ಕಾವೇರಿ ಜಲ ವಿವಾದ:ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಸ್ಥಗಿತ

ಬೆಂಗಳೂರು, ಸೆ.12: ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿ ರಾಜ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಬಸ್ ಸಂಚಾರದ ಮೇಲೆ ತೀವ್ರ ಪರಿಣಾಮ ಬೀರಿದೆ.
ತಮಿಳುನಾಡಿಗೆ ತೆರಳುವ ರಾಜ್ಯದ ಸರಕಾರಿ ಬಸ್ಗಳನ್ನು ಸ್ಥಗಿತಗೊಳಿಸಲಾಗಿದೆ. ಮಾತ್ರವಲ್ಲ ಬೆಂಗಳೂರಿನ ಜನತೆಯ ಜೀವನಾಡಿ ಬಿಎಂಟಿಸಿ ಬಸ್ ಹಾಗೂ ಕೆಲವು ಕೆಎಸ್ಆರ್ಟಿಸಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ನಗರದ ಅಲ್ಲಲ್ಲಿ ಲಾರಿ, ಬಸ್ಗಳಿಗೆ ಬೆಂಕಿ ಇಡುತ್ತಿರುವ ಕಾರಣ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ ಎನ್ನಲಾಗಿದೆ.
ಮಂಡ್ಯ, ಮೈಸೂರು,ಹಾಸನದಲ್ಲಿ ಕೆಎಸ್ಆರ್ಟಿಸಿ ಬಸ್ಗಳನ್ನು ತಮಿಳುನಾಡಿಗೆ ತೆರಳದಂತೆ ಸೂಚಿಸಲಾಗಿದೆ.
Next Story





