Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ‘ಥ್ರೀ ಪೇರೆಂಟ್’ ತಂತ್ರಜ್ಞಾನದ ಮೂಲಕ...

‘ಥ್ರೀ ಪೇರೆಂಟ್’ ತಂತ್ರಜ್ಞಾನದ ಮೂಲಕ ಮಗುವನ್ನು ಪಡೆದ ಮುಸ್ಲಿಮ್ ದಂಪತಿ

ವಾರ್ತಾಭಾರತಿವಾರ್ತಾಭಾರತಿ27 Sept 2016 11:24 PM IST
share
‘ಥ್ರೀ ಪೇರೆಂಟ್’ ತಂತ್ರಜ್ಞಾನದ ಮೂಲಕ ಮಗುವನ್ನು ಪಡೆದ ಮುಸ್ಲಿಮ್ ದಂಪತಿ

ಲಂಡನ್,ಸೆ.27: ಲಂಡನ್ ನಿವಾಸಿ ಮುಸ್ಲಿಮ್ ದಂಪತಿಗೊಂದು ಮಗು ಜನಿಸಿದೆ. ಮಕ್ಕಳೂ ಎಲ್ಲ ಕಡೆಯೂ ಹುಟ್ಟುತ್ತಾರೆ....ಇದರಲ್ಲೇನು ವಿಶೇಷ ಎನ್ನುತ್ತೀರಾ? ಈ ಮಗು ಕ್ರಾಂತಿಕಾರಿ ‘ಥ್ರೀ ಪೇರೆಂಟ್’ ತಂತ್ರಜ್ಞಾನವನ್ನು ಬಳಸಿ ಜನಿಸಿರುವ ವಿಶ್ವದ ಮೊದಲ ಮಗು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ತಂತ್ರಜ್ಞಾನವು ಮೂವರು ಜನ್ಮದಾತರ ಡಿಎನ್‌ಎ ಬಳಕೆಯನ್ನು ಒಳಗೊಂಡಿದೆ ಮತ್ತು ಈ ನೂತನ ತಂತ್ರಜ್ಞಾನದ ಮೂಲಕ ಧರೆಗಿಳಿದಿರುವ ಇಬ್ರಾಹಿಂ ಹಸನ್‌ಗೆ ಈಗ ಐದು ತಿಂಗಳ ಪ್ರಾಯ.
 ಜೋರ್ಡಾನ್ ಮೂಲದ ಮಹಮೂದ್ ಹಸನ್ ಮತ್ತು ಇಬ್ತಿಶಾಮ್ ಶಬಾನಾ ದಂಪತಿಯ ಇಬ್ಬರು ಮಕ್ಕಳು ಎಳವೆಯಲ್ಲಿಯೇ ಕಾಯಿಲೆಗೆ ಬಲಿಯಾದ ಬಳಿಕ ವರ್ಷಗಳ ಕಾಲ ಮಗುವಿಗಾಗಿ ಹಂಬಲಿಸುತ್ತಿದ್ದರು. ಶಬಾನಾ ಬೆಳೆಯುತ್ತಿರುವ ಮಕ್ಕಳ ನರಮಂಡಳಕ್ಕೆ ಹಾನಿಯನ್ನುಂಟು ಮಾಡುವ ಮಾರಣಾಂತಿಕ ಲೀಗ್ ಸಿಂಡ್ರೋಮ್‌ಗೆ ಕಾರಣವಾಗುವ ವಂಶವಾಹಿಯನ್ನು ಹೊಂದಿದ್ದು ಎಲ್ಲ ಸಮಸ್ಯೆಗಳಿಗೆ ಮೂಲವಾಗಿತ್ತು. ಈ ವಂಶವಾಹಿಯಿಂದಾಗಿ ಸಹಜ ಗರ್ಭಧಾರಣೆಯಿಂದ ಹುಟ್ಟುವ ಮಕ್ಕಳಿಗೆ ಈ ಕಾಯಿಲೆ ಬಳುವಳಿಯಾಗಿ ಬರುತ್ತದೆ ಮತ್ತು ಅಂತಿಮವಾಗಿ ಅವುಗಳ ಜೀವವನ್ನೇ ಬಲಿ ಪಡೆದುಕೊಳ್ಳುತ್ತದೆ.
ಈ ರೋಗಕ್ಕೆ ಕಾರಣವಾಗುವ ವಂಶವಾಹಿ ಮಾನವನ ಶರೀರದ ಜೀವಕೋಶಗಳಿಗೆ ಶಕ್ತಿಯನ್ನು ಒದಗಿಸುವ ‘ಮಿಟೋಕಾಂಡ್ರಿಯಾ ’ದಲ್ಲಿನ ಡಿಎನ್‌ಎದಲ್ಲಿರುತ್ತದೆ. ಈ ಮಿಟೋಕಾಂಡ್ರಿಯಾ ಮಾನವನಿಗೆ ತಾಯಿಯಿಂದ ಬಳುವಳಿಯಾಗಿ ಬರುವ 37 ವಂಶವಾಹಿಗಳನ್ನಷ್ಟೇ ಹೊಂದಿರುತ್ತದೆ.
ಹೀಗಾಗಿ ಮಗುವೊಂದನ್ನು ಪಡೆಯಲು ಹಸನ್ ದಂಪತಿ ನ್ಯೂಯಾರ್ಕ್‌ನಲ್ಲಿರುವ ನ್ಯೂ ಹೋಪ್ ಫರ್ಟಿಲಿಟಿ ಸೆಂಟರ್‌ನ ಜಾನ್ ಝಾಂಗ್ ಮತ್ತು ಅವರ ತಂಡದ ಮೊರೆ ಹೋಗಿದ್ದರು.
ಝಾಂಗ್ ‘ಥ್ರೀ ಪೇರೆಂಟ್ ’ತಂತ್ರಜ್ಞಾನವನ್ನು ಬಳಸಿ ಮಿಟೋಕಾಂಡ್ರಿಯಾದ ಮೂಲಕ ಬರುವ ರೋಗವನ್ನು ತಪ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.
  
ಈ ಪ್ರಕ್ರಿಯೆಯನ್ನು ನಿರ್ವಹಿಸಲು ಕೆಲವು ವಿಧಾನಗಳಿವೆ. ಬ್ರಿಟನ್‌ನಲ್ಲಿ ಅನುಮತಿ ಪಡೆದಿರುವ ವಿಧಾನವನ್ನು ‘ಪ್ರೊ ನ್ಯೂಕ್ಲಿಯರ್ ಟ್ರಾನ್ಸ್‌ಫರ್’ ಎಂದು ಕರೆಯಲಾಗುತ್ತದೆ. ಇಲ್ಲಿ ತಾಯಿಯಿ ಅಂಡ ಮತ್ತು ದಾನಿಯ ಅಂಡವನ್ನು ತಂದೆಯ ವೀರ್ಯಾಣುವಿನೊಂದಿಗೆ ಫಲದಾಯಕಗೊಳಿಸಲಾಗುತ್ತದೆ. ಫಲದಾಯಕಗೊಂಡ ಅಂಡಗಳು ಭ್ರೂಣದ ಆರಂಭದ ಹಂತಗಳಾಗಿ ವಿಭಜನೆಗೊಳ್ಳುವ ಮುನ್ನ ಪ್ರತಿ ಬೀಜಾಣುವನ್ನು ಹೊರತೆಗೆಯಲಾಗುತ್ತದೆ. ದಾನಿಯ ಫಲವತ್ತುಗೊಂಡ ಅಂಡವನ್ನು ತ್ಯಜಿಸಿ ಅದರ ಜಾಗದಲ್ಲಿ ತಾಯಿಯ ಫಲವತ್ತುಗೊಂಡ ಅಂಡವನ್ನು ಪ್ರತಿಷ್ಠಾಪಿ ಸಲಾಗುತ್ತದೆ. ಆದರೆ ಮುಸ್ಲಿಮ್ ಧರ್ಮಕ್ಕೆ ಸೇರಿದ ಹಸನ್ ದಂಪತಿ ಎರಡು ಭ್ರೂಣಗಳ ವಿನಾಶಕ್ಕೆ ವಿರುದ್ಧವಾಗಿದ್ದರಿಂದ ಈ ತಂತ್ರಜ್ಞಾನ ಅವರಿಗೆ ಸೂಕ್ತವಾಗಿರಲಿಲ್ಲ.
 ಹೀಗಾಗಿ ಝಾಂಗ್ ‘ಸ್ಪಿಂಡಲ್ ನ್ಯೂಕ್ಲಿಯರ್ ಟ್ರಾನ್ಸ್‌ಫರ್’ ಎಂಬ ಇನ್ನೊಂದು ವಿಧಾನವನ್ನು ಅನುಸರಿಸಲು ನಿರ್ಧರಿಸಿದ್ದರು. ಶಬಾನಾರ ಅಂಡಗಳಲ್ಲೊಂದರ ಬೀಜಾಣುವನ್ನು ಹೊರತೆಗೆದು ಅದನ್ನು ದಾನಿಯ ಅಂಡದಲ್ಲಿ ಸೇರಿಸಿದ್ದರು. ಈ ಅಂಡದ ಸ್ವಂತದ್ದಾದ ಬೀಜಾಣುವನ್ನು ಅವರು ಮೊದಲೇ ಹೊರತೆಗೆದಿದ್ದರು. ಇದರ ಪರಿಣಾಮವಾಗಿ ರೂಪುಗೊಂಡ ಶಬಾನಾರ ನ್ಯೂಕ್ಲಿಯರ್ ಡಿಎನ್‌ಎ ಮತ್ತು ದಾನಿಯ ಮಿಟೋಕಾಂಡ್ರಿಯಲ್ ಡಿಎನ್‌ಎ ಹೊಂದಿದ್ದ ಅಂಡವನ್ನು ಹಸನ್‌ರ ವೀರ್ಯಾಣು ವಿನೊಂದಿಗೆ ಬೆರೆಸಲಾಗಿತ್ತು. ಇದರ ಮೂಲಕ ಐದು ಭ್ರೂಣಗಳು ಸೃಷ್ಟಿಯಾ ಗಿದ್ದು,ಇವುಗಳ ಪೈಕಿ ಒಂದು ಮಾತ್ರ ಸಹಜವಾದ ಬೆಳವಣಿಗೆ ಹೊಂದಿತ್ತು. ಝಾಂಗ್ ತಂಡ್ ಇದನ್ನೇ ಶಬಾನಾರ ಗರ್ಭಕೋಶದಲ್ಲಿ ಸೇರಿಸಿದ್ದು, ಒಂಬತ್ತು ತಿಂಗಳ ಬಳಿಕ ಆರೋಗ್ಯಪೂರ್ಣ ಮಗುವಿನ ಜನನವಾಗಿತ್ತು.
ಅಂದ ಹಾಗೆ ಥ್ರೀ ಪೇರೆಂಟ್ ತಂತ್ರಜ್ಞಾನದ ಇವೆರಡೂ ವಿಧಾನಗಳಿಗೆ ಅಮೆರಿಕದಲ್ಲಿ ಅನುಮತಿಯಿಲ್ಲ. ಹೀಗಾಗಿ ಝಾಂಗ್ ಸಂಪೂರ್ಣ ಪ್ರಕ್ರಿಯೆಯನ್ನು ಇದಕ್ಕೆ ಸಂಬಂಧಿಸಿದಂತೆ ಯಾವುದೇ ನಿಯಮಗಳಿಲ್ಲದ ಮೆಕ್ಸಿಕೋದಲ್ಲಿ ಪೂರ್ಣಗೊಳಿಸಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X