Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಪರಸ್ಪರರ ಪತ್ನಿಯರಿಗೆ ಕಿಡ್ನಿ ನೀಡಿ...

ಪರಸ್ಪರರ ಪತ್ನಿಯರಿಗೆ ಕಿಡ್ನಿ ನೀಡಿ ಪ್ರಾಣ ಉಳಿಸಿದ ಹಿಂದೂ - ಮುಸ್ಲಿಂ ಗಂಡಂದಿರು!

ವಾರ್ತಾಭಾರತಿವಾರ್ತಾಭಾರತಿ12 Sept 2016 8:31 PM IST
share
ಪರಸ್ಪರರ ಪತ್ನಿಯರಿಗೆ ಕಿಡ್ನಿ ನೀಡಿ ಪ್ರಾಣ ಉಳಿಸಿದ ಹಿಂದೂ - ಮುಸ್ಲಿಂ ಗಂಡಂದಿರು!

ಜೈಪುರ, ಸೆ.12 : ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಎರಡು ಕಿಡ್ನಿ (ಮೂತ್ರಕೋಶ) ಗಳ ಕಸಿ ನಡೆಯಿತು. ಆದರೆ ಇದರಲ್ಲೊಂದು ವಿಶೇಷತೆಯಿದೆ. ಅದೇನೆಂದರೆ, ಒಂದು ಕಿಡ್ನಿಯನ್ನು ಹಿಂದೂ ವ್ಯಕ್ತಿಯೊಬ್ಬರು ಮುಸ್ಲಿಂ ಮಹಿಳೆಗೆ ನೀಡಿದರೆ,  ಆ ಮುಸ್ಲಿಂ ಮಹಿಳೆಯ ಪತಿ ತನ್ನ ಒಂದು ಕಿಡ್ನಿಯನ್ನು ಆ ಹಿಂದೂ ವ್ಯಕ್ತಿಯ ಪತ್ನಿಗೆ ನೀಡಿದರು ! 

ಹಸನಪುರ ನಿವಾಸಿ ಅನಿತಾ ಮೆಹ್ರಾ ಅವರು ಕೆಲವು ವರ್ಷಗಳಿಂದ ಕಾಯಿಲೆಯೊಂದರಿಂದ ಬಳಲುತ್ತಿದ್ದು ಇದೀಗ ಅದರ ಪರಿಣಾಮದಿಂದ ಅವರ  ಮೂತ್ರಪಿಂಡ ವೈಫಲ್ಯಗೊಂಡಿತ್ತು . ಅಜ್ಮೀರೀ  ಗೇಟ್ ನಿವಾಸಿ ತಸ್ಲೀಮ್ ಜಾನ್ ಅವರ ಮೂತ್ರ ಪಿಂಡವೂ  ವಿಫಲವಾಗಿ ಅವರು ಮೆಹ್ರಾ ಇದ್ದ ಆಸ್ಪತ್ರೆಯಲ್ಲೇ ದಾಖಲಾಗಿದ್ದರು. 

ಅನಿತಾ ಅವರ ರಕ್ತದ ಗುಂಪು ಬಿ ಪಾಸಿಟಿವ್ ಆದರೆ, ತಸ್ಲೀಮ್ ಅವರದು ಎ ಪಾಸಿಟಿವ್ ಆಗಿತ್ತು. ಇಬ್ಬರು ಚಿಕಿತ್ಸೆಗೆ ಬಂದಾಗ ಅವರ ಗಂಡಂದಿರ  ರಕ್ತದ ಗುಂಪು ಪರೀಕ್ಷಿಸಿದ ವೈದ್ಯರಿಗೆ ಒಂದು ವಿನೂತನ ಉಪಾಯ ಹೊಳೆಯಿತು.  ಕಾರಣ ಅನಿತಾ ಅವರ ಪತಿ ವಿನೋದ್ ಮೇಹ್ರಾ  ಅವರ ರಕ್ತದ ಗುಂಪು ಎ ಪಾಸಿಟಿವ್ ಇದ್ದರೆ, ತಸ್ಲೀಮ್ ಅವರ ಪತಿ ಅನ್ವರ್ ಅಹ್ಮದ್ ಅವರದು ಬಿ ಪಾಸಿಟಿವ್ ಆಗಿತ್ತು.

ವೈದ್ಯರು ಅವರಿಗೆ ನೀವು ನಿಮ್ಮ ಮೂತ್ರ ಪಿಂಡಗಳನ್ನು ಪರಸ್ಪರ ನೀಡಿ ಎಂದು ವಿವರವಾಗಿ ತಿಳಿಸಿ,ಮನವರಿಕೆ ಮಾಡಿದಾಗ ಇಬ್ಬರು ತಕ್ಷಣವೇ ಒಪ್ಪಿಕೊಂಡರು. ವಿನೋದ್ ತನ್ನ ಒಂದು ಮೂತ್ರಪಿಂಡವನ್ನು ತಸ್ಲೀಮಾ ಅವರಿಗೆ ನೀಡಿದರೆ, ಅನಿತಾ ಅವರಿಗೆ ಅನ್ವರ್ ತನ್ನ ಒಂದು ಮೂತ್ರಪಿಂಡ ನೀಡಿದರು. ಮಾನವ ಅಂಗಾಂಗ ಕಸಿ ಕಾನೂನಿನ ಪ್ರಕಾರ ಕೇವಲ ಸಮೀಪ ಸಂಬಂಧಿಗಳು ಮಾತ್ರ ಒಬ್ಬರಿಗೊಬ್ಬರು ಕಿಡ್ನಿ ದಾನ ಮಾಡಬಹುದು. ಆದರೆ ಪರಸ್ಪರ ಬದಲಾವಣೆ ಮಾಡಲು ಅಡ್ಡಿಯಿಲ್ಲ. ಹಾಗಾಗಿ ಇವರಿಗೆ ಕಾನೂನಿನ ತೊಡಕೂ ಬರಲಿಲ್ಲ. 

ಮೂತ್ರ ಪಿಂಡ ಶಾಸ್ತ್ರಜ್ಞ ಡಾ. ಆಶುತೋಷ್ ಸೋನಿ ಅವರ ಪ್ರಕಾರ, ಶೆ.90 ರಷ್ಟು ಪ್ರಕರಣಗಳಲ್ಲಿ ಮಹಿಳೆಯರು ದಾನಿಗಳಾಗಿರುತ್ತಾರೆ . ಆದರೆ ಇಲ್ಲಿ ಪುರುಷರು ದಾನಿಗಳಾಗಿದ್ದಾರೆ ಎಂದು ಅವರು  ಹೇಳಿದ್ದಾರೆ.

ಈ ಹಿಂದೆ ಬೆಂಗಳೂರಿನಲ್ಲಿ ಇಬ್ಬರು ಮಹಿಳೆಯರು  ತಮ್ಮ ಮೂತ್ರಪಿಂಡವನ್ನು ಪರಸ್ಪರ ಗಂಡಂದಿರಿಗೆ ನೀಡಿದ್ದರು ಎಂದು ವರದಿಯಾಗಿತ್ತು.
“ನಾನು ಬಕ್ರೀದ್ ನ್ನು ತುಂಬಾ ಸಂತಸದಿಂದ ಆಚರಿಸುವಂತೆ ಆಗಿದೆ. ವೀನೋದ್ ಮೇಹ್ರಾ ನನ್ನ ಹೆಂಡತಿಗೆ ಮೂತ್ರಪಿಂಡ ನೀಡಿದ್ದು, ಅವರಿಗೆ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಈಗ ನನ್ನ ಹೆಂಡತಿ ಚೇತರಿಸಿಕೊಳ್ಳುತ್ತಿದ್ದಾಳೆ. ನಾವು ವಿನೋದ್ ಅವರನ್ನು ಗೌರವಿಸುತ್ತೇನೆ'' ಎಂದು ಅನ್ವರ್ ಅಹ್ಮದ್ ಹರ್ಷ ವ್ಯಕ್ತಪಡಿಸಿದ್ದಾರೆ.

ಅದಕ್ಕೆ ಪ್ರತಿಕ್ರಿಯೆ ನೀಡಿರುವ ವಿನೋದ್, "ಇದು ನನಗೆ ದೀಪಾವಳಿ ಹಬ್ಬಕ್ಕಿಂತ ಕಡಿಮೆ ಖುಷಿಯಲ್ಲ " ಎಂದಿದ್ದಾರೆ.

ಸೆ.2 ರಂದು ಮೂತ್ರಪಿಂಡಗಳನ್ನು ಕಸಿ ಮಾಡಲಾಗಿತ್ತು. ದಾನ ಮಾಡಿದ ಪತಿಯಂದಿರು ಈಗಾಗಲೇ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು , ಸೆ.12 ರಂದು ಕಿಡ್ನಿ ಪಡೆದ ಪತ್ನಿಯರು  ಆಸ್ಪತ್ರೆಯಿಂದ ಬಿಡುಗಡೆ ಆಗಲಿದ್ದಾರೆ. 


 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X