Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸೋಷಿಯಲ್ ಮೀಡಿಯಾ
  3. ಬಾಳಿಗಾ ರಕ್ತವನ್ನು ಮೆತ್ತಿರುವ ಈ...

ಬಾಳಿಗಾ ರಕ್ತವನ್ನು ಮೆತ್ತಿರುವ ಈ ಕಂಪೌಂಡು ಗೋಡೆಯನ್ನು ಶುದ್ದಿಗೊಳಿಸುವುದು ಹೇಗೆ ?

ಬ್ರಿಗೇಡ್ ಬಾಯ್ ಗಳು ನಿಮ್ಮ ನಾಯಕನನ್ನು ಪ್ರಶ್ನಿಸಿ

ಮುನೀರ್ ಕಾಟಿಪಳ್ಳಮುನೀರ್ ಕಾಟಿಪಳ್ಳ11 Oct 2016 11:20 AM IST
share
ಬಾಳಿಗಾ ರಕ್ತವನ್ನು ಮೆತ್ತಿರುವ ಈ ಕಂಪೌಂಡು ಗೋಡೆಯನ್ನು ಶುದ್ದಿಗೊಳಿಸುವುದು ಹೇಗೆ ?

ಇದು ಯುವ ಬ್ರಿಗೇಡ್ ನೇತಾರರಿಂದ ಕೊಲೆಗೀಡಾದ RTI ಕಾರ್ಯಕರ್ತ ವಿನಾಯಕ ಬಾಳಿಗಾ ನೆತ್ತರು ಅಂಟಿದ ಕಂಪೌಂಡು ಗೋಡೆ. ಬಾಳಿಗಾ ಅವರ ಮನೆಯ ಮುಂದಿನ ರಸ್ತೆಯಲ್ಲಿ ಈ ರಕ್ತ ಅಂಟಿದ ಗೋಡೆ ಈಗಲೂ ನಡೆದ ಕ್ರೌರ್ಯಕ್ಕೆ, ಬ್ರಿಗೇಡ್ ಬಾಯ್ ಗಳ ಮಾನಸಿಕ ಗಲೀಜಿಗೆ ಸಾಕ್ಷಿಯಾಗಿ ನಿಂತಿದೆ.

ಈಗ ಬಾಳಿಗಾ ಕೊಲೆಯ ಆರೋಪ ಹೊತ್ತವರು, ಆರೋಪ ಹೊತ್ತವರ ಬೆಂಬಲಕ್ಕೆ ಬಹಿರಂಗವಾಗಿ ನಿಂತವರು #ಕನಕ_ನಡೆ ಎಂದು ಉಡುಪಿಗೆ ಹೊರಟಿದ್ದಾರೆ. ದಲಿತರ ನಾಯಕತ್ವದಲ್ಲಿ ನಡೆದ #ಚಲೋಉಡುಪಿ ಸಮಾವೇಶದಿಂದ ಗಲೀಜುಗೊಂಡ ಉಡುಪಿಯನ್ನು ಗುಡಿಸಿ ಸ್ವಚ್ಚಗೊಳಿಸುವುದು ಬ್ರಿಗೇಡ್ ಬಾಯ್ ಗಳ ಉದ್ದೇಶವಂತೆ.

ಚಲೋಉಡುಪಿಯ ವಿಚಾರಗಳಿಂದ "ಅಶುದ್ದಿ"ಗೊಂಡ ಉಡುಪಿಯನ್ನು ಸ್ವಚ್ಚಗೊಳಿಸಲು ಹೊರಟ ಸೂಲಿಬೆಲೆ ಬ್ರಿಗೇಡ್ , ಸ್ವತಹ ತಮ್ಮವರಿಂದಲೇ ಹರಿದ ಬಾಳಿಗಾ ರಕ್ತವನ್ನು ಮೆತ್ತಿಕೊಂಡಿರುವ ಈ ಕಂಪೌಂಡು ಗೋಡೆಯನ್ನು ಶುದ್ದಿಗೊಳಿಸುವುದು ಹೇಗೆ ? ಉಡುಪಿಗೆ ಹೋಗುವಾಗ ದಾರಿ ಮದ್ಯೆ ಮಂಗಳೂರು ಸಿಗುತ್ತದೆ. ನಗರ ಮದ್ಯದಲ್ಲೇ ಬಾಳಿಗಾ ರಕ್ತ ಮೆತ್ತಿದ ಗೋಡೆಯು ಸಿಗುತ್ತದೆ.

ಉಡುಪಿಯಲ್ಲಿ ಪೊರಕೆ ಹಿಡಿಯುವ ಮುನ್ನ ಬ್ರಿಗೇಡ್ ಬಣದ ಹುಡುಗರು ಈ ಗೋಡೆಯನ್ನೊಮ್ಮೆ ಸಂದರ್ಶಿಸಿ, ಆ ಗೋಡೆಯ ಮುಂದಿನ ಮನೆಯಲ್ಲಿ ಕಣ್ಣೀರು ಸುರಿಸುತ್ತಾ ಕೂತಿರುವ ಬಾಳಿಗಾ ಅವರ ವಯೋವೃದ್ದ ಹೆತ್ತವರ ಮುಖವನ್ನೊಮ್ಮೆ ನೋಡಿ. ಬಾಳಿಗಾ ಕೊಲೆಯ ಆರೋಪಿಯನ್ನು ಬಿಡಿಸಿಕೊಳ್ಳಲು ಜೈಲಿನ ಬಾಗಿಲಿಗೆ ತೆರಳಿದ ನಿಮ್ಮ ನಾಯಕನನ್ನೊಮ್ಮೆ ಪ್ರಶ್ನಿಸಿ. ನಂತರ ಪೊರಕೆ ಹಿಡಿದು ಯಾರನ್ನು, ಯಾವುದನ್ನು ಗುಡಿಸಬೇಕು, ಸ್ಚಚ್ಚಗೊಳಿಸಬೇಕು ಎಂದು ನಿರ್ಧರಿಸಿ.

share
ಮುನೀರ್ ಕಾಟಿಪಳ್ಳ
ಮುನೀರ್ ಕಾಟಿಪಳ್ಳ
Next Story
X