ಅ.22ರಂದು ಯೆನೆಪೋಯ ವಿ.ವಿ. ಘಟಿಕೋತ್ಸವ: ಭಾರತ ರತ್ನ ಡಾ. ಸಿ.ಎನ್.ಆರ್. ರಾವ್ಗೆ ಗೌರವ ಡಾಕ್ಟರೇಟ್
![ಅ.22ರಂದು ಯೆನೆಪೋಯ ವಿ.ವಿ. ಘಟಿಕೋತ್ಸವ: ಭಾರತ ರತ್ನ ಡಾ. ಸಿ.ಎನ್.ಆರ್. ರಾವ್ಗೆ ಗೌರವ ಡಾಕ್ಟರೇಟ್ ಅ.22ರಂದು ಯೆನೆಪೋಯ ವಿ.ವಿ. ಘಟಿಕೋತ್ಸವ: ಭಾರತ ರತ್ನ ಡಾ. ಸಿ.ಎನ್.ಆರ್. ರಾವ್ಗೆ ಗೌರವ ಡಾಕ್ಟರೇಟ್](https://www.varthabharati.in/sites/default/files/images/articles/2016/10/19/CNR_Rao_PTI_360.jpg)
ಮಂಗಳೂರು, ಅ.19: ಯೆನೆಪೋಯ ವಿಶ್ವವಿದ್ಯಾನಿಲಯದ 6ನೆ ಘಟಿಕೋತ್ಸವ ಅ. 22ರಂದು ನಡೆಯಲಿದ್ದು, ಅಂದು ರಾಷ್ಟ್ರೀಯ ಸಂಶೋಧನಾ ಪ್ರೊಫೆಸರ್ ಹಾಗೂ ಭಾರತ ರತ್ನ ಪ್ರೊ. ಡಾ. ಸಿ.ಎನ್.ಆರ್. ರಾವ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುವುದು.
ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಯೆನೆಪೋಯ ವಿವಿ ರಿಜಿಸ್ಟ್ರಾರ್ ಡಾ. ಜಿ. ಶ್ರೀಕುಮಾರ್ ಮೆನನ್, ಯೆನೆಪೋಯ ವಿವಿಯ ಆವರಣದ ಯೆನ್ಡ್ಯುರೆನ್ಸ್ ಸಭಾಂಣದಲ್ಲಿ ಮಧ್ಯಾಹ್ನ 12 ಗಂಟೆಗೆ ಘಟಿಕೋತ್ಸವ ನಡೆಯಲಿದೆ ಎಂದರು.
ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಪ್ರೊ. ಡಾ. ಸಿ.ಎನ್.ಆರ್. ರಾವ್ರವರು ಜವಾಹರಲಾಲ್ ನೆಹರೂ ಆಧುನಿಕ ವೈಜ್ಞಾನಿಕ ಸಂಶೋಧನಾ ಕೇಂದ್ರ, ಬೆಂಗಳೂರು ಇದರ ಲೈನಸ್ ಪಾಲಿಂಗ್ ಸಂಶೋಧನಾ ಕೇಂದ್ರದ ಪ್ರೊಫೆಸರ್ ಆಗಿದ್ದಾರೆ. ಹಲವಾರು ಡಾಕ್ಟರೇಟ್ ಪದವಿ, ಪ್ರಶಸ್ತಿಗಳನ್ನು ಪಡೆದಿರುವ ಅವರಿಗೆ ಕಾರ್ಯಕ್ರಮದಲ್ಲಿ 73ನೆ ಗೌರವ ಡಾಕ್ಟರೇಟ್ ಯೆನೆಪೋಯ ವಿ.ವಿ. ವತಿಯಿಂದ ಪ್ರದಾನ ಮಾಡಲಾಗುವುದು. ಕಾರ್ಯಕ್ರಮದಲ್ಲಿ ಭಾರತ ಸರಕಾರದ ಬಯೋ ಟೆಕ್ನಾಲಜಿ ವಿಭಾಗದ ಕಾರ್ಯದರ್ಶಿ ಡಾ.ಕೆ. ವಿಜಯ ರಾಘವನ್ ಕೂಡಾ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕುಲಪತಿ ಯೆನೆಪೋಯ ಅಬ್ದುಲ್ಲಾ ಕುಂಞಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾರಂಭದಲ್ಲಿ ಡಾಕ್ಟರಲ್ ಫೆಲೋಶಿಪ್, ಡಾಕ್ಟರೇಟ್, ಸ್ನಾತಕೋತ್ತರ ಡಿಪ್ಲೊಮಾ, ಸ್ನಾತಕೋತ್ತರ ಹಾಗೂ ಪದವಿ ಪಡೆಯಲು ಅರ್ಹರಾದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು ಎಂದು ಅವರು ಹೇಳಿದರು.
ಗೋಷ್ಠಿಯಲ್ಲಿ ಡಾ. ಅರುಣ್ ಭಾಗವತ್, ಡಾ. ನಂದೀಶ್ ಉಪಸ್ಥಿತರಿದ್ದರು.