Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಮನ್ ಕೀ ಬಾತ್‌ನಿಂದ ಬಡವರ ಹೊಟ್ಟೆ...

ಮನ್ ಕೀ ಬಾತ್‌ನಿಂದ ಬಡವರ ಹೊಟ್ಟೆ ತುಂಬಲ್ಲ

ವಾರ್ತಾಭಾರತಿವಾರ್ತಾಭಾರತಿ11 Sept 2016 11:21 PM IST
share
ಮನ್ ಕೀ ಬಾತ್‌ನಿಂದ ಬಡವರ ಹೊಟ್ಟೆ ತುಂಬಲ್ಲ

ಮನ್ ಕೀ ಬಾತ್‌ನಿಂದ ಬಡವರ ಹೊಟ್ಟೆ ತುಂಬಲ್ಲ

-ಬಿ.ಕೆ ಹರಿಪ್ರಸಾದ್, ಕಾಂಗ್ರೆಸ್ ನಾಯಕ

ಕೇಸರಿ ಬಾತ್ ತರ ಅದೂ ಒಂದು ತಿಂಡಿ ಎಂದು ಜನರು ಭಾವಿಸಿ ತಿನ್ನಬೇಕಾಗಿದೆ.

---------------------

ಜನಸೇವಕನೇ ನಿಜವಾದ ಜನನಾಯಕ

-ಪ್ರಮೋದ್ ಮಧ್ವರಾಜ್, ಸಚಿವ

ಸಚಿವ, ಶಾಸಕರೆಲ್ಲ ಹಾಗಾದರೆ ಏನು?

---------------------

ನಮ್ಮ ಪ್ರಜಾಪ್ರಭುತ್ವ ಅತ್ಯಂತ ಪ್ರಬುದ್ಧವಾಗಿದೆ

-ಅಮಿತ್ ಶಾ, ಬಿಜೆಪಿ ಅಧ್ಯಕ್ಷ

ಆದರೆ ಅದು ಅಪ್ರಬುದ್ಧರ ಕೈಯಲ್ಲಿ ಸಿಲುಕಿ ನರಳುತ್ತಿದೆ.

---------------------

ನಮ್ಮ ಜೀವನವನ್ನು ಭಾವನೆಗಳು ಆಳುತ್ತವೆ

-ಬಾಬಾ ರಾಮ್‌ದೇವ್, ಯೋಗಗುರು

ಭಾವನೆಗಳ ತಳಹದಿಯ ಮೇಲೆ ತಾನೆ ನಿಮ್ಮ ಪತಂಜಲಿ ನಿಂತಿರುವುದು.

---------------------

ಇಂದಿನ ರಾಜಕಾರಣಿಗಳು ಯಾರೂ ಪ್ರಾಮಾಣಿಕರಲ್ಲ

-ಬಸವರಾಜ ರಾಯರೆಡ್ಡಿ, ಸಚಿವ

ಹೆಮ್ಮೆಯಿಂದ ಹೇಳಿಕೊಳ್ಳುತ್ತಿರುವ ಹಾಗಿದೆ.

---------------------

ವರ್ಷಕ್ಕೆ ಒಂದು ಬಾರಿ ಖಾದಿ ಹಾಕುವವರು ದೇಶಭಕ್ತರಲ್ಲ

-ಪ್ರಹ್ಲಾದ್ ಜೋಷಿ, ಸಂಸದ

ಖಾದಿಯ ಜೊತೆಗೆ ಕೇಸರಿಯನ್ನೂ ಧರಿಸಬೇಕೇ?

---------------------

ಹಿಂದ ವರ್ಗದ ಅಭಿವೃದ್ಧಿ ಆಗುವವರೆಗೂ ವಿಶ್ರಮಿಸುವುದಿಲ್ಲ

-ಕೆ.ಎಸ್ ಈಶ್ವರಪ್ಪ, ವಿ.ಪ.ವಿ.ಪ ನಾಯಕ

ಯಡಿಯೂರಪ್ಪರನ್ನು ಹಿಂದೆ ಹಾಕುವವರೆಗೆ ಎಂದರೆ ಇನ್ನೂ ಅರ್ಥಪೂರ್ಣವಾಗಿರುತ್ತಿತ್ತು.

---------------------

ಅಜ್ಞಾತವಾಸದಲ್ಲಿದ್ದ ಪಾಂಡವರನ್ನು ಹುಡುಕಲು ಕೌರವರು ಗೋ ಅಪಹರಣ ಮಾಡಿದ್ದರು

-ರಾಘವೇಶ್ವರ ಭಾರತಿ ಸ್ವಾಮೀಜಿ, ರಾಮಚಂದ್ರಾಪುರ ಮಠ

ಸೈರಂಧ್ರಿಯ ಸೀರೆಗೆ ಕೈ ಹಾಕಿದ ಕೀಚಕನ ಉದಾಹರಣೆ ಯಾಕೆ ನೀಡಬಾರದು?

---------------------

ಕೇಜ್ರಿವಾಲ್ ಸಂಪುಟ ಸದಸ್ಯರು ಭ್ರಷ್ಟಾಚಾರ ಆರೋಪದ ಮೇಲೆ ಜೈಲಿಗೆ ಹೋಗುತ್ತಿರುವುದು ಬೇಸರದ ಸಂಗತಿ

-ಅಣ್ಣಾ ಹಝಾರೆ, ಸಾಮಾಜಿಕ ಹೋರಾಟಗಾರ

ಒಳಗೊಳಗೆ ಸಂಭ್ರಮಪಡುತ್ತಿರುವ ವಿಷಯವೂ ಬಹಿರಂಗವಾಗಿದೆ.

---------------------

ಪಿಡಿಪಿ ನಾಯಕಿ ಮೆಹಬೂಬ ಮುಫ್ತಿ ನಾಯಿ ಬಾಲ ಇದ್ದಂತೆ

-ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ನಾಯಕ

ಮತ್ತೇಕೆ ಆ ಬಾಲಕ್ಕೆ ಜೋತು ಬಿದ್ದಿದ್ದೀರಿ?

---------------------

ಗಾಜಿನ ಮನೆಯಲ್ಲಿ ಕುಳಿತವರು ಇತರರ ಕಡೆಗೆ ಕಲ್ಲು ತೂರಬಾರದು

-ಗೌತಮ್ ಬಾಂದಾವಲೆ, ಪಾಕ್‌ನಲ್ಲಿರುವ ಭಾರತದ ಹೈಕಮಿಷನರ್

ಗುಂಡಿನ ದಾಳಿ ನಡೆಸಬಹುದೇ?

---------------------

ಖಾಸಗಿ ಶಾಲೆಗಳ ಜತೆ ಸ್ಪರ್ಧೆ ಮಾಡುವ ಧೈರ್ಯವನ್ನು ಸರಕಾರಿ ಶಾಲೆಯ ಶಿಕ್ಷಕರು ಬೆಳೆಸಿಕೊಳ್ಳಬೇಕು

-ಶೋಭಾ ಕರಂದ್ಲಾಜೆ, ಸಂಸದೆ

ಆ ಧೈರ್ಯವನ್ನು ಮೊದಲು ಸರಕಾರ ಪ್ರದರ್ಶಿಸಬೇಕಾಗಿದೆ.

---------------------

ಹುಟ್ಟಿದವರೆಲ್ಲ ಬಸವ ಆಗಲು ಸಾಧ್ಯವಿಲ್ಲ

-ಡಿ.ಕೆ ಶಿವಕುಮಾರ್, ಸಚಿವ

ಆದರೆ ತಮ್ಮ ಹಾಗೆ ಬೋಳೆ ಬಸವ ಆಗುವುದಕ್ಕೆ ಸಾಧ್ಯ.

---------------------

ನಾನು ಪಂಜಾಬಿ ಆಗಿದ್ದರೂ ಮದುವೆಯಾಗಿದ್ದು ಬ್ರಾಹ್ಮಣನನ್ನು. ಆದ್ದರಿಂದ ನಾನು ಬ್ರಾಹ್ಮಣ ಮಹಿಳೆ

-ಶೀಲಾ ದೀಕ್ಷಿತ್, ಕಾಂಗ್ರೆಸ್ ನಾಯಕಿ

ಬಹಳ ದುಃಖದ ವಿಷಯ.

---------------------

ಮನುಷ್ಯನಿಗೆ ಆರ್ಥಿಕ ಬಡತನ ಇದ್ದರೂ ಹೃದಯ ಬಡತನ ಇರಬಾರದು

-ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ, ಧರ್ಮಸ್ಥಳ

ಹೃದಯ ಶ್ರೀಮಂತಿಕೆಯನ್ನು ಬಡ್ಡಿಗೆ ಸಾಲ ನೀಡುವ ಯೋಜನೆಯೇನಾದರೂ ಇದೆಯೇ?

---------------------

ಪಾಕಿಸ್ತಾನ ಭಯೋತ್ಪಾದಕರನ್ನು ಉತ್ಪಾದಿಸುವ ಮತ್ತು ರಫ್ತು ಮಾಡುವ ದೇಶ

-ನರೇಂದ್ರ ಮೋದಿ, ಪ್ರಧಾನಿ

ನೀವು ಆಮದು ಮಾಡಿಕೊಳ್ಳಲು ಅತ್ಯುತ್ಸಾಹದಲ್ಲಿರುವಾಗ, ಅವರು ರಫ್ತು ಮಾಡದೇ ಇರುತ್ತಾರೆಯೇ?

---------------------

ಬಿಜೆಪಿಯಲ್ಲಿ ನಾನು ಆಲಂಕಾರಿಕ ವಸ್ತುವಿನಂತಿದ್ದೆ

-ನವಜೋತ್ ಸಿಂಗ್ ಸಿಧು, ಮಾಜಿ ಸಂಸದ

ಬರೇ ಅಲಂಕಾರಕ್ಕಷ್ಟೇ ಸೀಮಿತ ಎಂದಾಯಿತು.

---------------------

ರಾಹುಲ್ ಗಾಂಧಿ ಒಳ್ಳೆಯ ಮನುಷ್ಯ

-ಅಖಿಲೇಶ್ ಯಾದವ್, ಉ.ಪ.ಮುಖ್ಯಮಂತ್ರಿ

ಅದಷ್ಟೇ ಚುನಾವಣೆ ಗೆಲ್ಲಲು ಸಾಕಾಗುವುದಿಲ್ಲ.

---------------------

ಪಾಠ ಮಾಡುವುದನ್ನು ಬಿಟ್ಟು ಜನಪ್ರತಿನಿಧಿಗಳ ಹಿಂದೆ ಸುತ್ತುವ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

-ತನ್ವೀರ್ ಸೇಠ್, ಸಚಿವ

ಮುಖ್ಯಮಂತ್ರಿಯ ಹಿಂದೆ ಸುತ್ತುವ ಸಚಿವರ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು.

---------------------

ಧರ್ಮ ರಕ್ಷಣೆ ನಮ್ಮ ಕರ್ತವ್ಯವಾಗಬೇಕು

-ವಜುಭಾಯಿ ವಾಲ, ರಾಜ್ಯಪಾಲ

ರಾಜಧರ್ಮದ ಗತಿ?

---------------------

ನಾನಿನ್ನೂ ತಾಜ್‌ಮಹಲ್ ನೋಡಿಲ್ಲ

-ಬರಾಕ್ ಒಬಾಮ, ಅಮೆರಿಕ ಅಧ್ಯಕ್ಷ

ಸಂಘಪರಿವಾರದ ಕಣ್ಣು ಅದರ ಮೇಲೆ ಬೀಳುವ ಮೊದಲು ಒಮ್ಮೆ ನೋಡಿಬಿಡಿ.

---------------------

ಜಯಲಲಿತಾ ತವರು ಮನೆಗೆ ಅನ್ಯಾಯ ಮಾಡಬಾರದು

-ಭಾರತಿ ವಿಷ್ಣುವರ್ಧನ್, ನಟಿ

ಹಾಗೆಂದು ಗಂಡನ ಮನೆಗೆ ದ್ರೋಹ ಬಗೆಯುವುದಕ್ಕಾಗುತ್ತದೆಯೇ?

---------------------

ಭಾರತಕ್ಕೆ ಬರುವ ಆಸೆ ಇದೆ. ಆದರೆ ಪಾಸ್‌ಪೋರ್ಟ್ ಇಲ್ಲ

-ವಿಜಯ ಮಲ್ಯ, ಉದ್ಯಮಿ ನೀವೇ ಬರಬೇಕಾಗಿಲ್ಲ, ನಮ್ಮ ಪೊಲೀಸರನ್ನು ಅಲ್ಲಿಗೇ ಕಳುಹಿಸಿಕೊಡುತ್ತೇವೆ.

---------------------

ಕನ್ನಡ ಕಲಿತ ಮಕ್ಕಳು ಬಾವಿಯೊಳಗಿನ ಕಪ್ಪೆಗಳಂತಾಗುತ್ತಾರೆ

-ನಾ.ಆನಂದ ಬೈರಾರೆಡ್ಡಿ, ಹೈಕೋರ್ಟ್ ನ್ಯಾಯಮೂರ್ತಿ

ಬಾವಿಯೊಳಗೆ ಕುಳಿತು ನೀಡಿದ ಹೇಳಿಕೆ.

---------------------

ಮೋದಿ ಪ್ರಧಾನಿಯಾಗಬೇಕು ಎನ್ನುವ ಕಾರಣಕ್ಕೆ ಗೊತ್ತು ಗುರಿ ಇಲ್ಲದವರೆಲ್ಲ ಸಂಸದರಾದರು

-ಎಚ್.ಡಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ಮೋದಿಯವರನ್ನು ಇಳಿಸುವುದಕ್ಕಾಗಿ ಅವರನ್ನೆಲ್ಲ ಜನರೇ ಇಳಿಸುತ್ತಾರೆ ಬಿಡಿ.

---------------------

share
ವಾರ್ತಾಭಾರತಿ
ವಾರ್ತಾಭಾರತಿ
Next Story
X