ಕಾಂಗ್ರೆಸ್ ಮುಖಂಡನ ಹತ್ಯೆ: ಎಸ್ ಡಿಪಿಐ ಸಂತಾಪ
ಸುಳ್ಯ, ಸೆ.23: ದುಷ್ಕರ್ಮಿಗಳಿಂದ ಹತ್ಯೆಗೀಡಾದ ಸುಳ್ಯ ತಾಲೂಕಿನ ಕಾಂಗ್ರೆಸ್ ನ ಅಲ್ಪಸಂಖ್ಯಾತ ನಾಯಕ ಮತ್ತು ಸಕ್ರಿಯ ರಾಜಕಾರಣಿ ಇಸ್ಮಾಯೀಲ್ ನೇಲ್ಯಮಜಲು ಅವರ ನಿಧನಕ್ಕೆ ಎಸ್ ಡಿಪಿಐ ಸುಳ್ಯ ವಿಧಾನ ಸಭಾ ಸಮಿತಿಯು ಸಂತಾಪವನ್ನು ಸೂಚಿಸಿದೆ.
ಹಾಗೂ ದುಷ್ಕರ್ಮಿಗಳ ಈ ದುಷ್ಕೃರ್ತ್ಯವನ್ನು ತೀವ್ರವಾಗಿ ಖಂಡಿಸುತ್ತದೆ. ಅದೇ ರೀತಿ ಹತ್ಯೆಗೈದಂತಹ ದುಷ್ಕರ್ಮಿಗಳನ್ನು ಪೊಲೀಸ್ ಇಲಾಖೆ ತಕ್ಷಣ ಬಂಧಿಸಿ ಅವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಸ್.ಡಿ.ಪಿ.ಐ ಸುಳ್ಯ ವಿಧಾನ ಸಭಾ ಸಮಿತಿ ಪ್ರಕಟನೆಯಲ್ಲಿ ಒತ್ತಾಯಿಸಿದೆ.
Next Story





