Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಹೊಸ ದಾಖಲೆ ನಿರ್ಮಿಸಿದ ಶ್ವೇತಭವನದ ಆನ್...

ಹೊಸ ದಾಖಲೆ ನಿರ್ಮಿಸಿದ ಶ್ವೇತಭವನದ ಆನ್ ಲೈನ್ ಮನವಿ, ಅಂದಹಾಗೆ ಆ ಮನವಿ ಯಾವುದು ಗೊತ್ತೇ ?

ವಾರ್ತಾಭಾರತಿವಾರ್ತಾಭಾರತಿ5 Oct 2016 7:49 PM IST
share
ಹೊಸ ದಾಖಲೆ ನಿರ್ಮಿಸಿದ ಶ್ವೇತಭವನದ ಆನ್ ಲೈನ್ ಮನವಿ, ಅಂದಹಾಗೆ ಆ ಮನವಿ ಯಾವುದು ಗೊತ್ತೇ ?

ವಾಶಿಂಗ್ಟನ್, ಅ. 5: ಪಾಕಿಸ್ತಾನವನ್ನು ‘ಭಯೋತ್ಪಾದಕರಿಗೆ ಸರಕಾರಿ ಆಶ್ರಯ ನೀಡುವ ದೇಶ’ವನ್ನಾಗಿ ಘೋಷಿಸಬೇಕೆಂದು ಕೋರುವ ಶ್ವೇತಭವನದ ಆನ್‌ಲೈನ್ ಮನವಿಗೆ ಇನ್ನೂ 50,000ಕ್ಕೂ ಅಧಿಕ ಸಹಿಗಳು ಸೇರ್ಪಡೆಯಾಗಿವೆ. ಆ ಮೂಲಕ, ಅದು ಅಮೆರಿಕದ ಈವರೆಗಿನ ಅತ್ಯಂತ ಜನಪ್ರಿಯ ಮನವಿ ಆಗಿದೆ.

‘‘ಪಾಕಿಸ್ತಾನವನ್ನು ಭಯೋತ್ಪಾದಕರಿಗೆ ಸರಕಾರಿ ಆಶ್ರಯ ನೀಡುವ ದೇಶವನ್ನಾಗಿ ಘೋಷಿಸಬೇಕು ಎಂಬುದಾಗಿ ನಾವು ಜನರು ಸರಕಾರವನ್ನು ಕೋರುತ್ತೇವೆ’’ ಎಂಬ ಒಕ್ಕಣೆಯ ಮನವಿಯನ್ನು ಶ್ವೇತಭವನ ಸೋಮವಾರ 6,13,830 ಸಹಿಗಳೊಂದಿಗೆ ಸಂಗ್ರಹಕ್ಕೆ ಸೇರಿಸಿತ್ತು ಹಾಗೂ ಮನವಿಯ ಪ್ರಸಾರವನ್ನು ನಿಲ್ಲಿಸಲಾಗಿದೆ ಎಂದು ಹೇಳಿತ್ತು.

ಆದರೆ, ಮಂಗಳವಾರ ಮಧ್ಯಾಹ್ನದ ವೇಳೆಗೆ, ಮನವಿಯ ಸಹಿಗಳ ಸಂಖ್ಯೆ 6,65,769ಕ್ಕೇರಿತ್ತು. ಅಂದರೆ, 51,939 ಹೊಸ ಸಹಿಗಳು ಬಿದ್ದಿದ್ದವು.
ಇದು ಈವರೆಗಿನ ಶ್ವೇತಭವನದ ಮನವಿಗಳಲ್ಲೇ ಅತ್ಯಂತ ಜನಪ್ರಿಯವಾಗಿದೆ. ಈವರೆಗಿನ ಶ್ವೇತಭವನದ ಯಾವುದೇ ಮನವಿಯ ಸಹಿಗಳ ಸಂಖ್ಯೆ 3,50,000ವನ್ನು ದಾಟಿರಲಿಲ್ಲ.

ಈವರೆಗೆ ಇದಕ್ಕೆ ಶ್ವೇತಭವನ ಯಾವುದೇ ವಿವರಣೆ ನೀಡಿಲ್ಲ.

ಆದಾಗ್ಯೂ, ಶ್ವೇತಭವನವು ಮನವಿಯ ಪ್ರಸಾರವನ್ನು ನಿಲ್ಲಿಸುವ ಮೊದಲೇ ಬಿದ್ದಿದ್ದ ಸಹಿಗಳನ್ನು ಸ್ಥೂಲ ಪರಿಶೀಲನೆಯ ಬಳಿಕ ಮನವಿಗೆ ಸೇರಿಸಿರುವ ಸಾಧ್ಯತೆಯಿದೆ.

ಹಾಗೆಯೇ ನಡೆದಿರುವುದಾದರೆ, ಮನವಿಯ ಸಹಿ ಅಭಿಯಾನದಲ್ಲಿ ವಂಚನೆ ನಡೆದಿದೆ ಎಂಬ ಆರೋಪದಲ್ಲಿ ಸತ್ಯ ಇರುವಂತೆ ಕಾಣುವುದಿಲ್ಲ.

ಇನ್ನೊಂದು ಸಾಧ್ಯತೆಯೆಂದರೆ, ಮನವಿಯ ಅಂಶವನ್ನು ಒಬಾಮ ಆಡಳಿತ ಪರಿಶೀಲನೆ ನಡೆಸಬೇಕಾದರೆ 1 ಲಕ್ಷ ಸಹಿಗಳು ಸಾಕು. ಅದಾಗಲೇ, ಸಹಿಗಳ ಸಂಖ್ಯೆ ಈ ಗಡಿ ದಾಟಿರುವುದರಿಂದ ಹೊಸ ಸಹಿಗಳನ್ನು ಪಡೆಯುವುದನ್ನು ನಿಲ್ಲಿಸಲು ಮನವಿಯನ್ನು ಸಂಗ್ರಹಾಗಾರಕ್ಕೆ ಸೇರಿಸಿರುವ ಸಾಧ್ಯತೆಯಿದೆ.

ಒಬಾಮ ಆಡಳಿತವು ನಿಗದಿತ 60 ದಿನಗಳಲ್ಲಿ ಮನವಿಗೆ ಸಂಬಂಧಿಸಿ ಅಧಿಕೃತ ಪ್ರತಿಕ್ರಿಯೆಯನ್ನು ನೀಡಬಹುದೆಂದು ನಿರೀಕ್ಷಿಸಲಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X