Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಕೇರಳ: ಒಂದು ಕಾಲದಲ್ಲಿ ಈ ಮಹಿಳೆಗೆ...

ಕೇರಳ: ಒಂದು ಕಾಲದಲ್ಲಿ ಈ ಮಹಿಳೆಗೆ ಬೀದಿನಾಯಿಗಳೇ ಹೆದರುತ್ತಿದ್ದವು !

ವಾರ್ತಾಭಾರತಿವಾರ್ತಾಭಾರತಿ18 Sept 2016 1:33 PM IST
share
ಕೇರಳ: ಒಂದು ಕಾಲದಲ್ಲಿ ಈ ಮಹಿಳೆಗೆ ಬೀದಿನಾಯಿಗಳೇ ಹೆದರುತ್ತಿದ್ದವು !

ತಿರುವನಂತಪುರಂ,ಸೆ. 18: ಬೀದಿನಾಯಿಗಳ ಹೆದರಿಕೆಯಲ್ಲಿ ಕೇರಳದ ಜನರು ಇಂದು ದಿಕ್ಕೆಟ್ಟು ನಿಂತಿರುವಾಗ ಪಾಲಕ್ಕಾಡ್‌ನ ಶಕುಂತಳಾರ ನೆನಪು ಬರುವುದು ಅವರು ಹಿಂದೊಮ್ಮೆ ಬೀದಿನಾಯಿಗಳನ್ನು ಅತಿಸಾಹಸವಾಗಿ ಹಿಡಿಯುತ್ತಿದ್ದರು ಎಂಬ ಕಾರಣ ಪಟ್ಟಾಂಬಿಯ ಬಳಿ ಓಂಙಲ್ಲೂರಿನ ನಂಬಾಡತ್ ಲಕ್ಷಂವೀಟ್‌ನಲ್ಲಿ ವಾಸಿಸುತ್ತಿರುವ ಶಕುಂತಳಾ ಒಮ್ಮೆ ಬೀದಿನಾಯಿ ಹಿಡಿಯುವುದನ್ನೇ ತಮ್ಮ ಕಸುಬು ಮಾಡಿಕೊಂಡಿದ್ದವರು. ಈಗ 45ವರ್ಷ ವಯಸ್ಸಾಗಿರುವ ಈ ಮಹಿಳೆ ಸದ್ಯ ಉದ್ಯೋಗಖಾತರಿ ಯೋಜನೆಯಡಿ ಕೆಲಸ ಮಾಡಿ ಬದುಕಿನ ರಥದೂಡುತ್ತಿದ್ದಾರೆ ಎಂದುವರದಿ ತಿಳಿಸಿದೆ.

ಕೇರಳದಲ್ಲಿ ಅಂಗೀಕೃತ ನಾಯಿಹಿಡಿಯುವ ಕೆಲಸಮಾಡುತ್ತಿದ್ದ ಆರ್ಮುಗಂಮತ್ತು ತಂಗಂರ ಏಕೈಕ ಪುತ್ರಿ ಇವರು. ತಂದೆ, ತಾಯಿ, ಮಗಳು ರಾಜ್ಯದುದ್ದಗಲಕ್ಕೂ ನಗರ ಸಭೆ ಮತ್ತು ಗ್ರಾಮ ಪಂಚಾಯತ್‌ಗಳಿಗಾಗಿ ಬೀದಿ ನಾಯಿಗಳನ್ನು ಹಿಡಿದು ಕೊಟ್ಟಿದ್ದಾರೆ.

1998-99ರಲ್ಲಿ ತೃತ್ತಲ ಬ್ಲಾಕ್ ಪಂಚಾಯತ್ ಹುಚ್ಚುನಾಯಿಕಡಿತ ನಿರ್ಮೂಲನಾ ಯಜ್ಞ ನಡೆಸಿದಾಗ ಅರ್ಮುಗಂ ಮತ್ತು ಪತ್ನಿ ತಂಗಂ, ಮಗಳು ಶಕುಂತಳಾ ಇದ್ದ ಎಂಟು ಮಂದಿಯ ತಂಡ 5000 ನಾಯಿಗಳನ್ನು ಹಿಡಿದಿದ್ದರು. ಅಂದು ವೆಟರ್ನರಿ ಸರ್ಜನ್ ಆಗಿದ್ದ ಡಾ.ರಾಜನ್ ಚುಂಗತ್ತಿಯೋಜನೆಯ ನೇತೃತ್ವವನ್ನು ವಹಿಸಿದ್ದರು. ಮಾಲಕರಿದ್ದ ನಾಯಿಗಳನ್ನೂ ಬಂಜೆಗೊಳಿಸಿ ಕೊಟ್ಟಿದ್ದರು.

 ಈಕಾಲದಲ್ಲಾದರೂ ಶಂಕುತಳಾರಿಗೆ ಸರಕಾರ ನಾಯಿ ಹಿಡಿಯುವ ಅಂಗೀಕೃತ ಸರಕಾರಿ ಲಾಸ್ಟ್ ಗ್ರೇಡ್ ಉದ್ಯೋಗ ನೀಡಬಹುದೆಂಬ ನಿರೀಕ್ಷೆ ಇತ್ತು. ಆದರೆ ಅದು ಆಗಲಿಲ್ಲ. ತೃತ್ತಲ ಪಂಚಾಯತ್‌ನ ಹುಚ್ಚು ನಾಯಿ ನಿರ್ಮೂಲನ ಯಜ್ಞದ ಕುರಿತು ಡಾ. ರಾಜನ್ ಚುಂಗತ್ ಒಂದು ಲೇಖನವನ್ನೂ ಬರೆದಿದ್ದರು.

ಅದು ಪ್ರಕಟವಾದಾಗ ಅದರ ಕುರಿತು ಅರಿತ ಸಚಿವೆ ಮೇನಕಾ ಗಾಂಧಿ ಅರ್ಮುಗಂಗೆ ಪತ್ರಬರೆದು ನಾಯಿಗಳನ್ನು ಕೊಲ್ಲಬಾರದು ಎಂದು ತಿಳಿಸಿದ್ದರು. ನೀವು ನಾಯಿಹಿಡಿಯುವ ಕೆಲಸದಿಂದ ಹಿಂದೆ ಸರಿಯಬೇಕು. ಅಲೆದಾಡುವ ನಾಯಿಗಳಿಗೆ ಪ್ರಾಯೋಜಕರಣಳನ್ನು ಹುಡುಕಿಕೊಟ್ಟು ಅದನ್ನು ಸಾಕಬೇಕೆಂದು ಮೇನಕಾ ಪತ್ರದಲ್ಲಿ ವಿವರಿಸಿದ್ದರು. ಇದರೊಂದಿಗೆ ಅರ್ಮುಗಂ ನಾಯಿಹಿಡಿಯುವ ಕೆಲಸ ಮಾಡಲು ಹೆದರಿದರು. ಒಂಬತ್ತು ವರ್ಷಗಳ ಹಿಂದೆ ಅರ್ಮುಗಂ ನಿಧನರಾದರು.

ಶಕುಂತಳಾ ಜೊತೆ ಅಮ್ಮ ಅರ್ಮುಗಂ ಇದ್ದಾರೆ. ವಿಧವಾ ವೇತನ ಜೀವನಕ್ಕೆ ಒಂದೇ ಆಧಾರವಾಗಿದೆ. ಎಂತಹ ಘಾಟಿ ನಾಯಿಯನ್ನು ಹಿಡಿಯುವ ಸಾಮರ್ಥ್ಯಇರುವ ಶಕುಂತಳಾ ಈಗಲು ಸರಕಾರಿ ಕೆಲಸದ ಕನಸು ಕಾಣುತ್ತಿದ್ದಾರೆ.ಕೆಲಸ ಸಿಕ್ಕಿದರೆ ನಾಯಿ ಹಿಡಿಯಲು ಸಿದ್ಧ ಎಂದು ಶಕುಂತಳಾ ಹೇಳುತ್ತಾರೆ. ಪತಿ ಮತ್ತು ಮೂವರು ಮಕ್ಕಳಜೊತೆ ಓಂಙಲ್ಲೂರಿನ ಲಕ್ಷಂವೀಟ್‌ನಲ್ಲಿ ಅವರು ವಾಸಿಸುತ್ತಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X