Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಕಾವೇರಿ ನೀರಿಗಾಗಿ ಮುಗ್ಧ ರಕ್ತದ ಹನಿಗಳು...

ಕಾವೇರಿ ನೀರಿಗಾಗಿ ಮುಗ್ಧ ರಕ್ತದ ಹನಿಗಳು ತೊಟ್ಟಿಕ್ಕುತ್ತಿವೆ

ಕಳಕೇಶ್ ಗೊರವರಕಳಕೇಶ್ ಗೊರವರ17 Sept 2016 8:29 PM IST
share
ಕಾವೇರಿ ನೀರಿಗಾಗಿ ಮುಗ್ಧ ರಕ್ತದ ಹನಿಗಳು ತೊಟ್ಟಿಕ್ಕುತ್ತಿವೆ

ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೂತನ ಸಚಿವ ಸಂಪುಟದಿಂದ ನಮ್ಮ ರೆಬಲ್‌ಸ್ಟಾರ ಅಂಬರೀಷ್ ಅವರನ್ನು ಕೈಬಿಟ್ಟಾಗ, ಅದೇನೋ ಕಿತ್ತು ಗುಡ್ಡೆ ಹಾಕಿದವರ ಹಾಗೆ ಅವತ್ತು ಮುಖ ಊದಿಸಿಕೊಂಡಿದ್ದ ಅಂಬಿ, ಕಂಬಿ ಹಿಂದೆ ನಿಂತ ಖಳನಾಯಕನ ಒಂದೆರಡು ಉಡಾಫೆಯ ಸಿನೆಮಾ ಡೈಲಾಗು ಹೊಡೆದು, ಬೆಂಬಲಿಗರೆದುರಿಗೆ ಸೈ ಎನಿಸಿಕೊಂಡಿದ್ದರು. ಚದುರಂಗದ ನಾಯಕ, ರಾಜಕೀಯರಂಗದಲ್ಲಿ ಖಳನಾಯಕನ ಪಾತ್ರ ವಹಿಸಿಕೊಂಡಿದ್ದರು. ಸಿದ್ದರಾಮಯ್ಯನವರು ಇದ್ಯಾವುದಕ್ಕೂ ಸೊಪ್ಪು ಹಾಕದಿದ್ದಾಗ ಮುಖಭಂಗ ಮಾಡಿಕೊಂಡು ತಣ್ಣಗಾದರು.


         ಈಗ ಕಾವೇರಿ ನೀರಿನ ಹಂಚಿಕೆಯ ವಿವಾದ ಭುಗಿಲೆದಿದ್ದು, ಮಂಡ್ಯ, ಮೈಸೂರು, ಕೆ.ಆರ್.ನಗರ ಮತ್ತು ಇತರ ಜಿಲ್ಲೆಯ ಜನತೆ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ನಮ್ಮ ಪಾಲಿನ ಜೀವನದಿ, ಕಾವೇರಿಯ ನೀರು ಪಕ್ಕದ ತಮಿಳುನಾಡಿಗೆ ಅವೈಜ್ಞಾನಿಕವಾಗಿ ಹರಿದು ನೀರು ಪೋಲಾಗುತ್ತಿರುವುದು ಸ್ಥಳೀರನ್ನು ಹೆಚ್ಚು ಕಂಗೆಡಿಸಿದೆ. ತಮಿಳುನಾಡಿಗೆ ದಿನಕ್ಕೆ 15 ಟಿಎಂಸಿ ನೀರು ಬಿಟ್ಟರೆ, ಕರ್ನಾಟಕ ರಾಜ್ಯ 30.47 ಟಿಎಂಸಿ ಕುಡಿಯುವ ನೀರಿನ ಕೊರತೆ ಅನುಭವಿಸಬೇಕಾಗುತ್ತದೆ. ಭಾವುಕತೆಯ ಪಸೆಯಿಲ್ಲದ ಪೊಲೀಸರ ಲಾಟಿ,ಗುಂಡಿನೇಟಿಗೆ ಮುಗ್ಧ ರಕ್ತದ ಹನಿಗಳು ತೊಟ್ಟಿಕ್ಕುತ್ತಿವೆ. ನೀರಿಲ್ಲದ ಬೇಸಿಗೆಯ ದಿನಗಳ ನೆನೆದು ವರ್ತಮಾನ ಡೋಲಾಯಮಾನವಾಗಿದೆ.


        ಆದರೆ ಇದೇ ಚಳುವಳಿಗಾರರ ಮತ ಪಡೆದು ಕೇಂದ್ರ ಮಂತ್ರಿಯಾಗಿ ನಿನ್ನೆ-ಮೊನ್ನೆಯವರೆಗೂ ರಾಜ್ಯದ ವಸತಿ ಸಚಿವರಾಗಿ ವಿಜೃಂಭಿಸಿದ ಮಾಜಿ ಮಂತ್ರಿ ಹಾಲಿ ಶಾಸಕ ಅಂಬರೀಷ್ ಅವರು ‘ಗೊಂಬೆಯಾಡ್ಸವನು ಮ್ಯಾಲೆ ಕುಂತವನೆ, ನಂಗೆ ನಿನಗೆ ಯಾಕೆ ಟೆನ್ಸನ್ನು’ ಎಂದು ಈಗ ದೂರದ ಅಮೆರಿಕಾಗೆ ಹಾರಿ, ಅಲ್ಲಿಯ ‘ಅಕ್ಕ’ ಸಮ್ಮೇಳನದಲ್ಲಿ ಮದಿರೆಯ ಬಟ್ಟಲು ಹಿಡಿದು, ಮಂಡ್ಯ, ಕನ್ನಡ , ಕಾವೇರಿಗೂ ನನಗೂ ಸಂಬಂಧವೇ ಇಲ್ಲವೆನ್ನುವಂತೆ ಮಾನನಿಯರ ಜೊತೆ ಬೇಜವಾಬ್ದಾರಿಯ ಹೆಜ್ಜೆ ಹಾಕುತ್ತಿದ್ದಾರೆ. ಅವರಿಗೆ ಸಂಕಷ್ಟದಲ್ಲಿರುವ ತನ್ನ ಕ್ಷೇತ್ರದ ಜನತೆಗಿಂತ ಕ್ಯಾಬ್ರೆ ಡ್ಯಾನ್ಸ್ ಹೆಚ್ಚು ಆಪ್ತವೆನಿಸಿರಬೇಕು.


            ಯಾರೋ ಬರೆದ ಸ್ಕ್ರಿಪ್ಟ್‌ನ್ನು ಆವಾಹಿಸಿಕೊಂಡು ಹೇಳಿ ಅಭ್ಯಾಸವಿದ್ದ ಅಂಬಿ, ಸಿನೆಮಾ ತಂದು ಕೊಟ್ಟ ಜನಪ್ರಿಯತೆ ಎನ್ನುವ ಬಂಡವಾಳ ಹೂಡಿ, ರಾಜಕೀಯದ ಉಸಾಬರಿಗೆ ಶುರುಹಚ್ಚಿಕೊಂಡರು. ನಂಬಿದ ಜನ ಕೈಬಿಡಲಿಲ್ಲ. ರಾಜ್ಯ ವಿಧಾನ ಸಭೆಯಿಂದ ಹಿಡಿದು ಸಂಸತ್ತಿನವರೆಗೂ ಇದೇ ಚಳುವಳಿಗಾರರಿಂದ ಆಯ್ಕೆಯಾಗಿಹೋದ ಅಂಬರೀಷ್ ತನ್ನ ನಾಡಿಗಾಗಿ, ತಾನು ಪ್ರತಿನಿಧಿಸುವ ಕ್ಷೇತ್ರಕ್ಕಾಗಿ ಜವಾಬ್ದಾರಿಯುತವಾಗಿ ವರ್ತಿಸಿದ ಒಂದೇ ಒಂದು ನಿದರ್ಶನವಿಲ್ಲ. ನಾವು ಎಂತಹ ಬೇಜವಾಬ್ದಾರಿ ಹೈದಂಗೆ ಮತ ನೀಡಿದೆವಲ್ಲ ಎಂದು ಈಗ ಜನರನ್ನು ಕೀಳಿರಿಮೆ ಬೇಟೆಯಾಡುತ್ತಿದೆ.


       ಕಾವೇರಿ,ಮಹಾದಾಯಿ ವಿವಾದ ಭುಗುಲೆದ್ದು, ರಾಜ್ಯದ ಜನರು ಇಷ್ಟು ದಿನ ಹಿಡಿದಿಟ್ಟ ತಾಳ್ಮೆ ಈಗ ಸ್ಪೋಟಿಸಿದೆ. ಇದನ್ನೆ ನೆಪವಾಗಿಟ್ಟುಕೊಂಡು ಹಲವರು ರಾಜಕೀಯ ಲಾಭ ಪಡೆಯಲು ಹಪಹಪಿಸುತ್ತಿದ್ದಾರೆ. ಎತ್ತಿನ ಹೊಳೆ ಯೋಜನೆಯ ವಿರೋಧದ ಸಂಘಟನೆಗಳು ಹೋಮ-ಹವನ ಮಾಡಿಕೊಂಡಿವೆ. ಏನೇ ಆಗಲಿ, ಕೇಂದ್ರ ಸಚಿವರು, ಸಂಸದರು ಮತ್ತು ವಿರೋಧ ಪಕ್ಷದವರು ರಾಜಕೀಯ ಹಿತಾಶಕ್ತಿಯ ಹಿನ್ನಲೆಯಲ್ಲಿ ಆಲೋಚಿಸದೆ, ಮಾನವಿಯ ನೆಲೆಯಲ್ಲಿ ಆಲೋಚಿಸಬೇಕು. ಈ ಎಲ್ಲ ವಿವಾದಗಳು ಒಂದು ತಾರ್ಕಿಕ ಅಂತ್ಯೆ ಪಡೆದು, ಅದೆಂದು ದುಡಿಯುವ ಜನ ನೆಮ್ಮದಿಯ ನಿಟ್ಟಿಸಿರು ಬಿಡುವರೋ? ಕಾದು ನೋಡಬೇಕಿದೆ.
                                                  
     
         
   

share
ಕಳಕೇಶ್ ಗೊರವರ
ಕಳಕೇಶ್ ಗೊರವರ
Next Story
X