ಡಿ.3: ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ
ಉಪ್ಪಿನಂಗಡಿ,ಅ.15: ದಿ.ವೆಂಕಟರಮಣ ಕಾರಂತರ ಸ್ಮರಣಾರ್ಥ ನಾಲ್ಕು ವರ್ಷಗಳಿಂದ ಶ್ರೀದುರ್ಗಾ ಮಿತ್ರವೃಂದದ ವತಿಯಿಂದ ಪೆರಿಯಡ್ಕದ ಹೊಸಗದ್ದೆಯಲ್ಲಿ ನಡೆಯುತ್ತಿರುವ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾಟವು ಈ ಬಾರಿ ಡಿ.3ರಂದು ನಡೆಯಲಿದೆ.
ವಿಜೇತ ತಂಡಗಳಿಗೆ ಪ್ರಥಮ (11,111 ರೂ. ಹಾಗೂ ಟ್ರೋಫಿ), ದ್ವಿತೀಯ (8,111 ರೂ. ಹಾಗೂ ಟ್ರೋಫಿ), ತೃತೀಯ (6,111 ರೂ. ಹಾಗೂ ಟ್ರೋಫಿ) ಮತ್ತು ಚತುರ್ಥ ಬಹುಮಾನ (4,111 ರೂ. ಮತ್ತು ಟ್ರೋಫಿ) ಅಲ್ಲದೆ ಅತ್ಯುತ್ತಮ ದಾಳಿಗಾರ, ಹಿಡಿತಗಾರ, ಆಲ್ ರೌಂಡರ್ಗೆ ವಿಶೇಷ ಬಹುಮಾನ ನೀಡಲಾಗುವುದು.
Next Story