ಕಟೀಲು ದೇವಸ್ಥಾನದಲ್ಲಿ ಅಗ್ನಿ ಅನಾಹುತ
ಮಂಗಳೂರು,ಅ.9:ಕಟೀಲು ದೇವಸ್ಥಾನದಲ್ಲಿ ಅಗ್ನಿ ಅನಾಹುತ ಸಂಭವಿಸಿ ಸುಮಾರು 1 ಲಕ್ಷ ರೂ ನಷ್ಟವಾಗಿದೆ.
ರಾತ್ರಿ ರಂಗಪೂಜೆಯ ಸಂದರ್ಭದಲ್ಲಿ ಪಂಚಕಜ್ಜಾಯ ಇರುವ ರೂಮಿನ ಸನಿಹದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಬೆಂಕಿಯಲ್ಲಿ ಪಂಚಕಜ್ಜಾಯ , ದೇವಸ್ಥಾನದ ಹೆಂಚುಗಳು ಅಗ್ನಿಗಾಹುತಿಯಾಗಿದೆ. ಕದ್ರಿ ಅಗ್ನಿಶಾಮಕ ದಳದ ಎಎಸ್ಎಸ್ಓ ಸ್ಟೀಪನ್ ಡಿಸಿಲ್ವ ನೇತೃತ್ವದಲ್ಲಿ ಬೆಂಕಿ ನಂದಿಸುವ ಕಾರ್ಯ ನಡೆಯಿತು.
Next Story





