ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಉಳ್ಳಾಲ ದರ್ಗಾಕ್ಕೆ ಭೇಟಿ
ಮಂಗಳೂರು, ಅ. 15: ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು ಶನಿವಾರ ಇತಿಹಾಸ ಪ್ರಸಿದ್ಧ ಉಳ್ಳಾಲ ಸಯ್ಯದ್ ಮದನಿ ದರ್ಗಾಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಉಳ್ಳಾಲ ದರ್ಗಾ ಅಧ್ಯಕ್ಷ ರಶೀದ್ ಹಾಜಿ ಅವರು ದೇವೇಗೌಡರನ್ನು ದರ್ಗಾಕ್ಕೆ ಬರಮಾಡಿಕೊಂಡು ಸನ್ಮಾನಿಸಿ ಗೌರವಿಸಿದರು. ಮಧ್ಯಾಹ್ನದ ಊಟವನ್ನು ದೇವೇಗೌಡರು ದರ್ಗಾದಲ್ಲೇ ಸ್ವೀಕರಿಸಿ ನಗರಕ್ಕೆ ಹಿಂದಿರುಗಿದರು.
ಬಿ.ಎಮ್ ಫಾರೂಕ್, ಮುಮ್ತಾಝ್ ಅಲಿ, ಸಯ್ಯದ್ ಮದನಿ ದರ್ಗಾ ಕಮಿಟಿಯ ಉಪಾಧ್ಯಕ್ಷ ಯು.ಕೆ ಮೋನು ಕೋಟೆಪುರ,ಬಾವ ಮುಹಮ್ಮದ್, ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ತ್ವಾಹ, ಕೋಶಾಧಿಕಾರಿ ಯು.ಕೆ ಇಲ್ಯಾಸ್, ಜತೆ ಕಾರ್ಯದರ್ಶಿ ನೌಷಾದ್ ಮೇಲಂಗಡಿ, ಆಝಾದ್ ಇಸ್ಮಾಯಿಲ್, ಝಫರುಲ್ಲಾ ಖಾನ್, ವಿಶ್ವನಾಥ್ ಪಂಡಿತ್, ಅಝೀಝ್ ಮಲಾರ್, ಗಂಗಾಧರ್ ಉಳ್ಳಾಲ್,ಮುಹಮ್ಮದ್ ಕುಂಞಿ, ಹೈದರ್ ಪರ್ತಿಪ್ಪಾಡಿ, ಜೆ. ಮುಹಮ್ಮದ್ ಹಾಗೂ ದರ್ಗಾ ಸಮಿತಿ ಮತ್ತು ಟ್ರಸ್ಟ್ ಸದಸ್ಯರು ಉಪಸ್ಥಿತರಿದ್ದರು.
Next Story