Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಸಹೋದರ ಧರ್ಮದ ಕುಟುಂಬದ ಕರುಣಾಜನಕ ಕಥೆ

ಸಹೋದರ ಧರ್ಮದ ಕುಟುಂಬದ ಕರುಣಾಜನಕ ಕಥೆ

ಮಗಳ ಮದುವೆಗಾಗಿ ವಿಧವೆಯ ಹೋರಾಟ

ರಶೀದ್ ವಿಟ್ಲರಶೀದ್ ವಿಟ್ಲ6 Oct 2016 1:45 PM IST
share
ಸಹೋದರ ಧರ್ಮದ ಕುಟುಂಬದ ಕರುಣಾಜನಕ ಕಥೆ

ಇದೊಂದು ಸಹೋದರ ಧರ್ಮದ ಕುಟುಂಬದ ಕರುಣಾಜನಕ ಕಥೆ. ಅವರ ಸ್ಥಿತಿಯನ್ನು ಅವರ ಮನೆಗೆ ಭೇಟಿ ನೀಡಿದ ನಾನು ಸಹಿತ ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಅವರು ಕಣ್ಣಾರೆ ಕಂಡಾಗ ತುಂಬಾ ನೋವಾಯಿತು. ಆದ್ದರಿಂದ ಇಲ್ಲಿ ನಿಮ್ಮ ಮುಂದೆ ತೆರೆದಿಟ್ಟಿದ್ದೇನೆ.

ಪತಿ ಬಿಲ್ಲವ. ಪತ್ನಿ ಬಂಟ ಸಮುದಾಯ. ಪ್ರೀತಿಸಿ ಮದುವೆಯಾದವರು. ಮಂಗಳೂರು ಮೂಲದವರು. ಪತಿ ಹಿಂದೂ ಸಂಘಟನೆಯೊಂದರ ನೇತಾರ. ಸಂಘಟನೆ ಮೂಲಕ ದ.ಕ. ಜಿಲ್ಲೆಯಲ್ಲಿ ಬಹಳಷ್ಟು ಪ್ರಸಿದ್ಧಿ ಪಡೆದವರು. ದುರದೃಷ್ಟವಶಾತ್ ಅನಾರೋಗ್ಯದಿಂದ ಕಳೆದ 9 ವರ್ಷದ ಹಿಂದೆ 42 ರ ಹರೆಯದಲ್ಲಿ ಪತಿ ಇಹಲೋಕ ತ್ಯಜಿಸಿದರು. ಆ ಮೂಲಕ ಅಕ್ಷರಶಃ ಅವರ ವಿಧವೆ ಪತ್ನಿ, ಎರಡು ಹೆಣ್ಣು ಮತ್ತು ಓರ್ವ ಗಂಡುಮಗು ಸೇರಿ ಮೂವರು ಮಕ್ಕಳು ಅನಾಥರಾದರು. ಮೊದಲೇ ಪ್ರೀತಿಸಿ ಮದುವೆಯಾದುದರಿಂದ ಗಂಡನ ಕುಟುಂಬ ಇವರನ್ನು ಹತ್ತಿರ ಮಾಡಿಕೊಂಡಿಲ್ಲ. ವಿಧವೆ ಪತ್ನಿಗೆ ತಾಯಿ ಮತ್ತು ತಂಗಿ ಬಿಟ್ಟರೆ ಸಹೋದರರಿಲ್ಲ. ಬೀದಿಗೆ ಬಂದ ಅನಾಥ ಕುಟುಂಬಕ್ಕೆ ವಿಧವೆ ಪತ್ನಿಯ ವೃದ್ಧ ತಾಯಿ ತನ್ನ ಮನೆಯ ಬದಿಯಲ್ಲಿ ಶೀಟ್ ಹಾಸಿದ ಜೋಪಡಿಯಲ್ಲಿ ವಾಸಿಸಲು ಏರ್ಪಾಡು ಮಾಡಿದ್ದಾರೆ. ಅದರಲ್ಲಿರೋದು ಒಂದು ಕೋಣೆ ಮತ್ತು ಒಂದು ಕಿಚನ್. ಸರಿಯಾಗಿ ಕಾಲು ಹಾಸಿ ಮಲಗಲೂ ಜಾಗವಿಲ್ಲ.

ವಿಷಯ ಅದಲ್ಲ. ಈಗ ಆ ಅನಾಥ ಕುಟುಂಬದ ದೊಡ್ಡ ಮಗಳಿಗೆ ಮದುವೆ ನೆಂಟಸ್ತಿಕೆ ಬಂದಿದೆ. ಹುಡುಗನ ಕಡೆಯವರು ವರದಕ್ಷಿಣೆ ರಹಿತ ಮದುವೆಗೆ ಸಿದ್ಧರಾಗಿದ್ದಾರೆ. ಬಂಟ ಸಮುದಾಯದ ಹುಡುಗ. ಇದೇ ಅಕ್ಟೋಬರ್ 19 ರಂದು ಮದುವೆ. ಆದರೆ ಹುಡುಗಿಗೆ ಚಿನ್ನದ ಕರಿಮಣಿ, ಸಣ್ಣಪುಟ್ಟ ಚಿನ್ನಾಭರಣ ಮಾಡಲೇಬೇಕು. ಮದುವೆ ದಿನದ ಹಾಲ್ ಮತ್ತು ಊಟೋಪಚಾರದ ಖರ್ಚು ಹುಡುಗಿ ಕಡೆಯವರು ಭರಿಸಲೇಬೇಕು. ಅದನ್ನು ಭರಿಸುವ ಶಕ್ತಿ ಬಡಕುಟುಂಬಕ್ಕಿಲ್ಲ. ಈಗವರು ಬಹಳಷ್ಟು ನೊಂದುಕೊಂಡಿದ್ದಾರೆ. ಹರೆಯಕ್ಕೆ ಬಂದ ಮಗಳಿಗೆ ಮದುವೆಯಾಗಬೇಕಾದರೆ ನಮ್ಮದೇ ಮನೆ ಹುಡುಗಿ ಎಂಬ ನೆಲೆಯಲ್ಲಿ ಎಲ್ಲರೂ ಕೈಜೋಡಿಸುವ ಅನಿವಾರ್ಯತೆ ಇದೆ.

ಈ ಕುಟುಂಬಕ್ಕೆ ನಮ್ಮಿಂದಾದ ಸಹಾಯ ನಾವು ಖಂಡಿತಾ ಮಾಡುತ್ತೇವೆ. ಆದರೆ ಅದು ಸಾಲದು. ಎರಡು ಕೈ ತಟ್ಟಿದರೇನೇ ಚಪ್ಪಾಳೆಯಾಗುವುದು ತಾನೆ. ನನ್ನ ಸಹೋದರ ಧರ್ಮದವರಾದ ಹಿಂದೂ ಬಾಂಧವರಲ್ಲಿ ಒಂದು ವಿನಂತಿ. ಈ ಕುಟುಂಬದ ಪರಿಸ್ಥಿತಿಯನ್ನು ಅರಿತು ನಿಮ್ಮ ಕಿಂಚಿತ್ ಕಾಣಿಕೆ ನೀಡಿ. ಹನಿ ಹನಿಗೂಡಿ ಹಳ್ಳ ಮಾಡೋಣ. ಅಸಹಾಯಕ ಸಹೋದರಿ ಮದುಮಗಳ ಮೊಗದಲ್ಲಿ ಸಂತೋಷ ಅರಳಿಸೋಣ. ನಿಮಗೆ ಸಹಾಯ ಮಾಡಲು ಮನಸ್ಸಿದ್ದರೆ ನನ್ನ ಮೊಬೈಲ್ ನಂಬ್ರಕ್ಕೆ ಸಂಪರ್ಕಿಸಿ. ನಾನು ಅವರನ್ನು ನಿಮಗೆ ಪರಿಚಯಿಸುತ್ತೇನೆ. ಸ್ವಾಭಿಮಾನಿ ಕುಟುಂಬವಾದುದರಿಂದ ನಾನಿಲ್ಲಿ ಅವರ ಹೆಸರು ಮತ್ತು ವಿಳಾಸವನ್ನು ಗೌಪ್ಯವಾಗಿಟ್ಟಿದ್ದೇನೆ.

ರಶೀದ್ ವಿಟ್ಲ. (+91 9741993313)
ಅಥವಾ
(ಹನೀಫ್ ಹಾಜಿ) +91 9980880860 

share
ರಶೀದ್ ವಿಟ್ಲ
ರಶೀದ್ ವಿಟ್ಲ
Next Story
X