Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಜಾಗತಿಕ ತೈಲ ದರ ಸ್ಥಿರವಾಗಿದ್ದರೂ...

ಜಾಗತಿಕ ತೈಲ ದರ ಸ್ಥಿರವಾಗಿದ್ದರೂ ಭಾರತದಲ್ಲೇಕೆ ರಾಕೆಟ್‌ನಂತೆ ಆಕಾಶಕ್ಕೆ ಹಾರುತ್ತಿದೆ?

ವಾರ್ತಾಭಾರತಿವಾರ್ತಾಭಾರತಿ16 Sept 2016 10:44 PM IST
share
ಜಾಗತಿಕ ತೈಲ ದರ ಸ್ಥಿರವಾಗಿದ್ದರೂ ಭಾರತದಲ್ಲೇಕೆ ರಾಕೆಟ್‌ನಂತೆ ಆಕಾಶಕ್ಕೆ ಹಾರುತ್ತಿದೆ?

▬ ನವೆಂಬರ್ 2014ರಲ್ಲಿ ತೈಲ ಬ್ಯಾರಲ್‌ಗೆ ಇದ್ದದ್ದು 106 ಡಾಲರ್..ಈಗ 43 ಡಾಲರ್
▬ ಆದರೆ ಈಗಲೂ ಭಾರತದಲ್ಲಿ ಪೆಟ್ರೋಲ್ ಬೆಲೆ ನವೆಂಬರ್ 2014ರಲ್ಲಿದ್ದಷ್ಟೇ ಇದೆ
▬ ಸರಕಾರಕ್ಕೆ ಇದನ್ನು ನಿಯಂತ್ರಿಸಲು ಸಾಧ್ಯವಿಲ್ಲವೇ?
▬ ಕುತೂಹಲಕಾರಿ ಅಂಕಿ ಅಂಶಗಳು, ವಿಶ್ಲೇಷಣೆ

ಗುರುವಾರ ಪೆಟ್ರೋಲ್ ದರ ಲೀಟರ್‌ಗೆ 0.58 ರೂಪಾಯಿ ಹೆಚ್ಚಿದೆ ಹಾಗೂ ಡೀಸೆಲ್ ಬೆಲೆ 0.31 ರೂಪಾಯಿ ಇಳಿದಿದೆ. ಇದು ಕಳೆದ ಎರಡು ವಾರಗಳಲ್ಲಿ ಆಗುತ್ತಿರುವ ಎರಡನೇ ದರ ಪರಿಷ್ಕರಣೆ. ಇದೀಗ ದೆಹಲಿಯಲ್ಲಿ ಪೆಟ್ರೋಲ್ ದರ 64.21 ರೂಪಾಯಿ ಹಾಗೂ ಡೀಸೆಲ್ ದರ 52.59 ರೂಪಾಯಿ. ಆಸಕ್ತಿದಾಯಕ ವಿಚಾರವೆಂದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಕಳೆದ ಕೆಲ ತಿಂಗಳಿಂದ ಸ್ಥಿರವಾಗಿಯೇ ಇದೆ. ಆದರೆ ಭಾರತದಲ್ಲಿ ಹಾಗಿಲ್ಲ.

ಆಗಸ್ಟ್ 31ರಂದು ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯಲ್ಲಿ ಭಾರೀ ಹೆಚ್ಚಳವಾಗಿತ್ತು. ಪೆಟ್ರೋಲ್ ದರವನ್ನು ಲೀಟರ್‌ಗೆ 3.38 ರೂಪಾಯಿ ಹಾಗೂ ಡೀಸೆಲ್ ದರವನ್ನು 2.67 ರೂಪಾಯಿ ಹೆಚ್ಚಿಸಲಾಗಿತ್ತು. ರೂಪಾಯಿ ಹಾಗೂ ಡಾಲರ್ ದರದಲ್ಲಿ ಆಗಿರುವ ಬದಲಾವಣೆಯಿಂದಾಗಿ ಈ ದರ ಪರಿಷ್ಕರಿಸಲಾಗಿದೆ ಎಂದು ತೈಲ ಕಂಪೆನಿಗಳು ಹೇಳುತ್ತವೆ. ಆದರೆ ಇದರ ಆಳಕ್ಕೆ ಇಳಿದು ನೋಡಿದರೆ ಆರ್ಥಿಕತೆ ಹಾಗೂ ಜನರ ಭಾವನೆಗಳ ಮೇಲೆ ಭಾರೀ ಪರಿಣಾಮ ಬೀರುವ ಈ ಬೆಲೆ ಏರಿಕೆಯನ್ನು ತಡೆಯಲು ಸರ್ಕಾರಕ್ಕೆ ಎಲ್ಲ ಅವಕಾಶವೂ ಇತ್ತು.

ಕಳೆದ ಎರಡು ವರ್ಷಗಳಿಂದ ಅಮೆರಿಕ ಭಾರೀ ಪ್ರಮಾಣದ ತೈಲ ಉತ್ಪಾದಿಸಿದೆ. ಯೂರೊ ವಲಯ ಹಾಗೂ ಪ್ರಮುಖ ಮಾರುಕಟ್ಟೆಗಳಾದ ಬ್ರೆಜಿಲ್ ಹಾಗೂ ಚೀನಾದಲ್ಲಿ ಆರ್ಥಿಕತೆಯ ನಿಧಾನ ಪ್ರಗತಿ ಇದ್ದರೂ ಅಮೆರಿಕದ ಉತ್ಪಾದನೆ ಅಧಿಕವಾಗಿತ್ತು, ದಶಕಗಳ ಬಳಿಕ ಇರಾನ್ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಗೆ ಲಗ್ಗೆ ಇಟ್ಟದ್ದು ಕೂಡಾ ಕಚ್ಚಾ ತೈಲ ಬೆಲೆ ಕುಸಿತಕ್ಕೆ ಕಾರಣವಾಗಿತ್ತು. ಭಾರತದ ಪರಿಸ್ಥಿತಿಗೆ ಅನುಗುಣವಾಗಿ 2014ರ ನವೆಂಬರ್‌ನಲ್ಲಿ ಪ್ರತಿ ಬ್ಯಾರಲ್‌ಗೆ 106 ಡಾಲರ್ ಇದ್ದ ಬೆಲೆ 2016ರ ಜನವರಿ ವೇಳೆಗೆ 26 ಡಾಲರ್‌ಗೆ ಇಳಿದಿದ್ದು, ಶೇಕಡಾ 75ರಷ್ಟು ಇಳಿಕೆ ಕಂಡಿದೆ.

ತೈಲದ ಮೇಲೆ ಅತ್ಯಧಿಕ ಅಬಕಾರಿ ಸುಂಕ ಹಾಗೂ ವ್ಯಾಟ್ ವಿಧಿಸುವ ಕಾರಣದಿಂದ ಸರಕಾರ ದೊಡ್ಡ ಪ್ರಮಾಣದ ಆದಾಯ ಗಳಿಸುತ್ತಿದ್ದು, ಬೆಲೆಯನ್ನು ಸರಿಸುಮಾರು ಒಂದೇ ಮಟ್ಟದಲ್ಲಿ ಕಾಪಾಡಿಕೊಂಡು ಬಂದಿದೆ. ಈ ಕಾರಣದಿಂದ 2014ರ ನವೆಂಬರ್‌ನಲ್ಲಿ ಇದ್ದ ಬೆಲೆ ಈಗಲೂ ಇದೆ. ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 2014ರ ನವೆಂಬರ್‌ನಲ್ಲಿ ಇದ್ದ ಕಚ್ಚಾ ತೈಲದ ಬೆಲೆ ಬ್ಯಾರಲ್‌ಗೆ 106 ಡಾಲರ್ ಇದ್ದುದು ಈಗ 43 ಡಾಲರ್‌ಗೆ ಕುಸಿದಿದೆ.

ಕುತೂಹಲಕಾರಿ ಅಂಶವೆಂದರೆ ಉತ್ಪನ್ನದ ಬೆಲೆಗಿಂತಲೂ ಅಧಿಕ ಪ್ರಮಾಣದ ತೆರಿಗೆಯನ್ನು ಗ್ರಾಹಕರು ಸರಕಾರಕ್ಕೆ ಪಾವತಿಸುತ್ತಿದ್ದಾರೆ. ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಗ್ರಾಹಕರು ಕ್ರಮವಾಗಿ 57 ಶೇಕಡ ಹಾಗೂ 55 ಶೇಕಡಾ ತೆರಿಗೆ ಪಾವತಿಸುತ್ತಿದ್ದಾರೆ.

ಪರಿಸರ ಲಾಭದ ಕಾರಣಕ್ಕಾಗಿ ಅಧಿಕ ಬೆಲೆಯನ್ನು ಕಾಪಾಡಿಕೊಂಡು ಬರಲಾಗಿದೆ ಎಂದು ಕಳೆದ ಎರಡು ವರ್ಷಗಳಿಂದ ಸರಕಾರ ವಾದಿಸುತ್ತಲೇ ಬಂದಿದೆ. ಆದ್ದರಿಂದ ತೈಲ ಸರಕಾರದ ಪಾಲಿಗೆ ಕಾಮಧೇನುವಾಗಿದ್ದು, ಮೂಲಸೌಕರ್ಯ ಅಭಿವೃದ್ಧಿಗೆ ನಿಧಿಯನ್ನು ಒದಗಿಸುತ್ತಲೇ ಬಂದಿದೆ..

 ಭಾರತದ ಪರಿಸ್ಥಿತಿ ಸರಿಸುಮಾರು ಯೂರೋಪಿಯನ್ ದೇಶಗಳ ಪರಿಸ್ಥಿತಿಗೆ ಸಮಾನವಾಗಿದ್ದು, ತೈಲ ಆಮದು ವ್ಯಾಪಾರಿ ಶಿಲ್ಕನ್ನು ಋಣಾತ್ಮಕವಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಅರ್ಥಶಾಸ್ತ್ರಜ್ಞರ ವಾದದಂತೆ, ಅಧಿಕ ಬೆಲೆ ಉಳಿಸುವ ಕಾರಣದಿಂದ ಬಳಕೆ ಕಡಿಮೆಯಾಗಿ, ಆರ್ಥಿಕತೆಯ ಮೇಲೆ ಧನಾತ್ಮಕ ಪರಿಣಾಮ ಉಂಟಾಗುತ್ತದೆ. ಇದರ ಜತೆಗೆ ಬೆಲೆ ನಿಯಂತ್ರಣ ರದ್ದುಪಡಿಸುವ ಮೂಲಕ ಸಬ್ಸಿಡಿ ಕಡಿತಗೊಳಿಸಲಾಗಿದೆ ಎನ್ನುವುದು ಸರಕಾರದ ಸಮರ್ಥನೆ. ಆದರೆ ಇಷ್ಟು ಅಧಿಕ ಬೆಲೆಯಲ್ಲಿ ಸಬ್ಸಿಡಿ ಬಹುತೇಕ ಇಲ್ಲ ಎಂದೇ ಹೇಳಬಹುದು. ಸರಕಾರ ತೈಲ ಕಂಪೆನಿಗಳಿಗೆ ನೀಡುವ ವೆಚ್ಚ ಕೂಡಾ ಸಬ್ಸಿಡಿಯನ್ನು ಒಳಗೊಂಡಿಲ್ಲ.
ಒಟ್ಟಿನಲ್ಲಿ ವಿತ್ತೀಯ ಕೊರತೆಯನ್ನು ಕಡಿತಗೊಳಿಸುವ ಸಲುವಾಗಿ ಅಬಕಾರಿ ಸುಂಕವನ್ನು ನಿರಂತರವಾಗಿ ಹೆಚ್ಚಿಸುವುದು ಅಪಾಯಕಾರಿ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚಿದಂತೆಲ್ಲ ತೈಲ ಕಂಪೆನಿಗಳು ಈ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸುತ್ತವೆ. ಇದಕ್ಕೆ ಬದಲಾಗಿ ಸರಕಾರ ತೆರಿಗೆ ಪ್ರಮಾಣವನ್ನು ಕಡಿಮೆ ಮಾಡುವ ಮೂಲಕ ಅದಕ್ಕೆ ಪರಿಹಾರ ಒದಗಿಸುವುದಿಲ್ಲ. ಇದರಿಂದಾಗಿ ಗ್ರಾಹಕರಿಗೆ ಮತ್ತಷ್ಟು ಹೊರೆ ಬೀಳುತ್ತದೆ.

 ಅಬಕಾರಿ ಸುಂಕ ಇಳಿಕೆಯಾಗುವ ಪರಿಸ್ಥಿತಿಯೇ ಇಲ್ಲದಾದಾಗ, ಗ್ರಾಹಕರಲ್ಲಿ ವಿಲೇವಾರಿ ಮಾಡುವ ಆದಾಯ ಕೂಡಾ ಹೆಚ್ಚುತ್ತದೆ. ಇದು ಗ್ರಾಹಕರ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದರಿಂದ ಎಲ್ಲ ವಲಯಗಳಲ್ಲಿ ಆದಾಯ ಹೆಚ್ಚುತ್ತದೆ. ಇದರಿಂದ ಹಣದುಬ್ಬರ ದರ ಕೂಡಾ ಕಡಿತಗೊಂಡು ಭಾರತೀಯ ರಿಸರ್ವ್ ಬ್ಯಾಂಕ್ ಬೆಂಚ್‌ಮಾರ್ಕ್ ದರವನ್ನು ಮತ್ತು ಸಾಲದ ಮೇಲಿನ ವೆಚ್ಚವನ್ನು ಇಳಿಸುತ್ತದೆ. ಭವಿಷ್ಯದ ದೃಷ್ಟಿಕೋನವನ್ನು ನೋಡುವುದಾದರೆ, ಈ ಹೆಚ್ಚಳ ಪ್ರವೃತ್ತಿಯನ್ನು 2017ರ ಆರಂಭದವರೆಗೂ ಅಂದರೆ ಮುಂದಿನ ಚುನಾವಣಾ ಸಂದರ್ಭದ ವರೆಗೂ ಮುಂದುವರಿಸಲಿದೆ. ಈ ಹಂತದಲ್ಲಿ ಮತದಾರರನ್ನು ಓಲೈಸುವ ಸಲುವಾಗಿ ಸ್ವಲ್ಪಮಟ್ಟಿಗೆ ಇಳಿಸುವ ಸಾಧ್ಯತೆಯನ್ನು ಮಾರುಕಟ್ಟೆ ತಜ್ಞರು ಅಂದಾಜಿಸುತ್ತಾರೆ. ಅದುವರೆಗೆ ಗ್ರಾಹಕರಿಗೆ ನಿರಾಳವಾಗುವ ಅವಕಾಶ ಇಲ್ಲ.

ಕೃಪೆ: ದ ಇಂಡಿಯನ್ ಎಕ್ಸ್‌ಪ್ರೆಸ್

share
ವಾರ್ತಾಭಾರತಿ
ವಾರ್ತಾಭಾರತಿ
Next Story
X