ನಾರಾಯಣ ಗುರು, ಒಂದು ಜಾತಿಯ ವಕ್ತಾರನಲ್ಲ: ಸ್ವಾಮಿ ಋತಂಬರಾನಂದ

ವರ್ಕಲ, ಸೆ. 17: ಶ್ರೀನಾರಾಯಣ ಗುರು ಯಾವುದಾದರೊಂದು ಜಾತಿಯ ವಕ್ತಾರರಲ್ಲ, ಮತ್ತು ಆರೀತಿಯಲ್ಲಿ ಅವರ ಬಗ್ಗೆ ಚಿಂತಿಸುವುದು ಸರಿಯಲ್ಲ, ಗುರು ಪ್ರತಿಪಾದಿಸಿರುವುದು ಏಕಲೋಕ ಸಿದ್ಧಾಂತವಾಗಿತ್ತು ಎಂದು ಶ್ರೀನಾರಾಯಣ ಧರ್ಮಸಂಘಂ ಟ್ರಸ್ಟ್ ಪ್ರಧಾನಕಾರ್ಯದರ್ಶಿ ಸ್ವಾಮಿ ಋತಂಬರಾನಂದ ಹೇಳಿದ್ದಾರೆಂದು ವರದಿಯಾಗಿದೆ. ಅವರು162ನೆ ಶ್ರೀನಾರಾಯಣ ಗುರು ಜಯಂತಿ ದಿನಾಚರಣೆಯ ನಡುವೆ ಶಿವಗಿರಿಮಠದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಹೀಗೆ ಹೇಳಿದ್ದಾರೆ.
ಇತ್ತೀಚೆಗೆ ಬಿಜೆಪಿ ಶ್ರೀನಾರಾಯಣ ಗುರು ಹಿಂದೂ ಸನ್ಯಾಸಿ ಎಂದು ಹೇಳಿಕೊಂಡಿರುವುದನ್ನು ಇಲ್ಲಿ ಸ್ಮರಿಸಿ ಕೊಳ್ಳಬಹುದು
Next Story





