Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ರವಿಚಂದ್ರನ್ ಜತೆ ನಟಿಸುವಾಗ ನರ್ವಸ್...

ರವಿಚಂದ್ರನ್ ಜತೆ ನಟಿಸುವಾಗ ನರ್ವಸ್ ಆಗಿದ್ದೆ!

ಮುಂಗಾರು ಮಳೆ -2 ಹುಡುಗಿ ನೇಹಾ ಮಾತು

ವಾರ್ತಾಭಾರತಿವಾರ್ತಾಭಾರತಿ24 Sept 2016 4:02 PM IST
share
ರವಿಚಂದ್ರನ್ ಜತೆ ನಟಿಸುವಾಗ ನರ್ವಸ್ ಆಗಿದ್ದೆ!

ಮಂಗಳೂರು, ಸೆ.24: ‘‘ಸ್ಯಾಂಡಲ್‌ವುಡ್‌ನ ಕ್ರೇಝಿ ಸ್ಟಾರ್ ರವಿಚಂದ್ರನ್ ಎದುರು ನಟಿಸಲು ನಿಜಕ್ಕೂ ನರ್ವಸ್ ಆಗಿತ್ತು. ಆದರೆ, ಅವರು ನನ್ನ ಜತೆ ಅತ್ಯಂತ ವಿನಯ ಹಾಗೂ ಆತ್ಮೀಯತೆಯಿಂದ ನನ್ನಲ್ಲಿ ಧೈರ್ಯ ತುಂಬುವ ಮೂಲಕ ಸ್ಫೂರ್ತಿ ನೀಡಿದರು. ಅವರ ಜತೆಗಿನ ನಟನೆ ಅದ್ಭುತ ಅನುಭವ’’.

ಹೀಗೆಂದು ರವಿಚಂದ್ರನ್ ಬಗ್ಗೆ ದಿಟ್ಟವಾದ ಮಾತುಗಳನ್ನಾಡುತ್ತಾರೆ ಮುಂಗಾರು ಮಳೆ- 2 ಚಿತ್ರದ ಬೆಡಗಿ ನೇಹಾ ಶೆಟ್ಟಿ. ಮಂಗಳೂರು ಮೂಲದ 19ರ ಹರೆಯದ ನೇಹಾ ಶೆಟ್ಟಿ ನಟನೆಯಲ್ಲಿ ಮಾತ್ರವಲ್ಲ, ಮಾತುಗಾರಿಕೆಯಲ್ಲೂ ಯಾವುದೇ ಅಳುಕಿಲ್ಲ. ಕನ್ನಡ, ತುಳು, ಆಂಗ್ಲ ಭಾಷೆಯಲ್ಲಿ ನಿರರ್ಗಳವಾಗಿ, ಪ್ರಬುದ್ಧವಾಗಿ ಮಾತನಾಡುವ ನೇಹಾ, ಮಂಗಳೂರಿನ ಬೆಡಗಿ, ಬೆಂಗಳೂರಿನಲ್ಲಿ ಬಿಸಿಎ ಓದುತ್ತಿರುವ ವಿದ್ಯಾರ್ಥಿನಿ ಕೂಡಾ.
ನಗರದ ಸಿಟಿ ಸೆಂಟರ್‌ನ ಸಿನೆಪೊಲೀಸ್‌ನಲ್ಲಿ ಶನಿವಾರ, ಶರ್ಮಿಳಾ ದೇವದಾಸ್ ಕಾಪಿಕಾಡ್ರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. 
ಮಿಸ್ ಮಂಗಳೂರು ನನಗೆ ಈ ಅವಕಾಶ ನೀಡಿತು!
2014ರ ಮಿಸ್ ಮಂಗಳೂರು ಆಗಿರುವ ನೇಹಾ ಶೆಟ್ಟಿಗೆ ಈ ಪಟ್ಟವೇ ಈ ಅವಕಾಶ ಪಡೆಯಲು ಕಾರಣವಂತೆ.
‘‘ನಾನು 12ನೆ ತರಗತಿಯಲ್ಲಿರುವಾಗಲೇ ನನಗೆ ಸಿನೆಮಾದಲ್ಲಿ ನಟಿಸುವ ಅವಕಾಶ ದೊರೆಯುತಿ. ಮುಂಗಾರು ಮಳೆ 2ರಲ್ಲಿ ಮುಂಗಾರು ಮಳೆಯ ಮಳೆ ಹುಡುಗಿಗೆ ವಿಶೇಷ ಸ್ಥಾನವಿತ್ತು. ಆ ಸ್ಥಾನವನ್ನು ನಾನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ಮಾಡಿದ್ದೇನೆ. ನಾನು ಇತರರನ್ನು ನೋಡಿಯೇ ನಟನೆಯನ್ನು ಕಲಿತಿದ್ದೇನೆಯೇ ಹೊರತು, ನಟನಾ ತರಬೇತಿಯನ್ನು ಪಡೆದಿಲ್ಲ. ಮಾಡೆಲಿಂಗ್ ನನ್ನ ಹವ್ಯಾಸವಾಗಿತ್ತು. ಅದನ್ನೀಗ ನಿಲ್ಲಿಸಿದ್ದೇನೆ’’ ಎಂದು ಮಾತನಾಡುತ್ತಾ ಸಾಗುವ ನೇಹಾ ಶೆಟ್ಟಿಗೆ ಯಾವುದೇ ನಿರ್ದಿಷ್ಠ ಪಾತ್ರಗಳಲ್ಲಿ ಅಭಿನಯಿಸಬೇಕೆಂಬ ಹಂಬಲವಿಲ್ಲ. ತಾನೀಗ ಚಲನಚಿತ್ರ ಕ್ಷೇತ್ರಕ್ಕೆ ಹೊಸಬಳಾಗಿರುವ ಕಾರಣ ಎಲ್ಲಾ ಪಾತ್ರಗಳನ್ನೂ ಮಾಡ ಬಯಸುತ್ತೇನೆ ಎನ್ನುತ್ತಾರೆ.
ಮುಂಗಾರು ಮಳೆ ಚಿತ್ರ ಬಿಡುಗಡೆಯಾದ ಸಂದರ್ಭ ನಾನು ಚಿಕ್ಕವಳಾಗಿದ್ದೆ. ಅದರಲ್ಲಿ ಮೊಲ ನನಗೆ ತುಂಬಾ ಇಷ್ಟವಾಗಿತ್ತು. ಇದೀಗ ನನ್ನ ಮೊದಲ ಚಿತ್ರದಲ್ಲೆಗೋಲ್ಡನ್ ಸ್ಟಾರ್ ಜತೆ ನಟಿಸುವ ಅವಕಾಶ ದೊರಕಿದೆ. ಮುಂದೆಯೂ ಚಿತ್ರದಲ್ಲಿ ನಟಿಸಬೇಕೆಂದಿದ್ದೇನೆ. ಈಗಾಗಲೇ ಹಲವಾರು ಆಫರ್‌ಗಳು ಬಂದಿವೆ. ಆದರೆ, ನನ್ನ ಪ್ರಥಮ ಚಿತ್ರದ ಬಗ್ಗೆ ನಾನು ಬಹಳಷ್ಟು ಕುತೂಹಲಿಯಾಗಿದ್ದೇನೆ. ಹಾಗಾಗಿ ಬಂದಿರುವ ಆಫರ್‌ಗಳನ್ನು ಇನ್ನೂ ಒಪ್ಪಿಕೊಂಡಿಲ್ಲ. ತುಳು ಚಿತ್ರದಲ್ಲೂ ನಟಿಸುವ ಆಸೆ ಇದೆ. ಅವಕಾಶ ಸಿಕ್ಕರೆ ಖಂಡಿತಾ ಒಪ್ಪಿಕೊಳ್ಳುತ್ತೇನೆ ಎಂದು ನೇಹಾ ಹೇಳುತ್ತಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X