ಸಿರಿಯದ ‘ದುಃಸ್ವಪ್ನ’ವನ್ನು ಕೊನೆಗೊಳಿಸಿ : ಜಾಗತಿಕ ಶಕ್ತಿಗಳಿಗೆ ಮೂನ್ ಕರೆ

ವಿಶ್ವಸಂಸ್ಥೆ (ಅಮೆರಿಕ), ಸೆ. 26: ಸಿರಿಯದ ಬಿಕ್ಕಟ್ಟನ್ನು ಕೊನೆಗೊಳಿಸಲು ಕಠಿಣ ಶ್ರಮ ಪಡುವಂತೆ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಬಾನ್ ಕಿ ಮೂನ್ ಜಾಗತಿಕ ಶಕ್ತಿಗಳಿಗೆ ರವಿವಾರ ಕರೆ ನೀಡಿದ್ದಾರೆ.
‘‘ಅಲ್ಲಿನ ಅರಾಜಕ ಪರಿಸ್ಥಿತಿಯನ್ನು ನಿಲ್ಲಿಸಲು ಪ್ರಯತ್ನಿಸದಿರಲು ಯಾವ ಕಾರಣಗಳಿವೆ? ಎಷ್ಟು ಸಮಯ ಇಂಥ ಕ್ರೌರ್ಯ ಮುಂದುವರಿಯಲು ಈ ಪ್ರಭಾವಿ ದೇಶಗಳು ಅವಕಾಶ ನೀಡುತ್ತವೆ? ಸಿರಿಯದ ಜನರ ಈ ದುಃಸ್ವಪ್ನಕ್ಕೆ ಒಂದು ಅಂತ್ಯ ಕಾಣಿಸಲು ಕಠಿಣ ಪ್ರಯತ್ನ ನಡೆಸುವಂತೆ ಸಂಬಂಧಿತ ಎಲ್ಲರನ್ನು ನಾನು ಒತ್ತಾಯಿಸುತ್ತೇನೆ’’ ಎಂದು ಮೂನ್ ಹೇಳಿದ್ದಾರೆ.
Next Story





