ಶಾಯಿ ಎರಚಿದ ಮಹಿಳೆಗೆ ದೇವರು ಒಳ್ಳೆಯದು ಮಾಡಲಿ ಎಂದ ಕೇಜ್ರಿವಾಲ್

ಹೊಸದಿಲ್ಲಿ, ಅ.5: ದಿಲ್ಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ರ ಮೇಲೆ ಶಾಯಿ(ಮಸಿ)ಎರಚಿದ ಘಟನೆ ಮತ್ತೊಮ್ಮೆ ಬೆಳಕಿಗೆ ಬಂದಿದೆ. ಅವರು ರಾಜಸ್ಥಾನದ ಬಿಕಾನೇರ್ನಲ್ಲಿ ಛತ್ರಸಾಲ್ ಸ್ಟೇಡಿಯಂನಲ್ಲಿ ಆಡ್-ಇವನ್ ನಿಯಮಗಳ ಸಫಲತೆಯ ಕುರಿತು ಭಾಷಣ ಮಾಡುತ್ತಿದ್ದರು. ಈ ಪ್ರಕರಣದಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಭಾಷಣದ ವೇಳೆ ಶಾಯಿ ಎರಚಿದವರಿಗೆ ದೇವನು ಒಳಿತು ಮಾಡಲಿ ಎಂದು ಕೇಜ್ರಿವಾಲ್ ಪ್ರಾರ್ಥಿಸಿದ್ದಾರೆ.
ಇದಕ್ಕಿಂತ ಮೊದಲು ಆಟೊ ಚಾಲಕ ಕಪಾಲಮೋಕ್ಷ ಮಾಡಿದ್ದ:
ಕೇಜ್ರಿವಾಲ್ ಭಾಷಣ ಮಾಡುತ್ತಿದ್ದಾಗ ಮಹಿಳೆಯೊಬ್ಬರು ಇಲ್ಲಿ ಶಾಯಿ ಎರಚಿದ್ದಾಳೆ. ಈ ಮಹಿಳೆಯ ಸಿಎನ್ಜಿ ಹಗರಣದ ಆರೋಪವನ್ನುಹೊರಿಸಿ ಈ ಕೃತ್ಯವೆಸಗಿದ್ದಾಳೆ. ಕೇಜ್ರಿವಾಲ್ರನ್ನು ಅಪಮಾನಿಸುವ ಘಟನೆ ಇದಕ್ಕೂ ಮೊದಲು ನಡೆದಿವೆ. 2014ರಲ್ಲಿ ಚುನಾವಣಾ ಪ್ರಚಾರದ ವೇಳೆ ಆಟೊಚಾಲಕನೊಬ್ಬ ಕಪಾಳಮೋಕ್ಷವನ್ನು ಮಾಡಿದ್ದ. ದಿಲ್ಲಿಯ ಸುಲ್ತಾನ್ಪುರಿಯಲ್ಲಿ ಜಾಥಾ ವೇಳೆ ಈ ಘಟನೆ ನಡೆದಿತ್ತು.
ಲೋಕಸಭಾ ಚುನಾವಣೆಯ ವೇಳೆಯೂ ಶಾಯಿ ಎರಚಲಾಗಿತ್ತು:
ಲೋಕಸಭಾ ಚುನಾವಣೆಯ ವೇಳೆ ವಾರಣಾಸಿಯ ಜಾಥಾದಲ್ಲಿ ಕೇಜ್ರಿವಾಲ್ ಮೇಲೆ ಶಾಯಿ ಎರಚಲಾಗಿತ್ತು. ದಿಲ್ಲಿಯ ವಿಧಾನಸಭಾ ಚುನಾವಣಾ ಕುರಿತು ಪತ್ರಿಕಾಗೋಷ್ಠಿ ನಡೆಸುತ್ತಿದ್ದಾಗ ಬಿಜೆಪಿ ಕಾರ್ಯಕರ್ತನೆನ್ನಲಾದ ಯುವಕನೊಬ್ಬ ಅವರ ಮೇಲೆ ಶಾಯಿ ಎರಚಿದ್ದ ಎಂದು ವರದಿ ತಿಳಿಸಿದೆ.





