ಉಡುಪಿ ಮೂಲದ ಇಂಜಿನಿಯರ್ ಸಲೀಂರಿಗೆ ‘ಅಭಿಯಂತರ ಶ್ರೀ’ ಪ್ರಶಸ್ತಿ
ಕತರ್ ಕರ್ನಾಟಕ ಸಂಘದಿಂದ ಇಂಜಿನಿಯರ್ಸ್ ದಿನಾಚರಣೆ

ಕತಾರ್, ಅ.2: ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನೋತ್ಸವದ ಅಂಗವಾಗಿ ಕತರ್ ಕರ್ನಾಟಕ ಸಂಘದ ವತಿಯಿಂದ ಇಂಜಿನಿಯರ್ಸ್ ದಿನಾಚರಣೆಯನ್ನು ಕತರ್ ನ ಇಂಡಿಯನ್ ಕಲ್ಚರಲ್ ಸೆಂಟರ್ ನಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಉಡುಪಿ ಮೂಲದ ಇಂಜಿನಿಯರ್ ಸಲೀಂ ಅವರಿಗೆ ‘ಅಭಿಯಂತರ ಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕತಾರ್ ಕರ್ನಾಟಕ ಸಂಘದ ಅಧ್ಯಕ್ಷ ಮಧು, ಇಂಡಿಯನ್ ಕಲ್ಚರಲ್ ಸೆಂಟರ್ ನ ಅಧ್ಯಕ್ಷ ಗಿರೀಶ್, ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ವರದಿ: ಇಕ್ಬಾಲ್ ಮನ್ನಾ, ಉಡುಪಿ
Next Story





