ಉಪ್ಪಿನಂಗಡಿ ರೇಂಜ್ ಮದ್ರಸ ಮೆನೇಜ್ಮೆಂಟ್ನ ಮಹಾಸಭೆ

ಉಪ್ಪಿನಂಗಡಿ, ಸೆ.20: ಉಪ್ಪಿನಂಗಡಿ ರೇಂಜ್ ಮದ್ರಸ ಮೆನೇಜ್ಮೆಂಟ್ ಅಧ್ಯಕ್ಷರಾಗಿ ಅಬ್ದುರ್ರಹ್ಮಾನ್ ಹಾಜಿ ಕೊಳ್ಳೇಜಾಲ್ 12ನೆ ಬಾರಿಗೆ ಪುನರಾಯ್ಕೆಯಾಗಿದ್ದಾರೆ. ಉಳಿದಂತೆ ಪ್ರಧಾನ ಕಾರ್ಯದರ್ಶಿಯಾಗಿ ಎಚ್. ಯೂಸುಫ್ ಹಾಜಿ, ಖಜಾಂಚಿಯಾಗಿ ಹಸೈನಾರ್ ಹಾಜಿ ಬಂಡಾಡಿ ಆಯ್ಕೆಯಾಗಿದ್ದಾರೆ.
ಗಂಡಿಬಾಗಿಲು ಮಸೀದಿ ಖತೀಬ್ ಅನಸ್ ತಂಙಳ್ ಅಧ್ಯಕ್ಷತೆಯಲ್ಲಿ ಉಪ್ಪಿನಂಗಡಿ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಹಾಜಿ ಮುಸ್ತಫಾ ಕೆಂಪಿ, ಮಸೀದಿ ಖತೀಬ್ ರಫೀಕ್ ಬಾಖವಿ, ಮದ್ರಸ ಮೆನೇಜ್ಮೆಂಟ್ ಜಿಲ್ಲಾ ಕಾರ್ಯದರ್ಶಿ ಮುಹಮ್ಮದ್ ರಫೀಕ್ ಕೊಡಾಜೆ ಉಪಸ್ಥಿತಿಯಲ್ಲಿ ನಡೆದ ಮಹಾಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಅಶ್ರಪ್ ಹಾಜಿ ಪೆದಮಲೆ ಮತ್ತು ಅಬೂಬಕ್ಕರ್ ಕೋಲ್ಪೆ, ಉಪಕಾರ್ಯದರ್ಶಿಗಳಾಗಿ ಹಮೀದ್ ಕರಾವಳಿ, ರಝಾಕ್ ಆತೂರು, ಸಂಟನಾ ಕಾರ್ಯದರ್ಶಿಯಾಗಿ ಲತೀಫ್ ಕೆ.ಎಚ್., ಪತ್ರಿಕಾ ಕಾರ್ಯದರ್ಶಿಯಾಗಿ ಸಿದ್ದಿಕ್ ನೀರಾಜೆ ಆಯ್ಕೆಯಾದರು.
ಮುಹಮ್ಮದ್ ಹಾಜಿ ಬೆದ್ರೋಡಿ, ಉಮ್ಮರ್ ಕೊಕ್ಕಡ, ಉಮ್ಮರ್ ಮಲ್ಲಿಗೆ ಮಜಲು, ಅಶ್ರಫ್ ಬೋಳದಬೈಲು, ಶುಕೂರ್ ಅರಸಿನಮಕ್ಕಿ, ಅಬ್ದುರ್ರಹ್ಮಾನ್ ಅಡೆಕ್ಕಲ್, ಹಮೀದ್ ಕುಂಡಾಜೆ, ಅಬ್ದುರ್ರಹ್ಮಾನ್ ಆತೂರು ಕುದ್ಲೂರು, ರಫೀಕ್ ಗಂಡಿಬಾಗಿಲು, ಅಬ್ದುರ್ರಹ್ಮಾನ್ ಮಾಪಲ, ಅಬ್ದುರ್ರಹ್ಮಾನ್ ದಾರಿಮಿ, ಮುಸ್ತಪಾ ಹಾಜಿ ಉಪ್ಪಿನಂಗಡಿ, ಮುಹಮ್ಮದ್ ಹಾಜಿ ಕಡವಿನಬಾಗಿಲು, ಸಿದ್ದಿಕ್ ಕೆಂಪಿ, ಮುಹಮ್ಮದ್ ಕೂಟೇಲು ಹಾಗೂ ಉಪ್ಪಿನಂಗಡಿ ರೇಂಜ್ ಮದ್ರಸ ಮೆನೇಜ್ಮೆಂಟ್ಗೆ ಸೇರಿದ ಎಲ್ಲಾ ಮಸೀದಿ, ಮದ್ರಸಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳನ್ನು ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡಲಾಯಿತು.







