದು ಅಥವಾ ಹಣದ ರೂಪದಲ್ಲೂ ಇರಬಹುದು. ವರ್ಷ ಕಳೆದಂತೆ ಪತ್ರಕರ್ತರು ವೃತ್ತಿಯ ಅವನತಿಗೆ ಕಾರಣರಾಗುತಿದ್ದಾರೆ. ಇಂದು ಪುರಾವೆ ಮತ್ತು ಅಭಿಪ್ರಾಯದ ನಡುವಿನ ಗೆರೆಯೇ ತೆಳುವಾಗುತ್ತಿದೆ ಎಂದರು.

ಕಾಶ್ಮೀರ ಸಮಸ್ಯೆ:

ಇದಕ್ಕೆ ಪ್ರಕ್ಷುಬ್ಧಗೊಂಡಿರುವ ಕಾಶ್ಮೀರ ಸಮಸ್ಯೆಯನ್ನು ಉದಾಹರಣೆಯಾಗಿ ನೀಡಿದ ಅವರು ಕಾಶ್ಮೀರದಲ್ಲಿ ಇಂದಿರುವ ನೈಜಸ್ಥಿತಿ ಹಾಗೂ ಮಾಧ್ಯಮಗಳಲ್ಲಿ ಪ್ರತಿಫಲಿತವಾಗುವ ಕಾಶ್ಮೀರವನ್ನು ವಿವರಿಸಿದರು. ದುರಾದೃಷ್ಟದ ವಿಷಯವೆಂದರೆ ಕಾಶ್ಮೀರದಲ್ಲಿ ನಿಜವಾಗಿಯೂ ಏನು ನಡೆಯುತ್ತಿದೆ ಎಂಬುದು ಇಂದು ಓದುಗರ ಅಥವಾ ವೀಕ್ಷಕರ ಮುಂದೆ ಪ್ರಸ್ತುತಗೊಳ್ಳುತ್ತಲೇ ಇಲ್ಲ. ನಿಜವಾದ ಒಬ್ಬ ಪತ್ರಕರ್ತ ತನ್ನ ಅಭಿಪ್ರಾಯಗಳನ್ನು ಹೇರದೇ ಬೇರೆ ಬೇರೆ ಧ್ವನಿಗಳಿಗೆ ಅವಕಾಶ ನೀಡುವ ಸಾಮರ್ಥ್ಯ ಹಾಗೂ ಧೈರ್ಯವನ್ನು ಹೊಂದಿರಬೇಕು. ಆದರೆ ಕಾಶ್ಮೀರ ಸಮಸ್ಯೆಯಂಥ ಗಂಭೀರ ವಿಷಯವನ್ನು ನಾವು ಕಪ್ಪು-ಬಿಳುಪು ರೂಪದಲ್ಲಿ ತೋರಿಸುತ್ತಿದ್ದೇವೆ ಎಂದವರು ಕಳವಳ ವ್ಯಕ್ತಪಡಿಸಿದರು.

ಅದೇ ರೀತಿ ಜೆಎನ್‌ಯು ಹಾಗೂ ಕನ್ಹಯ್ಯ ಕುಮಾರ್ ವಿಷಯದಲ್ಲೂ ಮಾದ್ಯಮಗಳ ಪಾತ್ರವನ್ನು ಟೀಕಿಸಿದ ರಾಜ್‌ದೀಪ್, ಇಂದು ಸತ್ಯ ಎಂಬುದನ್ನು ಭಾವೋದ್ರೇಕ, ಸುದ್ದಿಯನ್ನು ಗದ್ದಲ ಸ್ಥಾನಪಲ್ಲಟಗೊಳಿಸಿವೆ. ವಿಶ್ವಾಸಾರ್ಹತೆಯ ಸ್ಥಾನವನ್ನು ಅವ್ಯವಸ್ಥೆ ತುಂಬಿದ್ದು, ಟಿಆರ್‌ಪಿ ಎಂಬುದು ಮಂತ್ರದಂಡದಂತೆ ಭಾಸವಾಗುತ್ತಿದೆ. ಜನಸಾಮಾನ್ಯರಿಗೆ ಸಂಬಂಧಪಟ್ಟ ನಿಜವಾದ ಸುದ್ದಿ, ಸಮಸ್ಯೆಗಳು ಇಂದು ಮಾಧ್ಯಮಗಳ ಪಾಲಿಗೆ ಸುದ್ದಿಯಾಗಿ ಗೋಚರಿಸುತ್ತಲೇ ಇಲ್ಲ ಎಂದವರು ವಿಷಾಧಿಸಿದರು.

ಸಮಾಜದಲ್ಲಿ ಆಳವಾಗಿ ಬೇರುಬಿಟ್ಟಿರುವ ಅಸಮಾನತೆ, ಅಸ್ಪಶ್ಯತೆ, ಹಿಂಸೆ, ಭ್ರಷ್ಟಾಚಾರ, ಬುಡಕಟ್ಟು ಪ್ರದೇಶಗಲ್ಲಿರುವ ಪ್ರಕ್ಷುಬ್ಧತೆ ಮಾಧ್ಯಮಗಳ ಕಣ್ಣಿಗೆ ಬೀಳುವುದೇ ಇಲ್ಲ. ಆಶಾವಾದ ಹಾಗೂ ಸಿನಿಕತೆ ಇಂದು ಒಟ್ಟಿಗಿದೆ. ದೇಶ ಬದಲಾಗುತ್ತಿದೆ ಎಂದು ಬೊಬ್ಬೆ ಹೊಡೆಯಲಾಗುತ್ತಿದೆ. ಆದರೆ ಇದು ಟಿವಿ ಸ್ಟುಡಿಯೊಗಳಲ್ಲಿ ಎಲ್ಲಿಯೂ ಕಾಣಿಸುತ್ತಿಲ್ಲ ಎಂದವರು ವ್ಯಂಗ್ಯವಾಡಿದರು.

ಇಂಥ ನಿರಾಶಾದಾಯಕ ಸನ್ನಿವೇಶದಲ್ಲಿ ಆಶಾವಾದದ ಕಿರಣದ ರೂಪದಲ್ಲಿ ಬದಲಾವಣೆಯ ಏಜೆಂಟ್ ಆಗಿ ಕಾಣಿಸಿಕೊಳ್ಳುವುದು ಸ್ಥಳೀಯ ಪತ್ರಿಕೆಗಳು ಹಾಗೂ ಮಾಧ್ಯಮಗಳು. ನಾವಿಂದು 360 ಡಿಗ್ರಿ ಮೀಡಿಯಾ ಯುಗದಲ್ಲಿದ್ದೇವೆ. ಇವುಗಳನ್ನು ಜಾಣತನದಿಂದ ಬಳಸಿಕೊಂಡರೆ, ಇವುಗಳ ಸಾಮಾಜಿಕ ಬದಲಾವಣೆಯ ಹರಿಕಾರರಾಗುವ ಎಲ್ಲಾ ಸಾಧ್ಯತೆಗಳಿವೆ. ಪೆಯ್ಡ್ ನ್ಯೂಸ್ ಎಂಬುದು ನೈಜತೆಯಾದರೂ, ಸಮಾಜವೆಂಬ ಪಿರಮಿಡ್‌ನ ತುದಿಯಲ್ಲಿರುವ ವರ ಮೇಲೆ ಪ್ರಖರ ಬೆಳಕು ಬಿದ್ದಾಗಲಷ್ಟೇ ಬದಲಾವಣೆ ಕಾಣಬಹುದು ಎಂದರು.

ಬ್ರಿಟಿಷರಿಂದ ಬಳುವಳಿಯಾಗಿ ಬಂದ ದೇಶದ್ರೋಹ ಹಾಗೂ ಮಾನನಷ್ಟ ಮೊಕದ್ದಮೆಗಳು ಮಾಧ್ಯಮಗಳ ಪಾಲಿಗೆ ಈಗಲೂ ಕಂಟಕವಾಗಿ ಉಳಿದಿವೆ. ಇದರಿಂದಾಗಿಯೇ ಮಾಧ್ಯಮಗಳು ತನಿಖಾ ಪತ್ರಿಕೋದ್ಯಮದಿಂದ ಹಿಂದೆ ಸರಿಯುವಂತಾಗಿದೆ. ವೆಬ್‌ಸೈಟ್ ಮತ್ತು ನ್ಯೂಸ್ ಆ್ಯಪ್‌ಗಳು ಮುಂಬರುವ ದಿನಗಳಲ್ಲಿ ಅಚ್ಚರಿದಾಯಕ ಫಲಿತಾಂಶಗಳನ್ನು ನೀಡಬಹುದು. ವಿಷಯ ಹಾಗೂ ತಂತ್ರಜ್ಞಾನದ ಸಂಯೋಜನೆ ಮಾಧ್ಯಮಗಳಲ್ಲಿ ಆಸಕ್ತಿಕರ ಬದಲಾವಣೆಗೆ ಕಾರಣವಾಗಬಹುದು. ಇಂಥವಲ್ಲಿ ನಾಗರಿಕ ಪತ್ರಿಕೋದ್ಯಮ ವಿಶೇಷ ಪಾತ್ರ ವಹಿಸಬಹುದು. ಸೋಷಿಯಲ್ ಮೀಡಿಯಾ ಸಮಾಜದ ಬದಲಾವಣೆಯಲ್ಲಿ ಗುರುತರವಾದ ಕಾಣಿಕೆ ನೀಡುವ ಸಾಧ್ಯತೆ ಇದೆ ಎಂದರು.

ಮಣಿಪಾಲ ವಿವಿ ಚಾನ್ಸಲರ್ ಡಾ.ರಾಮದಾಸ ಎಂ.ಪೈ ಅಧ್ಯಕ್ಷತೆ ವಹಿಸಿದ್ದರು. ಸಿಂಡಿಕೇಟ್ ಬ್ಯಾಂಕಿನ ಜಿಎಂ ಸತೀಶ್ ಕಾಮತ್ ಉಪಸ್ಥಿತರಿದ್ದರು. ಎಸ್‌ಒಸಿಯ ನಿರ್ದೇಶಕಿ ಡಾ.ನಂದಿನಿ ಲಕ್ಷೀಕಾಂತ ಸ್ವಾಗತಿಸಿದರೆ, ಸಹ ನಿರ್ದೇಶಕಿ ಡಾ.ಸುಧಾರಾಣಿ ಎಂ.ವಿ.ಕಾಮತ್‌ರ ಸಂಸ್ಮರಣೆ ಮಾಡಿದರು. ಡಾ.ಶುಭಾ ವಂದಿಸಿದರು.

ರಾಷ್ಟ್ರವಾದಿಗೆ ಧೈರ್ಯಬೇಕು

ಸಂವಾದದಲ್ಲಿ ವಿದ್ಯಾರ್ಥಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ರಾಜ್‌ದೀಪ್, ನಿಜವಾದ ರಾಷ್ಟ್ರವಾದಿಗೆ ರಾಜ ಬೆತ್ತಲೆಯಾಗಿರುವುದನ್ನು ಹೇಳುವ ಧೈರ್ಯ ಇರಬೇಕು. ದೇಶಪ್ರೇಮ ಎಂಬುದು ಯಾರೊಬ್ಬರ ಏಕಸ್ವಾಮ್ಯವಲ್ಲ ಎಂದರು.

ನ್ಯೂಯಾರ್ಕ್‌ನ ಮೆಡ್ಸನ್ ಸ್ಕ್ವಾರ್‌ಗಾರ್ಡನ್‌ನಲ್ಲಿ ನಡೆದ ಘಟನೆಯ (ಪ್ರಧಾನಿ ನರೇಂದ್ರ ಮೋದಿ ಭಾಷಣದ ವೇಳೆ) ಕುರಿತು ಮಾತನಾಡಿದ ಅವರು, 14 ವರ್ಷಗಳ ಹಿಂದೆ ಗುಜರಾತ್ ಗಲಭೆ ಕುರಿತ ವರದಿಗೆ ನನ್ನನ್ನು ಹೊಣೆಗಾರರನ್ನಾಗಿ ಯಾಕೆ ಮಾಡಬೇಕು ಎಂದವರು ಪ್ರಶ್ನಿಸಿದರು. ನಾನು ಅಲ್ಲಿ ನನ್ನ ಹೇಳಿಕೆಗೆ, ನನಗೆ ವರದಿಗಾಗಿ ಕ್ಷಮೆಯಾಚಿಸಿಲ್ಲ. ಸುದ್ದಿ ಮಾಡಬೇಕಾದ ನಾನೇ ಸುದ್ದಿಯಾಗಿರುವುದಕ್ಕೆ ಕ್ಷಮೆಯಾಚಿಸಿದ್ದೆ ಎಂದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X