Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಈ ಲಕ್ಷಣಗಳು ನಿಮ್ಮಲ್ಲಿ ಕಂಡು ಬಂದರೆ...

ಈ ಲಕ್ಷಣಗಳು ನಿಮ್ಮಲ್ಲಿ ಕಂಡು ಬಂದರೆ ನಿರ್ಲಕ್ಷಿಸಬೇಡಿ!

ತಕ್ಷಣ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ

ವಾರ್ತಾಭಾರತಿವಾರ್ತಾಭಾರತಿ22 Sept 2016 2:25 PM IST
share
ಈ ಲಕ್ಷಣಗಳು ನಿಮ್ಮಲ್ಲಿ ಕಂಡು ಬಂದರೆ ನಿರ್ಲಕ್ಷಿಸಬೇಡಿ!

ಜನಪ್ರಿಯ ನಂಬಿಕೆಗೆ ವಿರುದ್ಧವಾಗಿ ಉದ್ಯೋಗ ತೃಪ್ತಿ ಮತ್ತು ಒತ್ತಡ ಯಾವಾಗಲೂ ಬೇರೆ ಬೇರೆಯಾಗಿಯೇ ಇರಬೇಕಾಗಿಲ್ಲ. ಕೆಲವೊಮ್ಮೆ ನೀವು ಕೆಲಸವನ್ನು ಪ್ರೀತಿಸಿದರೂ ಒತ್ತಡದ ಅನುಭವವಾಗಬಹುದು. ಒತ್ತಡದ ಚಿಹ್ನೆಗಳು ಆರೋಗ್ಯಕ್ಕೆ ಹಾನಿಕರ. ಈ ಕೆಳಗಿನ ಚಿಹ್ನೆಗಳು ನಿಮಗೆ ಕಂಡು ಬಂದಲ್ಲಿ ನೀವು ಟೆನ್ಷನ್ ಕಡಿಮೆ ಮಾಡುವತ್ತ ಗಮನಹರಿಸಬೇಕಿದೆ.

ನಿದ್ರಾ ಸಮಸ್ಯೆಗಳು

Stress.org ಪ್ರಕಾರ ನಿದ್ದೆ ಬಾರದೆ ಇರುವುದು ಮತ್ತು ದುಸ್ವಪ್ನಗಳು ಒತ್ತಡದ ಪರಿಣಾಮವಾಗಿರುತ್ತವೆ. ಖಾಸಗಿ ಜೀವನದಲ್ಲಿ ಎಲ್ಲ ಚೆನ್ನಾಗಿದೆ ಎಂದರೆ ಉತ್ತಮ ಆರೋಗ್ಯವೂ ಇರುತ್ತದೆ. ಹೀಗಾಗಿ ನಿದ್ರೆ ಬಾರದೆ ಇರಲು ಕೆಲಸದ ಒತ್ತಡವೇ ಕಾರಣವಾಗಿರುತ್ತದೆ. ಈ ಸಮಸ್ಯೆಯನ್ನು ಬಗೆ ಹರಿಸಲು ದಾರಿ ಹುಡುಕಿ.

ಅಂಟಾಸಿಡ್ ಟ್ಯಾಬ್ಲೆಟ್‌ಗಳು

 ನಿಮಗೆ ಭಡ್ತಿ ಸಿಕ್ಕಿದೆ, ಉತ್ತಮ ಹಣ ಬರುತ್ತಿದೆ. ಆದರೆ ಪ್ರತೀ ಬಾರಿ ಮನಸ್ಸಿಗೆ ಬೇಸರವಾದಾಗ ಅಂಟಾಸಿಡ್ ಟ್ಯಾಬ್ಲೆಟ್ ಗಳನ್ನು ಮಿಠಾಯಿಯಂತೆ ಸೇವಿಸುತ್ತೀರಿ. ಉದ್ಯೋಗದ ಒತ್ತಡ ಮತ್ತು ಆಸಿಡ್ ಪರಿಣಾಮ ಚಿಹ್ನೆಗಳಾದ ಹೃದಯರೋಗ ಮತ್ತು ವಾಂತಿ ನಡುವೆ ಸಂಬಂಧವಿದೆ ಎಂದು ಸಂಶೋಧಕರು ಹೇಳಿದ್ದಾರೆ. ಹೊಟ್ಟೆಯೊಳಗೆ ಎಲ್ಲವೂ ಸರಿಯಾಗಿಲ್ಲದಿದ್ದರೆ ಉದ್ಯೋಗದ ಒತ್ತಡ ದೇಹದ ಮೇಲೆ ಪರಿಣಾಮ ಬೀರುವ ಚಿಹ್ನೆಯಾಗಲಿದೆ.

ಸತತ ತಲೆನೋವು

healthline.com ಸತತವಾಗಿ ತಲೆನೋವು ಬರಲು ಸಾಕಷ್ಟು ಕಾರಣಗಳಿವೆ. ಆದರೆ ದೊಡ್ಡ ಸಮಸ್ಯೆ ಎಂದರೆ ಒತ್ತಡ. ನಲ್ಲಿ ಕಿಂಬರ್ಲಿ ಹಾಲಂಡ್ ಬರೆದ ಪ್ರಕಾರ ನಿರಂತರ ಮಾನಸಿಕ ಒತ್ತಡ ಮೈಗ್ರೇನ್‌ಗೆ ಕಾರಣವಾಗಲಿದೆ. ಒತ್ತಡಕ್ಕೆ ಮುಖ್ಯ ಕಾರಣವಾಗುವುದು ಮನೆ ಮತ್ತು ಉದ್ಯೋಗದ ಪರಿಸರ. ನಿಯಂತ್ರಣ ಸಾಧಿಸದಿದ್ದರೆ ಇದು ಮನಸ್ಸು ಮತ್ತು ದೇಹದ ಮೇಲೆ ಹಾನಿಯುಂಟು ಮಾಡಬಹುದು.

ಹಲ್ಲು ಕಡಿಯುವುದು

ಕಂಪ್ಯೂಟರ್ ಸ್ಕ್ರೀನ್ ನೋಡುತ್ತಾ ಹಲ್ಲು ಕಡಿಯುತ್ತೀರಾ? ಸಭೆಗಳ ಸಂದರ್ಭ ಹಲ್ಲು ಕಡಿಯುತ್ತೀರಾ? ಮಾಯೋ ಕ್ಲಿನಿಕ್ ಅಧ್ಯಯನದ ಪ್ರಕಾರ ಒತ್ತಡ ಮತ್ತು ಖಿನ್ನತೆ ಹಲ್ಲು ಕಡಿತಕ್ಕೆ ಕಾರಣವಾಗಲಿದೆ. ಇದರಿಂದ ದವಡೆಗೆ ಹಾನಿಯಾಗಿ ಹಲ್ಲುಗಳಿಗೂ ಹಾನಿಯಾಗಲಿದೆ.

ಮರೆವು

ಹೈಡಿ ಮಿಷೆಲ್ ಪ್ರಕಾರ ಒತ್ತಡವಿರುವ ವ್ಯಕ್ತಿ ಕೈಲಿರುವ ಕೆಲಸದ ಕಡೆಗೆ ಗುರಿಯಿಡಲು ಸಾಧ್ಯವಾಗುವುದಿಲ್ಲ. ಸಂಬಂಧಿತ ವಿಷಯಗಳನ್ನು ಬೇಗನೇ ಮರೆಯುತ್ತಾನೆ. ಮರೆವು ಮತ್ತು ನೆನಪು ಸಂಬಂಧಿತ ರೋಗಗಳು ಅನಿಯಂತ್ರಿತ ಒತ್ತಡದಿಂದಲೇ ಬರುತ್ತದೆ.

ಪ್ಯಾನಿಕ್ ಅಟಾಕ್

ಕೆಲಸದ ಸಂದರ್ಭ ಪ್ಯಾನಿಕ್ ಅಟಾಕ್ ಆದರೆ ಒತ್ತಡವೇ ಕಾರಣ. ಇದು ಎಚ್ಚರಿಕೆಯೇ ಕೊಡದೆ ಆಕಸ್ಮಿಕವಾಗಿ ಬರಬಹುದು. ಸಾಮಾನ್ಯ ಚಿಹ್ನೆ ಎಂದರೆ ವೇಗದ ಹೃದಯಬಡಿತ, ಬೆವರು, ನಡುಕ, ವಾಂತಿ, ಚಳಿ ಮತ್ತು ಹೃದಯ ನೋವು.

ಆಕ್ರೋಶ ತೋರಿಸುವುದು

ಸಾಮಾನ್ಯವಾಗಿ ಸಂತೋಷ ಮತ್ತು ಶಾಂತವಾಗಿರುವ ವ್ಯಕ್ತಿ ಆಕಸ್ಮಿಕವಾಗಿ ಕೆಲಸ ಮತ್ತು ಮನೆಯಲ್ಲಿ ಸಿಟ್ಟು ಮಾಡಿಕೊಳ್ಳುತ್ತಾರೆ. ಅಸ್ಥಿರತೆ, ಸಿಟ್ಟು ಒತ್ತಡದ ಚಿಹ್ನೆಗಳು.

ಭಾನುವಾರ ರಾತ್ರಿಯ ನಡುಕ

ಭಾನುವಾರ ರಾತ್ರಿ ಬಂತೆಂದರೆ ವಾರಾಂತ್ಯ ಮುಗಿಯಿತೆಂದು ಮರುದಿನದ ಕೆಲಸ ನೆನಪಿಸಿ ಬೇಸರವಾಗುತ್ತದೆ. ಅಧ್ಯಯನವೊಂದರ ಪ್ರಕಾರ ಶೇ. 76ರಷ್ಟು ಅಮೆರಿಕದ ಉದ್ಯೋಗಿಗಳಲ್ಲಿ ಭಾನುವಾರ ರಾತ್ರಿಯ ನಡುಕವಿರುತ್ತದೆ. ಆದರೆ ಪ್ರತೀ ಭಾನುವಾರ ಹೀಗೇ ಖಿನ್ನತೆ, ಹತಾಶೆ ಮತ್ತು ಭಯದಿಂದ ಕಳೆಯುತ್ತಿದ್ದಲ್ಲಿ ಕೆಲಸದ ಪರಿಸರದ ಬಗ್ಗೆ ಮತ್ತೊಮ್ಮೆ ಯೋಚಿಸುವ ಅಗತ್ಯವಿದೆ.

ಕೃಪೆ: http://economictimes.indiatimes.com/

share
ವಾರ್ತಾಭಾರತಿ
ವಾರ್ತಾಭಾರತಿ
Next Story
X